Video-'ಆಕೆ ನರಕಕ್ಕೆ ಹೋಗಲಿ, ನಿತೀಶ್ ಕುಮಾರ್ ಕ್ರಮ ಸರಿ ಇದೆ': ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂನ್ನು ಸಮರ್ಥಿಸಿಕೊಂಡ BJP ಸಚಿವ ಗಿರಿರಾಜ್ ಸಿಂಗ್

ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
Central minister Girirraj Singh
ಕೇಂದ್ರ ಸಚಿವ ಗಿರಿರಾಜ್ ಸಿಂಗ್
Updated on

ನವದೆಹಲಿ: ನೇಮಕಾತಿ ಪತ್ರ ಪಡೆಯಲು ಬಂದ ಮುಸ್ಲಿಂ ವೈದ್ಯೆಯ ಹಿಜಾಬ್ ಹಿಡಿದೆಳೆದ ಬಿಹಾರ ಸಿಎಂ ನಿತೀಶ್ ಕುಮಾರ್ ಪರ ಕೇಂದ್ರ ಸಚಿವ ಗಿರಿರಾದ್ ಸಿಂಗ್ ಮಾತನಾಡಿದ್ದಾರೆ.

ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮೊನ್ನೆ ಸೋಮವಾರ ಪಾಟ್ನಾದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿಸಿದ ಸಚಿವ ಗಿರಿರಾಜ್ ಸಿಂಗ್, ಘಟನೆಯಿಂದ ಉಂಟಾದ ಆಘಾತದಿಂದಾಗಿ ಮಹಿಳೆ ಕೆಲಸ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಿದಾಗ ಪರವಾಗಿಲ್ಲ, ಅವರು ನರಕಕ್ಕೆ ಹೋಗಬಹುದು ಎಂದು ಉಡಾಫೆಯ ಉತ್ತರ ಕೊಟ್ಟಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಯಾರಾದರೂ ನೇಮಕಾತಿ ಪತ್ರವನ್ನು ಪಡೆಯಲು ಹೋದರೆ, ಅವರು ತಮ್ಮ ಮುಖವನ್ನು ತೋರಿಸಬೇಕಲ್ಲವೇ? ಇದು ಯಾವುದೋ ಇಸ್ಲಾಮಿಕ್ ದೇಶವೇ? ನಿತೀಶ್ ಕುಮಾರ್ ರಕ್ಷಕರಾಗಿ ವರ್ತಿಸಿದ್ದಾರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.

Central minister Girirraj Singh
Hijab ವಿವಾದ: 'ಅಪಾರ್ಥ ಬೇಡ.. ನಿತೀಶ್ ಕುಮಾರ್ ತಂದೆ ಸ್ವರೂಪ'; ಬಿಹಾರ ಮುಸ್ಲಿಂ ಸಚಿವ ಸ್ಪಷ್ಟನೆ

ನೀವು ಪಾಸ್‌ಪೋರ್ಟ್ ಪಡೆಯಲಿದ್ದರೆ, ನಿಮ್ಮ ಮುಖವನ್ನು ತೋರಿಸುವುದಿಲ್ಲವೇ, ನೀವು ವಿಮಾನ ನಿಲ್ದಾಣಕ್ಕೆ ಹೋದಾಗ, ನಿಮ್ಮ ಮುಖವನ್ನು ತೋರಿಸುವುದಿಲ್ಲವೇ, ಜನರು ಪಾಕಿಸ್ತಾನ ಮತ್ತು ಇಂಗ್ಲಿಷ್‌ಟನ್ ಬಗ್ಗೆ ಮಾತನಾಡುತ್ತಾರೆ, ಆದರೆ ಇದು ಭಾರತ. ಭಾರತದಲ್ಲಿ, ಕಾನೂನಿನ ನಿಯಮ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.

