ಹಿಂದೂಗಳ ಮನೆಗೆ ಬೆಂಕಿ ಹಚ್ಚಿದವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಬಾಂಗ್ಲಾದೇಶ ಪೊಲೀಸರು!

ಕಳೆದ ವಾರ ಇದೇ ಪ್ರದೇಶದಲ್ಲಿ ಹಿಂದೂ ಕುಟುಂಬಗಳ ಮನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವ ಸರಣಿ ಘಟನೆಗಳು ನಡೆದಿದ್ದವು.
Bangladesh police
ಬಾಂಗ್ಲಾದೇಶದ ಪೊಲೀಸರು
Updated on

ಢಾಕಾ/ನವದೆಹಲಿ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಗುಂಪು ಹಿಂಸಾಚಾರವು ಪ್ರಮುಖ ಬಿಕ್ಕಟ್ಟಾಗಿ ಹೊರಹೊಮ್ಮುತ್ತಿದ್ದು, ಆಗ್ನೇಯ ಬಂದರು ನಗರವಾದ ಚಟ್ಟೋಗ್ರಾಮ್ ಬಳಿ ಹಿಂದೂ ಒಡೆತನದ ಮನೆಗೆ ಬೆಂಕಿ ಹಚ್ಚಿದ ದಾಳಿಕೋರರ ಬಗ್ಗೆ ಮಾಹಿತಿ ನೀಡಿದವರಿಗೆ ಬಾಂಗ್ಲಾದೇಶ ಪೊಲೀಸರು ಬಹುಮಾನ ಘೋಷಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ರೌಜನ್ ಪ್ರದೇಶದಲ್ಲಿರುವ ಕತಾರ್ ವಲಸಿಗ ಕಾರ್ಮಿಕರಾದ ಶುಖ್ ಶಿಲ್ ಮತ್ತು ಅನಿಲ್ ಶಿಲ್ ಅವರ ಸುಟ್ಟುಹೋದ ಮನೆಗೆ ಬುಧವಾರ ರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಚಟ್ಟೋಗ್ರಾಮ್ ಶ್ರೇಣಿಯ ಪೊಲೀಸ್ ಮುಖ್ಯಸ್ಥ ಅಹ್ಸಾನ್ ಹಬೀಬ್ ಅವರು ಯಾವುದೇ ಮೊತ್ತವನ್ನು ನಿರ್ದಿಷ್ಟಪಡಿಸದೆ ಬಹುಮಾನ ಘೋಷಿಸಿದ್ದಾರೆ ಎಂದು ಇತ್ತೆಫಾಕ್ ಪತ್ರಿಕೆ ಗುರುವಾರ ವರದಿ ಮಾಡಿದೆ.

ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ. ಆದರೆ, ಮನೆಯಲ್ಲಿ ತಂಗಿದ್ದ ನಿವಾಸಿಗಳು ಯಾವುದೇ ಹಾನಿಯಾಗದಂತೆ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ಹೊತ್ತುಕೊಂಡ ಬಳಿಕ ಮನೆಯವರು ಎಚ್ಚರಗೊಂಡಿದ್ದಾರೆ. ಆದರೆ, ಬಾಗಿಲುಗಳು ಹೊರಗಿನಿಂದ ಲಾಕ್ ಆಗಿದ್ದರಿಂದ ಆರಂಭದಲ್ಲಿ ಹೊರಗೆ ಬರಲು ಸಾಧ್ಯವಾಗಲಿಲ್ಲ. ಎರಡು ಕುಟುಂಬಗಳ ಎಂಟು ಸದಸ್ಯರು ಟಿನ್ ಶೀಟ್‌ಗಳು ಮತ್ತು ಬಿದಿರಿನಿಂದ ನಿರ್ಮಿಸಿದ್ದ ಗೋಡೆಯನ್ನು ಕತ್ತರಿಸಿ ಬೆಂಕಿ ಹೊತ್ತಿಕೊಂಡಿದ್ದ ಮನೆಯಿಂದ ಹೊರಬಂದಿದ್ದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕಳೆದ ವಾರ ಇದೇ ಪ್ರದೇಶದಲ್ಲಿ ಹಿಂದೂ ಕುಟುಂಬಗಳ ಮನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವ ಸರಣಿ ಘಟನೆಗಳು ನಡೆದಿದ್ದವು.

Bangladesh police
ಬಾಂಗ್ಲಾದೇಶ ಹಿಂಸಾಚಾರ: ಹತ್ಯೆಗೀಡಾದ ಹಿಂದೂ ಕಾರ್ಮಿಕನ ಕುಟುಂಬದ ಜವಾಬ್ದಾರಿ ವಹಿಸಿಕೊಂಡ ಯೂನಸ್ ಸರ್ಕಾರ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಶಂಕಿತರನ್ನು ಬಂಧಿಸಿದ್ದಾರೆ ಮತ್ತು ನೆರೆಹೊರೆಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 'ವಿಶೇಷ ಭದ್ರತಾ ತಂಡ'ವನ್ನು ರಚಿಸಿದ್ದಾರೆ ಎಂದು ದಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ.

'ಐದು ದಿನಗಳಲ್ಲಿ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ (ರೋಜನ್‌ನಲ್ಲಿ) ಏಳು ಹಿಂದೂ ಕುಟುಂಬಗಳ ಮನೆಗಳು ಸುಟ್ಟುಹೋಗಿವೆ' ಎಂದು ವರದಿಯಲ್ಲಿ ಹೇಳಲಾಗಿದೆ.

ಇದುವರೆಗೆ ಐದು ಶಂಕಿತರನ್ನು ಬಂಧಿಸಲಾಗಿದೆ ಮತ್ತು ಇತರರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ರೋಜಾನ್ ಪೊಲೀಸ್ ಠಾಣೆ ಮುಖ್ಯಸ್ಥ ಸಜೆದುಲ್ ಇಸ್ಲಾಂ ಹೇಳಿದ್ದಾರೆ.

ಇಂತಹ ಘೋರ ಕೃತ್ಯಗಳ ಅಪರಾಧಿಗಳ ವಿರುದ್ಧ ಅಂತರ್ಧರ್ಮೀಯ ಸಾಮರಸ್ಯ ಮತ್ತು ಸಾಮಾಜಿಕ ಜಾಗರೂಕತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಸ್ಥಳೀಯ ಪ್ರಭಾವಿ ವ್ಯಕ್ತಿಗಳೊಂದಿಗೆ ಸಭೆ ನಡೆಸಿದ್ದಾರೆ.

ಧರ್ಮನಿಂದನೆ ಆರೋಪದ ಮೇಲೆ ಕಳೆದ ವಾರ ಕೇಂದ್ರ ಮೈಮೆನ್ಸಿಂಗ್‌ನಲ್ಲಿ 28 ವರ್ಷದ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಎಂಬುವವರನ್ನು ಗುಂಪೊಂದು ಹತ್ಯೆ ಮಾಡಿತ್ತು. ಇದು ದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು.

ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ದಾಸ್ ಅವರ ಅಪ್ರಾಪ್ತ ಮಗು, ಪತ್ನಿ ಮತ್ತು ಪೋಷಕರನ್ನು ನೋಡಿಕೊಳ್ಳುವುದಾಗಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com