ಶಬರಿಮಲೆ ಚಿನ್ನದ ಹಗರಣ: ಟಿಡಿಬಿ ಮಾಜಿ ಅಧಿಕಾರಿ ಬಂಧನ

ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಹೇಳಿದ್ದ ಕೇರಳ ಹೈಕೋರ್ಟ್, ಶ್ರೀಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೇವಲ ಎರಡು ವಾರಗಳ ನಂತರ ಅವರ ಬಂಧನವಾಗಿದೆ.
Sabarimala
ಶಬರಿಮಲೆ online desk
Updated on

ನವದೆಹಲಿ: ಶಬರಿಮಲೆ ಚಿನ್ನ ನಷ್ಟ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಬುಧವಾರ ಟಿಡಿಬಿಯ ಮಾಜಿ ಆಡಳಿತ ಅಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಲಾಗಿದೆ.

ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಹೇಳಿದ್ದ ಕೇರಳ ಹೈಕೋರ್ಟ್, ಶ್ರೀಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೇವಲ ಎರಡು ವಾರಗಳ ನಂತರ ಅವರ ಬಂಧನವಾಗಿದೆ. ಶ್ರೀ ಕುಮಾರ್ ಜೊತೆಗೆ, ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಕಾರ್ಯದರ್ಶಿ ಎಸ್. ಜಯಶ್ರೀ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಹ ತಿರಸ್ಕರಿಸಲಾಗಿದೆ.

ಇಬ್ಬರು ಆರೋಪಿಗಳಿಗೆ ಬಂಧನ ಪೂರ್ವ ಜಾಮೀನು ನೀಡಿದರೆ, ದೇವಾಲಯದಿಂದ ಚಿನ್ನ ಕಳೆದುಹೋದ ಸಂಪೂರ್ಣ ತನಿಖೆ ಕುಸಿಯುತ್ತದೆ ಮತ್ತು ಪರಿಣಾಮಕಾರಿ ತನಿಖೆ "ಅರ್ಥಹೀನವಾಗುತ್ತದೆ" ಎಂದು ನ್ಯಾಯಾಲಯ ಅರ್ಜಿ ತಿರಸ್ಕರಿಸುವಾಗ ಹೇಳಿತ್ತು.

ಶ್ರೀಕುಮಾರ್ ಮತ್ತು ಜಯಶ್ರೀ ಇಬ್ಬರೂ ಚಿನ್ನದ ಹೊದಿಕೆಯ ಬಗ್ಗೆ ಮಾಹಿತಿಯುಳ್ಳವರಾಗಿದ್ದರು. ಆ ಫಲಕಗಳನ್ನು ತಾಮ್ರದಿಂದ ಮಾಡಲ್ಪಟ್ಟಿದೆ ಎಂದು ಉಲ್ಲೇಖಿಸುವ ದಾಖಲೆಗಳಿಗೆ ಸಹಿ ಹಾಕಿದ್ದರು ಎಂದು ನ್ಯಾಯಾಲಯ ಹೇಳಿತ್ತು.

ನ್ಯಾಯಾಲಯ ನೇಮಿಸಿದ ವಿಶೇಷ ತನಿಖಾ ತಂಡ (SIT) ದ್ವಾರಪಾಲಕ (ರಕ್ಷಕ ದೇವರು) ವಿಗ್ರಹಗಳ ಚಿನ್ನದ ಹೊದಿಕೆಯ ಫಲಕಗಳು ಮತ್ತು ಶ್ರೀಕೋವಿಲ್ (ಗರ್ಭಗುಡಿ) ಬಾಗಿಲು ಚೌಕಟ್ಟುಗಳಿಂದ ಚಿನ್ನ ಕಳೆದುಹೋದ ಪ್ರಕರಣಗಳ ತನಿಖೆ ನಡೆಸುತ್ತಿದೆ.

Sabarimala
ಶಬರಿಮಲೆ ವಿವಾದ :ಇಬ್ಬರು ಮಹಿಳಾ ಭಕ್ತಾಧಿಗಳ ಬಂಧನ, ಟಿಡಿಬಿ, ಮತ್ತು ಸರ್ಕಾರದಿಂದ ಪರಿಸ್ಥಿತಿ ಪರಮಾರ್ಶೆ

ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಏಳನೇ ವ್ಯಕ್ತಿ ಶ್ರೀಕುಮಾರ್ ಆಗಿದ್ದಾರೆ. ಆತನಿಗಿಂತ ಮೊದಲು, ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಟಿಡಿಬಿಯ ಮಾಜಿ ಅಧ್ಯಕ್ಷರಾದ ಎನ್ ವಾಸು ಮತ್ತು ಎ ಪದ್ಮಕುಮಾರ್ ಸೇರಿದಂತೆ ಆರು ಜನರನ್ನು ಎರಡು ಪ್ರಕರಣಗಳಲ್ಲಿ ಬಂಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com