'ತೂ' ಎಂದಿದ್ದಕ್ಕೇ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ, Video Viral

ಬೆಡ್‌ನಲ್ಲಿ ಮಲಗಿದ್ದ ರೋಗಿಯೊಬ್ಬನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ವೈದ್ಯನೋರ್ವ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
physically assaulting
ರೋಗಿ ಮೇಲೆ ಹಲ್ಲೆ ಮಾಡಿದ ವೈದ್ಯ
Updated on

ಶಿಮ್ಲಾ: ಚಿಕಿತ್ಸೆ ನೀಡಬೇಕಾದ ವೈದ್ಯನೇ ರೋಗಿಗೆ ಬೆಡ್ ಮೇಲೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿರುವ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜು (ಐಜಿಎಂಸಿ) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬೆಡ್‌ನಲ್ಲಿ ಮಲಗಿದ್ದ ರೋಗಿಯೊಬ್ಬನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ವೈದ್ಯನೋರ್ವ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿಚಾರ ತಿಳಿದು ಆಸ್ಪತ್ರೆಗೆ ಬಂದ ರೋಗಿಯ ಸಂಬಂಧಿಕರು ಹಾಗೂ ಊರವರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದು, ರೋಗಿಯ ಮೇಲೆ ಹಲ್ಲೆ ಮಾಡಿದ ವೈದ್ಯನನ್ನು ಕೂಡಲೇ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ. ರಾಜ್ಯ ಆರೋಗ್ಯ ಸಚಿವ ಕಲೋನಿಯಲ್‌ ಧನಿ ರಾಮ್ ಶಂದಿಲ್ ಅವರು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹಲ್ಲೆಗೊಳಗಾದ ರೋಗಿಯ ಪ್ರಕಾರ, ವೈದ್ಯ ರೋಗಿಯ ಜೊತೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾನೆ. ಈ ವೇಳೆ ಗೌರವದಿಂದ ಮಾತನಾಡಿ ಎಂದಿದ್ದಕ್ಕೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

physically assaulting
ದೇವರೇ ಇದ್ದಿದ್ದರೆ ಗಾಜಾದಲ್ಲಿ ಅಷ್ಟು ಜನ ಯಾಕೆ ಸಾಯ್ತಿದ್ರೂ: ಆ ದೇವರಿಗಿಂತ ನಮ್ಮ ಪ್ರಧಾನಿಯೇ ಉತ್ತಮ; ಮುಫ್ತಿಗೆ ಜಾವೇದ್ ಅಖ್ತರ್ ತಿರುಗೇಟು

ಇಷ್ಟಕ್ಕೂ ಆಗಿದ್ದೇನು?

ರೋಗಿ ಅರ್ಜುನ್ ಪನ್ವಾರ್ ವೈದ್ಯಕೀಯ ಪರೀಕ್ಷೆಗಳಿಗಾಗಿ ಐಜಿಎಂಸಿ ಆಸ್ಪತ್ರೆಗೆ ಹೋಗಿದ್ದರು. ಉಸಿರಾಟದ ತೊಂದರೆ ಅನುಭವಿಸಿದ ನಂತರ, ಪನ್ವಾರ್ ಮತ್ತೊಂದು ವಾರ್ಡ್‌ನ ಹಾಸಿಗೆಯ ಮೇಲೆ ಮಲಗಿದ್ದರು. ವೈದ್ಯರು ಯಾವುದೇ ಪ್ರಚೋದನೆಯಿಲ್ಲದೆ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.

ಪನ್ವಾರ್ ವರ್ತನೆಯನ್ನು ಪ್ರತಿಭಟಿಸಿದ ನಂತರ ವಾಗ್ವಾದ ನಡೆಯಿತು ಮತ್ತು ವೈದ್ಯರು ಅವರನ್ನು ಹೊಡೆಯಲು ಪ್ರಾರಂಭಿಸಿದರು ಎಂದು ಪನ್ವಾರ್ ಹೇಳಿದರು.

ತೂ ಎಂದಿದ್ದಕ್ಕೇ ಹಲ್ಲೆ

"ನನಗೆ ಬ್ರಾಂಕೋಸ್ಕೋಪಿ ಮಾಡಲಾಗಿತ್ತು ಮತ್ತು ಉಸಿರಾಡಲು ಕಷ್ಟಪಡುತ್ತಿದ್ದೆ. ನಾನು ಆಮ್ಲಜನಕವನ್ನು ಕೇಳಿದಾಗ, ವೈದ್ಯರು ನನ್ನ ಪ್ರವೇಶದ ಸ್ಥಿತಿಯನ್ನು ಪ್ರಶ್ನಿಸಿದರು. ಈ ವೇಳೆ ಅವರು ಅಗೌರವದಿಂದ ಮಾತನಾಡಿದರು. ನಾನು ಅವರನ್ನು ಗೌರವದಿಂದ ಮಾತನಾಡಲು ಕೇಳಿದೆ. ಆದರೆ ಅವರು ಹಲ್ಲೆಗೆ ಮುಂದಾದರು. ಆಗ ಅವರು ತೂ ಎಂದು ಜರಿದರು.

ಈ ವೇಳೆ ನಾನು ನಿಮ್ಮ ಕುಟುಂಬಸ್ಥರೂ ಹೀಗೆಯೇ ವರ್ತಿಸುತ್ತಾರೆಯೇ ಎಂದು ಕೇಳಿದಾಗ ಅವರು ವೈಯುಕ್ತಿಕವಾಗಿ ತೆಗೆದುಕೊಂಡು ಹಲ್ಲೆ ನಡೆಸಿದರು. ಘಟನೆಯ ನಂತರ, ಆರೋಪಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಸ್ಪತ್ರೆಯಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು.

ತನಿಖೆಗೆ ತಂಡ ರಚನೆ

ಶಿಮ್ಲಾ ಐಜಿಎಂಸಿ ಆಸ್ಪತ್ರೆ ಆಡಳಿತವು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಶಿಮ್ಲಾದ ಐಜಿಎಂಸಿಯ ವೈದ್ಯಕೀಯ ಅಧೀಕ್ಷಕ (ಎಂಎಸ್) ಡಾ. ರಾಹುಲ್ ರಾವ್, ಸಮಿತಿಯು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಕೆಲವೇ ಗಂಟೆಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದರು ಮತ್ತು ವೈದ್ಯರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com