ಮಹಾಕುಂಭಮೇಳದಲ್ಲಿ ಇದುವರೆಗೆ 52 ಕೋಟಿಗೂ ಅಧಿಕ ಮಂದಿ ಪವಿತ್ರ ಸ್ನಾನ: ಪೊಲೀಸರಿಂದ ಭದ್ರತೆ ಪರಿಶೀಲನೆ

ಪ್ರಯಾಗ್‌ರಾಜ್ ರೈಲು ನಿಲ್ದಾಣದಲ್ಲಿ ಭಕ್ತರ ಬೃಹತ್ ದಟ್ಟಣೆ ಕಂಡುಬಂದಿದೆ. ಅಗಾಧ ಜನಸಂದಣಿಯನ್ನು ನಿರ್ವಹಿಸಲು ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಜಾಗರೂಕರಾಗಿದ್ದರು.
Mahakumbha Mela
ಮಹಾಕುಂಭ ಮೇಳ
Updated on

ಪ್ರಯಾಗ್ ರಾಜ್: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಇಂದು ಸೋಮವಾರವೂ ಭಕ್ತರು ಸಾಗರೋಪಾದಿಯಲ್ಲಿ ಮಹಾಕುಂಭಕ್ಕೆ ಆಗಮಿಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ಮಾನವ ಸಂಗಮೇಳದ 36 ದಿನಗಳಲ್ಲಿ ಇದುವರೆಗೆ 52 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

ಪ್ರಯಾಗ್‌ರಾಜ್ ರೈಲು ನಿಲ್ದಾಣದಲ್ಲಿ ಭಕ್ತರ ಬೃಹತ್ ದಟ್ಟಣೆ ಕಂಡುಬಂದಿದೆ. ಅಗಾಧ ಜನಸಂದಣಿಯನ್ನು ನಿರ್ವಹಿಸಲು ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಜಾಗರೂಕರಾಗಿದ್ದರು.

ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕ ಜಿ ಪಿ ಸಿಂಗ್ ನಿನ್ನೆ ಪ್ರಯಾಗ್‌ರಾಜ್‌ನ ಮಹಾಕುಂಭದ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು, ಉತ್ತರ ಪ್ರದೇಶ ಪೊಲೀಸ್, ಸಿಆರ್‌ಪಿಎಫ್ ಮತ್ತು ಒಳಗೊಂಡಿರುವ ಎಲ್ಲಾ ಇತರ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯತೆ ಇದೆ ಎಂದು ಶ್ಲಾಘಿಸಿದರು.

Mahakumbha Mela
ಗೊಂದಲಮಯ ಪ್ರಕಟಣೆಗಳಿಂದಾಗಿ ಕಾಲ್ತುಳಿತ: ಪ್ರಾಥಮಿಕ ತನಿಖೆ ಬಳಿಕ ದೆಹಲಿ ಪೊಲೀಸ್ ಮಾಹಿತಿ!

ಉತ್ತರ ಪ್ರದೇಶ ಪೊಲೀಸ್, ಸಿಆರ್‌ಪಿಎಫ್ ಮತ್ತು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳ ನಡುವಿನ ಉತ್ತಮ ಹೊಂದಾಣಿಕೆಯನ್ನು ಶ್ಲಾಘಿಸಿದರು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು" ಎಂದು ಸಿಆರ್ ಪಿಎಫ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ಮಹಾಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದ ಹಿನ್ನೆಲೆಯಲ್ಲಿ, ಭಕ್ತರು ಮತ್ತು ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಉತ್ತರ ರೈಲ್ವೆ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com