ನೇಮಕಾತಿಯನ್ನು ತಿರಸ್ಕರಿಸಿದ ಮಹಿಳೆಯ ಬಗ್ಗೆ ಕೇಳಿದಾಗ, ಆಕೆ ಕೆಲಸ ಸ್ವೀಕರಿಸಬೇಕೆ, ಅಥವಾ ನಿರಾಕರಿಸಿ ನರಕಕ್ಕೆ ಹೋಗಬೇಕೆ ಎಂಬುದು ಆಕೆಯ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.

ನನಗೆ ಮಾಹಿತಿಯಿಲ್ಲ

ಘಟನೆಯಿಂದಾಗಿ ವೈದ್ಯರು ನೇಮಕಾತಿ ಪತ್ರ ತಿರಸ್ಕರಿಸಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ.

ನನಗೆ ಅಂತಹ ಯಾವುದೇ ಮಾಹಿತಿ ಇಲ್ಲ, ನಮ್ಮ ಮುಖ್ಯಮಂತ್ರಿಗಳು ಮಹಿಳೆಯರನ್ನು ಯಾವಾಗಲೂ ಗೌರವಿಸುತ್ತಾರೆ, ಅವರು ಮಾತೃ ಶಕ್ತಿಯ ಸಬಲೀಕರಣಕ್ಕಾಗಿ ಅಪಾರ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆರೋಗ್ಯ ಸಚಿವರು ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡರು.

ಕೋಲ್ಕತ್ತಾದ ವೈದ್ಯೆ ನುಸ್ರತ್ ಪರ್ವೀನ್, ಸೋಮವಾರ ಮುಖ್ಯಮಂತ್ರಿ ಸಚಿವಾಲಯದಲ್ಲಿ ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಲು ಬಂದಿದ್ದ ಹತ್ತು ಆಯುಷ್ ವೈದ್ಯರಲ್ಲಿ ಒಬ್ಬರು.

ಪರ್ವೀನ್ ಸರದಿ ಬಂದಾಗ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈದ್ಯೆಯ ಹಿಜಾಬ್ ಕಡೆ ಬೆರಳು ತೋರಿಸಿ ಇದೇನು ಎಂದು ಕೇಳಿದರು. ನಂತರ ಅದನ್ನು ತೆಗೆದು ವೈದ್ಯೆಯ ಮುಖ ತೋರಿಸಿದರು.

ಈ ಘಟನೆಯು ಜಾಗತಿಕವಾಗಿ ಟೀಕೆಗೆ ಗುರಿಯಾಗಿದೆ, ಅನೇಕರು ನಿತೀಶ್ ಕುಮಾರ್ ಆರ್‌ಎಸ್‌ಎಸ್ ಕಾರ್ಯಸೂಚಿಗೆ ಅನುಗುಣವಾಗಿ ಮುಸ್ಲಿಂ ಸಂಪ್ರದಾಯಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Central minister Girirraj Singh
ನಿತೀಶ್ ಕುಮಾರ್ ವಿವಾದ: ನೇಮಕಾತಿ ಪತ್ರ ಪಡೆಯಲು ಬಂದ Muslim ವೈದ್ಯೆಯ hijab ಗೆ ಕೈ ಹಾಕಿದ ಸಿಎಂ; ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ| video

ಹಲವು ವಿರೋಧ ಪಕ್ಷದ ನಾಯಕರು ಗಿರಿರಾಜ್ ಸಿಂಗ್ ಮಾಡಿದ ಹೇಳಿಕೆಗಳನ್ನು ಅಗ್ಗದ ಮತ್ತು ಕೊಳಕು ಮನಸ್ಥಿತಿ ಎಂದು ಟೀಕಿಸಿದರು.

ಬಿಹಾರದ ಕತಿಹಾರ್‌ನ ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಸಚಿವರನ್ನು ಅಗ್ಗದ ಮನಸ್ಥಿತಿ ಹೊಂದಿರುವ ವ್ಯಕ್ತಿ ಎಂದು ಕರೆದರು.

