ಕಾಡಿನಲ್ಲಿ ವಿಷ ಸೇವಿಸಿದ ದಂಪತಿ: ಸಾಯುತ್ತಿರುವ ಪೋಷಕರನ್ನು ನೋಡುತ್ತಾ ಕೊರೆವ ಚಳಿಯಲ್ಲಿ ರಾತ್ರಿಯಿಡೀ ಕಳೆದ ಐದು ವರ್ಷದ ಬಾಲಕ!

ಮೂಲಗಳ ಪ್ರಕಾರ, ಮೃತ ದುಷ್ಮಂತ್ ಮಾಝಿ, ಅವರ ಪತ್ನಿ ರಿಂಕಿ ಮತ್ತು ಅವರ ಮಗ ಶನಿವಾರ ಸಂಜೆ ಮಹಿಳೆಯ ಪೋಷಕರ ಮನೆಯಿಂದ ಮನೆಗೆ ಮರಳುತ್ತಿದ್ದಾಗ ಇಬ್ಬರ ನಡುವೆ ಜಗಳ ಆರಂಭವಾಯಿತು
Representational image
ಸಾಂದರ್ಭಿಕ ಚಿತ್ರ
Updated on

ದಿಯೋಗಢ (ಒಡಿಶಾ): ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವಿಸಿ ನರಳಾಡುತ್ತಿದ್ದ ದಂಪತಿಯ ಪಕ್ಕದಲ್ಲೇ ಐದು ವರ್ಷದ ಬಾಲಕ ಕೊರೆವ ಚಳಿಯಲ್ಲಿ ರಾತ್ರೀಯಿಡಿ ಕುಳಿತಿದ್ದ ಘಟನೆ : ದಿಯೋಗಢ ಜಿಲ್ಲೆಯ ಕುಂಧಿಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಶನಿವಾರ ರಾತ್ರಿ ನಡೆದ ಜಗಳದಲ್ಲಿ ಜಿಯಂತಪಾಲಿ ಗ್ರಾಮದ ದಂಪತಿಗಳು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಏನಾಗುತ್ತಿದೆ ಎಂದು ತಿಳಿಯದ ಮಗು ರಾತ್ರೀಯಿಡಿ ಪೋಷಕರ ಪಕ್ಕದಲ್ಲೆ ಕುಳಿತು ಬೆಳಗಿನ ಜಾವ ಕಾಡಿನಿಂದ ಹೊರಗೆ ಓಡಿಹೋಗಿ ಸ್ಥಳೀಯರಿಗೆ ಘಟನೆಯ ಬಗ್ಗೆ ತಿಳಿಸಿತು. ಆದರೆ ಪೋಷಕರನ್ನು ಉಳಿಸಲು ಸಾಧ್ಯವಾಗಲಿಲ್ಲ.

ಮೂಲಗಳ ಪ್ರಕಾರ, ಮೃತ ದುಷ್ಮಂತ್ ಮಾಝಿ, ಅವರ ಪತ್ನಿ ರಿಂಕಿ ಮತ್ತು ಅವರ ಮಗ ಶನಿವಾರ ಸಂಜೆ ಮಹಿಳೆಯ ಪೋಷಕರ ಮನೆಯಿಂದ ಮನೆಗೆ ಮರಳುತ್ತಿದ್ದಾಗ ಇಬ್ಬರ ನಡುವೆ ಜಗಳ ಆರಂಭವಾಯಿತು ಎಂದು ವರದಿಯಾಗಿದೆ. ಉದ್ವಿಗ್ನತೆ ಹೆಚ್ಚಾದಾಗ, ಅವರು ದಲಾಕ್ ರಸ್ತೆಯ ಬಳಿ ಮೋಟಾರ್ ಸೈಕಲ್ ನಿಲ್ಲಿಸಿ ಹತ್ತಿರದ ಕಾಡಿಗೆ ನಡೆದುಕೊಂಡು ಹೋಗಿ ವಿಷ ಸೇವಿಸಿದ್ದಾರೆ

ದುಷ್ಮಂತ್ ಮತ್ತು ರಿಂಕಿ ಜೀವನ್ಮರಣ ಹೋರಾಟ ನಡೆಸಿ ನಂತರ ಸಾವನ್ನಪ್ಪಿದ್ದಾರೆ. ಏನು ಮಾಡಲು ತೋಚದೆ ಮಗು ರಾತ್ರಿಯಿಡೀ ಕಾಡಿನೊಳಗೆ ತನ್ನ ತಂದೆ ಮತ್ತು ತಾಯಿಯ ಪಕ್ಕದಲ್ಲಿಯೇ ಕುಳಿತಿದೆ.

Representational image
ಮಾರಣಾಂತಿಕ ಕಾರು ಅಪಘಾತದಲ್ಲಿ ರಿಷಬ್ ಪಂತ್ ಜೀವ ಉಳಿಸಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಪ್ರೇಯಸಿಯೊಂದಿಗೆ ವಿಷ ಸೇವನೆ!

ಭಾನುವಾರ ಬೆಳಿಗ್ಗೆ, ಬಾಲಕ ಕಾಡಿನಿಂದ ಹೊರಬಂದು ರಸ್ತೆಯಲ್ಲಿ ದಾರಿಹೋಕರನ್ನು ತಡೆದು ಘಟನೆಯನ್ನು ವಿವರಿಸಿದನು. ಸ್ಥಳೀಯರು ತಕ್ಷಣ ಕುಂಧಿಗೋಳ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ದುಷ್ಮಂತ್ ಮೃತಪಟ್ಟಿರುವುದನ್ನು ಖಚಿತ ಪಡಿಸಿದರು, ಆದರೆ ರಿಂಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಪೊಲೀಸರು ಬೆಳಿಗ್ಗೆ 10 ಗಂಟೆ ಸುಮಾರಿಗೆ ದಂಪತಿ ಮತ್ತು ಮಗುವನ್ನು ರಕ್ಷಿಸಿ ಅಂಗುಲ್ ಜಿಲ್ಲೆಯ ಛೇಂಡಿಪಾಡ ಆಸ್ಪತ್ರೆಗೆ ಸ್ಥಳಾಂತರಿಸಿದರು.

ದುಷ್ಮಂತ್ ಆಸ್ಪತ್ರೆಗೆ ಆಗಮಿಸುವಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು, ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಿಂಕಿಯನ್ನು ಚಿಕಿತ್ಸೆಗಾಗಿ ಅಂಗುಲ್ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕಳುಹಿಸಲಾಯಿತು. ಮಧ್ಯಾಹ್ನ ಆಕೆಯೂ ಸಾವನ್ನಪ್ಪಿದಳು. ಮಗು ಕೂಡ ವಿಷ ಸೇವಿಸಿರಬಹುದು ಎಂದು ಶಂಕಿಸಿ, ವೈದ್ಯರು ಅವನಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರು.

ದಂಪತಿಗಳು ತಮ್ಮ 30 ರ ವರ್ಷದವರಾಗಿದ್ದು ಯಾವ ಕಾರಣಕ್ಕೆ ವಿಷ ಸೇವಿಸಿದರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಮಗುವಿನ ಕಸ್ಟಡಿಯನ್ನು ಅವನ ತಾಯಿಯ ಅಜ್ಜಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಧೀರಜ್ ಚೋಪ್ದರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com