ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: ವರದಿ

ರಾಜಧಾನಿ ಢಾಕಾದಿಂದ ಸುಮಾರು ಮೂರೂವರೆ ಗಂಟೆಗಳ ದೂರದಲ್ಲಿರುವ ರಾಜ್‌ಬರಿಯ ಪಂಗ್ಶಾ ಉಪ ಜಿಲ್ಲೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ 29 ವರ್ಷದ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ ಕೊಲ್ಲಲ್ಪಟ್ಟರು ಎಂದು ವರದಿಗಳು ತಿಳಿಸಿವೆ.
Amrit Mondal
ಹತ್ಯೆಗೀಡಾದ ಅಮೃತ್ ಮಂಡಲ್ online desk
Updated on

ಢಾಕಾ: ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್‌ನನ್ನು ಗುಂಪು ಥಳಿಸಿ ಕೊಂದು ಅವರ ದೇಹವನ್ನು ಸುಟ್ಟುಹಾಕಿದ ಕೆಲವು ದಿನಗಳ ನಂತರ, ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಥಳಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ವರದಿಗಳ ಪ್ರಕಾರ, 29 ವರ್ಷದ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್, ರಾಜಧಾನಿ ಢಾಕಾದಿಂದ ಸುಮಾರು ಮೂರೂವರೆ ಗಂಟೆಗಳ ದೂರದಲ್ಲಿರುವ ರಾಜ್ಬರಿಯ ಪಂಗ್ಶಾ ಉಪ ಜಿಲ್ಲೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಹತ್ಯೆಯಾಗಿದ್ದಾರೆ.

ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ 'ದಿ ಡೈಲಿ ಸ್ಟಾರ್'ಗೆ ಸ್ಥಳೀಯ ನಿವಾಸಿಗಳು ಸಾಮ್ರಾಟ್ 'ಸಾಮ್ರಾಟ್ ಬಹಿನಿ' ಎಂಬ ಕ್ರಿಮಿನಲ್ ಗ್ಯಾಂಗ್‌ನ ನಾಯಕನಾಗಿದ್ದು, ಈ ಗ್ಯಾಂಗ್ ಸುಲಿಗೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಶೇಖ್ ಹಸೀನಾ ಪದಚ್ಯುತಗೊಂಡ ನಂತರ ಸಾಮ್ರಾಟ್ ದೇಶ ಬಿಟ್ಟು ಓಡಿಹೋಗಿದ್ದ ಮತ್ತು ಇತ್ತೀಚೆಗೆ ಕಲಿಮೊಹೋರ್ ಒಕ್ಕೂಟದ ತನ್ನ ಗ್ರಾಮವಾದ ಹೊಸೆಂದಂಗಾಗೆ ಮರಳಿದ್ದ.

ಬುಧವಾರ ರಾತ್ರಿ ಸುಮಾರು 11 ಗಂಟೆಗೆ, ಅವನು ಮತ್ತು ಅವನ ಗ್ಯಾಂಗ್‌ನ ಇತರ ಕೆಲವು ಸದಸ್ಯರು ಹಣ ವಸೂಲಿ ಮಾಡಲು ಶಾಹಿದುಲ್ ಇಸ್ಲಾಂ ಎಂಬ ಗ್ರಾಮಸ್ಥರ ಮನೆಗೆ ಹೋಗಿದ್ದರು ಎನ್ನಲಾಗಿದೆ. ಗ್ಯಾಂಗ್ ಸದಸ್ಯರು ದರೋಡೆಕೋರರು ಎಂದು ಗ್ರಾಮಸ್ಥರ ಕುಟುಂಬ ಸದಸ್ಯರು ಕೂಗಲು ಪ್ರಾರಂಭಿಸಿದರು ಮತ್ತು ಇತರ ಗ್ರಾಮಸ್ಥರು ಸಾಮ್ರಾಟ್ ನ್ನು ಹಿಡಿಯುವಲ್ಲಿ ಯಶಸ್ವಿಯಾದರು, ಆದರೆ ಹೆಚ್ಚಿನ ಗ್ಯಾಂಗ್ ಸದಸ್ಯರು ಪರಾರಿಯಾಗುವಲ್ಲಿ ಯಶಸ್ವಿಯಾದರು.

