10 ದಿನಗಳ ಸುದೀರ್ಘ ಕಾರ್ಯಾಚರಣೆ ಬಳಿಕ 3 ವರ್ಷದ ಚೇತನಾ ರಕ್ಷಣೆ; ಆದರೆ ವಿಧಿಯಾಟ ಬೇರೆಯೇ ಇತ್ತು!

ಡಿಸೆಂಬರ್ 23ರಂದು ಸಂಜೆ ಅವರ ಮೂರು ವರ್ಷದ ಮಗಳು ಚೇತನಾ ಆಟವಾಡುತ್ತಿದ್ದಾಗ 700 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಳು. ವಿಷಯ ತಿಳಿದ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
10 ದಿನಗಳ ಸುದೀರ್ಘ ಕಾರ್ಯಾಚರಣೆ ಬಳಿಕ 3 ವರ್ಷದ ಚೇತನಾ ರಕ್ಷಣೆ; ಆದರೆ ವಿಧಿಯಾಟ ಬೇರೆಯೇ ಇತ್ತು!
PTI
Updated on

ಜೈಪುರ: ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ಹತ್ತು ದಿನಗಳ ಹಿಂದೆ ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಚೇತನಾ ಇನ್ನಿಲ್ಲ. ಬುಧವಾರ ಅವರನ್ನು ಹೊರಗೆ ಕರೆದೊಯ್ದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸರುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿತಾರ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಪೇಂದ್ರ ಚೌಧರಿ ಅವರ ಕುಟುಂಬ ಕಿರಾತಪುರ ಗ್ರಾಮದ ಬಾಡಿಯಾಲಿ ಕಿ ಧನಿಯಲ್ಲಿ ವಾಸವಾಗಿದೆ. ಡಿಸೆಂಬರ್ 23ರಂದು ಸಂಜೆ ಅವರ ಮೂರು ವರ್ಷದ ಮಗಳು ಚೇತನಾ ಆಟವಾಡುತ್ತಿದ್ದಾಗ 700 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಳು. ವಿಷಯ ತಿಳಿದ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ನಂತರ, ವೈದ್ಯಕೀಯ ತಂಡದೊಂದಿಗೆ NDRF ಮತ್ತು SDRF ತಂಡಗಳು ತಕ್ಷಣವೇ ಸ್ಥಳಕ್ಕೆ ತಲುಪಿದವು.

150 ಅಡಿ ಆಳದಲ್ಲಿ ಸಿಲುಕಿದ್ದ ಚೇತನಾ

150 ಅಡಿ ಆಳದಲ್ಲಿ ಚೇತನಾ ಸಿಲುಕಿದ್ದಳು. ಮನೆಯಲ್ಲಿ ತಯಾರಿಸಿದ ಜುಗಾಡ್ ಬಳಸಿ ಬಾಲಕಿಯನ್ನು ಮೂವತ್ತು ಅಡಿ ಮೇಲಕ್ಕೆ ಎಳೆಯಲಾಯಿತು. ಆದರೆ, ಆಕೆಯನ್ನು ಮೇಲಕ್ಕೆ ತರಲಾಗಲಿಲ್ಲ. ಬಾಲಕಿಯ ಚಲನವಲನ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗಿತ್ತು. ಬಾಲಕಿಯನ್ನು ಹೊರತೆಗೆಯುವ ಆರಂಭಿಕ ಪ್ರಯತ್ನಗಳು ವಿಫಲವಾದಾಗ, ರಕ್ಷಣಾ ತಂಡವು ಅಗೆಯಲು ಪ್ರಾರಂಭಿಸಿತು. ಆದರೆ ಅಗೆದ ಸುರಂಗ ದಾರಿ ಹಳಿತಪ್ಪಿತ್ತು.

ಚೇತನಾಗೆ ಕೆಲ ಗಂಟೆಗಳ ಕಾಲ ಆಹಾರ ಮತ್ತು ಆಮ್ಲಜನಕ ಸಿಗಲಿಲ್ಲ, ಇದರಿಂದಾಗಿ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಆದರೆ ಪರಿಹಾರ ಪಡೆಗಳು ಹತ್ತು ದಿನಗಳ ನಂತರ ಬುಧವಾರ ಬಾಲಕಿಯನ್ನು ಹೊರತೆಗೆದರು. ತಕ್ಷಣ ಚೇತನಾಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಚೇತನಾ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

10 ದಿನಗಳ ಸುದೀರ್ಘ ಕಾರ್ಯಾಚರಣೆ ಬಳಿಕ 3 ವರ್ಷದ ಚೇತನಾ ರಕ್ಷಣೆ; ಆದರೆ ವಿಧಿಯಾಟ ಬೇರೆಯೇ ಇತ್ತು!
'ಅಪ್ಪಾ ನನ್ನ ಕಾಪಾಡು': 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಅಂಗಲಾಚುತ್ತಿರುವ 3 ವರ್ಷದ ಬಾಲಕಿ, ರಕ್ಷಣೆಗೆ ಹುಕ್ ಟೆಕ್ನಿಕ್!

ಕಾರ್ಯಾಚರಣೆ ತುಂಬಾ ಸವಾಲಾಗಿತ್ತು

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರಗೆ ತೆಗೆಯಲಾಗಿದೆ ಎಂದು ರಾಜಸ್ಥಾನದ ಎನ್‌ಡಿಆರ್‌ಎಫ್ ಮುಖ್ಯಸ್ಥ ಯೋಗೇಶ್ ಮೀನಾ ತಿಳಿಸಿದ್ದಾರೆ. ಆದರೆ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಈ ರಕ್ಷಣಾ ಕಾರ್ಯಾಚರಣೆಯು ಅತ್ಯಂತ ಸವಾಲಿನದ್ದಾಗಿತ್ತು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳಿಂದ ಸಾಕಷ್ಟು ಪ್ರಯತ್ನ ನಡೆಯಿತು. ರಕ್ಷಣಾ ತಂಡ ಬೋರ್‌ವೆಲ್‌ಗೆ ಸಮಾನಾಂತರವಾಗಿ ಸುರಂಗ ಕೊರೆದು ಬಾಲಕಿಯನ್ನು ಹೊರತೆಗೆದಿದೆ. ಈ ಕಾರ್ಯಾಚರಣೆಯು ರಾಜ್ಯದ ಅತ್ಯಂತ ಸುದೀರ್ಘವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಚೇತನಾ ಮೃತದೇಹ ಕೆಸರಿನಲ್ಲಿ ಸಿಲುಕಿಕೊಂಡಿತ್ತು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್ ತಂಡ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com