ಬಿಜೆಪಿಯಿಂದ ಶಾಸಕರ ಖರೀದಿ ಆರೋಪಕ್ಕೆ ಪುರಾವೆ ನೀಡಿ: ಕೇಜ್ರಿವಾಲ್‌ಗೆ ಎಸಿಬಿ ನೋಟಿಸ್

ಬಿಜೆಪಿ, ಎಎಪಿ ಪಕ್ಷದ ಶಾಸಕರಿಗೆ ಲಂಚ ನೀಡಲು ಯತ್ನಿಸಿದೆ ಎಂಬ ನಿಮ್ಮ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಗೆ ಎಸಿಬಿ ಸೂಚಿಸಿದೆ.
ಕೇಜ್ರಿವಾಲ್ ಮನೆ ಮುಂದೆ ಎಸಿಬಿ ಅಧಿಕಾರಿಗಳು
ಕೇಜ್ರಿವಾಲ್ ಮನೆ ಮುಂದೆ ಎಸಿಬಿ ಅಧಿಕಾರಿಗಳು
Updated on

ನವದೆಹಲಿ: ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದ AAP ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ(ACB) ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ, ಎಎಪಿ ಪಕ್ಷದ ಶಾಸಕರಿಗೆ ಲಂಚ ನೀಡಲು ಯತ್ನಿಸಿದೆ ಎಂಬ ನಿಮ್ಮ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಗೆ ಎಸಿಬಿ ಸೂಚಿಸಿದೆ.

"ಆಪರೇಷನ್ ಲೋಟಸ್" ಅಡಿಯಲ್ಲಿ ಬಿಜೆಪಿ, ತಮ್ಮ ಪಕ್ಷದ 16 ಅಭ್ಯರ್ಥಿಗಳನ್ನು ಖರೀದಿಸಿಲು ಪ್ರಯತ್ನಿಸುತ್ತಿದೆ. ಎಎಪಿ ಅಭ್ಯರ್ಥಿಗಳು, ಬಿಜೆಪಿ ಸೇರಿದರೆ ಸಚಿವ ಸ್ಥಾನ ಮತ್ತು ತಲಾ 15 ಕೋಟಿ ರೂ.ಗಳ ನೀಡುವ ಆಫರ್‌ ನೀಡಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಆ ಶಾಸಕರ ಹೆಸರುಗಳು ಮತ್ತು ಆಫರ್‌ ನೀಡಿದವರ ಸಂಪರ್ಕ ವಿವರಗಳನ್ನು ಸಲ್ಲಿಸುವಂತೆ ACB ಕೇಜ್ರಿವಾಲ್ ಅವರಿಗೆ ಕೇಳಿಕೊಂಡಿದೆ.

ಈ ನೋಟಿಸ್‌ನಲ್ಲಿ ಆರೋಪಗಳನ್ನು "ಅತ್ಯಂತ ಗಂಭೀರ" ಎಂದು ಕರೆಯಲಾಗಿದ್ದು, ತುರ್ತು ವಿಚಾರಣೆ ಅಗತ್ಯ ಎಂದು ಹೇಳಲಾಗಿದೆ. ಸಂಪರ್ಕಿಸಲಾಗಿದೆ ಎನ್ನಲಾದ 16 ಅಭ್ಯರ್ಥಿಗಳ ಹೆಸರುಗಳನ್ನು ಮತ್ತು ಆಫರ್‌ ನೀಡಿದವರ ಫೋನ್ ಸಂಖ್ಯೆಗಳನ್ನು ಒದಗಿಸುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಲಾಗಿದೆ.

ಕೇಜ್ರಿವಾಲ್ ಮನೆ ಮುಂದೆ ಎಸಿಬಿ ಅಧಿಕಾರಿಗಳು
ಎಎಪಿ ಶಾಸಕರ ಖರೀದಿ ಆರೋಪ: ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಕೇಜ್ರಿವಾಲ್ ಮನೆ ಮೇಲೆ ಎಸಿಬಿ ದಾಳಿ

ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಶುಕ್ರವಾರ ತಮ್ಮ ಭೇಟಿಗೆ ಸಮಯ ನೀಡುವಂತೆ ACB ಕೇಜ್ರಿವಾಲ್ ಅವರನ್ನು ಕೇಳಿಕೊಂಡಿದೆ.

ಎಎಪಿ ನಾಯಕರ ಆರೋಪದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಎಸಿಬಿ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿ ಶೋಧ ನಡೆಸಲು ಮುಂದಾಗಿದ್ದರು. ಆದರೆ ಕೇಜ್ರಿವಾಲ್ ಅವರು ಎಸಿಬಿ ಅಧಿಕಾರಿಗಳು ತಮ್ಮ ಮನೆ ಪ್ರವೇಶಿಸಲು ಅವಕಾಶ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com