ಪೊಲೀಸರು ಸಾಮ್ರಾಟ್ ನನ್ನು ಗುಂಪಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದಾಗ, ಆತ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆಂದು ಘೋಷಿಸಲಾಯಿತು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಪಂಗ್ಶಾ ವೃತ್ತ) ದೇಬ್ರತಾ ಸರ್ಕಾರ್ ತಿಳಿಸಿದ್ದಾರೆ. ಪಂಗ್ಶಾ ಪೊಲೀಸ್ ಠಾಣೆಯಲ್ಲಿ ಸಾಮ್ರಾತ್ ವಿರುದ್ಧ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಒಂದು ಕೊಲೆ ಪ್ರಕರಣವೂ ಸೇರಿದೆ ಎಂದು ಸರ್ಕಾರ್ ಹೇಳಿದ್ದಾರೆ.

Amrit Mondal
ಹಿಂದೂಗಳ ಮನೆಗೆ ಬೆಂಕಿ ಹಚ್ಚಿದವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಬಾಂಗ್ಲಾದೇಶ ಪೊಲೀಸರು!

ಸಾಮ್ರಾಟ್ ನ ಸಹಚರರಲ್ಲಿ ಒಬ್ಬರಾದ ಮೊಹಮ್ಮದ್ ಸೆಲಿಮ್ ನನ್ನು ಪಿಸ್ತೂಲ್ ಮತ್ತು ಇನ್ನೊಂದು ಬಂದೂಕಿನಿಂದ ಬಂಧಿಸಲಾಗಿದೆ. 29 ವರ್ಷದ ಯುವಕನ ಹತ್ಯೆ ಬಾಂಗ್ಲಾದೇಶದಲ್ಲಿ ಕಾರ್ಖಾನೆಯ ಕೆಲಸಗಾರ ದೀಪು ಚಂದ್ರ ದಾಸ್ ನ ಗುಂಪು ಹತ್ಯೆಯ ನಂತರ ಈಗಾಗಲೇ ವಾತಾವರಣ ಸೃಷ್ಟಿಯಾಗಿರುವ ಸಮಯದಲ್ಲಿ ನಡೆದಿದೆ, ಇದು ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಳೆದ ಗುರುವಾರ ಢಾಕಾದಿಂದ ಸುಮಾರು ಮೂರು ಗಂಟೆಗಳ ದೂರದಲ್ಲಿರುವ ಮೈಮೆನ್ ಸಿಂಗ್ ನಲ್ಲಿ ಸಹೋದ್ಯೋಗಿಯೊಬ್ಬರು 27 ವರ್ಷದ ದಾಸ್ ಅವರನ್ನು ಧರ್ಮನಿಂದೆಯ ಆರೋಪ ಹೊರಿಸಿ ಗುಂಪೊಂದು ಅವರನ್ನು ಹೊಡೆದು ಕೊಂದಿತು. ನಂತರ ಅವರ ದೇಹವನ್ನು ಗಲ್ಲಿಗೇರಿಸಿ ಸುಟ್ಟು ಹಾಕಲಾಯಿತು.

27 ವರ್ಷದ ಯುವಕನ ಕ್ರೂರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ ಮತ್ತು ಭಾರತದ ವಿವಿಧ ಸ್ಥಳಗಳು ಸೇರಿದಂತೆ ಪ್ರತಿಭಟನೆಗಳು ನಡೆದಿವೆ. ದಾಸ್ ದೇವದೂಷಣೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಕೊಲೆ ಕೆಲಸದ ವಿವಾದದ ಪರಿಣಾಮವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ 12 ಜನರನ್ನು ಬಂಧಿಸಲಾಗಿದೆ ಮತ್ತು ಬಾಂಗ್ಲಾದೇಶದ ಶಿಕ್ಷಣ ಸಲಹೆಗಾರ ಸಿಆರ್ ಅಬ್ರಾರ್ ಮಂಗಳವಾರ ದಾಸ್ ಅವರ ಕುಟುಂಬಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com