ಇವರು ತೃತೀಯ ದರ್ಜೆಯ ಜನರು, ಅವರಿಗೆ ಅಗ್ಗದ ಮನಸ್ಥಿತಿ ಇದೆ. ನಮ್ಮ ದೇಶ ಜಾತ್ಯತೀತತೆಯ ಅರ್ಥ ಅವರಿಗೆ ಗೊತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರು. ನಿತೀಶ್ ಕುಮಾರ್ ಮಾಡಿದ್ದು ನಾಚಿಕೆಗೇಡಿನ ಮತ್ತು ದುಃಖಕರ ಸಂಗತಿ ಎಂದು ಅನ್ವರ್ ಹೇಳಿದರು.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕಿ ಇಲ್ತಿಜಾ ಮುಫ್ತಿ ಕೂಡ ಗಿರಿರಾಜ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು.

Central minister Girirraj Singh
Hijab ವಿವಾದ ಬೆನ್ನಲ್ಲೇ ಸಿಎಂ ವಿರುದ್ಧ ದೂರು ದಾಖಲು: ಬೆದರಿಕೆ ಹಿನ್ನಲೆ ನಿತೀಶ್ ಕುಮಾರ್‌ ಭದ್ರತೆ ಹೆಚ್ಚಳ!

ಈ ವ್ಯಕ್ತಿಯ ಕೊಳಕು ಬಾಯಿಯನ್ನು ಸ್ವಚ್ಛಗೊಳಿಸಲು ಫಿನೈಲ್ ಮಾತ್ರ ಕೆಲಸ ಮಾಡುತ್ತದೆ. ನೀವು ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರ ಹಿಜಾಬ್‌ಗಳು ಮತ್ತು ನಖಾಬ್‌ಗಳನ್ನು ಮುಟ್ಟಲು ಧೈರ್ಯ ಮಾಡಬೇಡಿ. ನಾವು ಮುಸ್ಲಿಂ ಮಹಿಳೆಯರು ನೀವು ಮತ್ತು ನಿಮ್ಮಂತಹವರು ಮುಂಬರುವ ಎಲ್ಲಾ ಸಮಯದಲ್ಲೂ ನೆನಪಿನಲ್ಲಿಟ್ಟುಕೊಳ್ಳುವ ಪಾಠವನ್ನು ಕಲಿಸುವ ಮೂಲಕ ನಿಮ್ಮನ್ನು ಸರಿಪಡಿಸುತ್ತೇವೆ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಎನ್ ಸಿಪಿ (ಎಸ್ ಪಿ) ಸಂಸದೆ ಫೌಜಿಯಾ ಖಾನ್ ಕೂಡ ನಿತೀಶ್ ಕುಮಾರ್ ಮತ್ತು ಗಿರಿರಾಜ್ ಸಿಂಗ್ ಅವರನ್ನು ಟೀಕಿಸಿದರು.

ಜವಾಬ್ದಾರಿಯುತ ಜನರು ಇಂತಹ ಕೃತ್ಯಗಳನ್ನು ಮಾಡುವುದು ತುಂಬಾ ದುಃಖಕರ, ಇದು ಜಗತ್ತಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಮಹಿಳೆ ತನ್ನ ದೇಹವನ್ನು ಎಷ್ಟರ ಮಟ್ಟಿಗೆ ಮುಚ್ಚುತ್ತಾಳೆ ಎಂಬುದು ಆಕೆಯ ವೈಯಕ್ತಿಕ ನಿರ್ಧಾರ ಮತ್ತು ಹಿಜಾಬ್ ತೆಗೆಯುವುದು ಮಹಿಳೆಯ ವಸ್ತ್ರ ಕಳಚಿದಂತಿದೆ. ನಿತೀಶ್ ಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಿತ್ತು. ಆದರೆ ಅದರ ಬದಲು ಅವರು ನಡೆದದ್ದು ಸರಿ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಿರಿರಾಜ್ ಸಿಂಗ್ ಅವರ ಹೇಳಿಕೆಗಳನ್ನು ನೋಡಿದರೆ ಅವರಿಗೆ ಮಾನಸಿಕ ಅಸ್ವಸ್ಥತೆಯಿದೆ ಎಂದು ಕಾಣುತ್ತದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com