ಜೈಪುರದಲ್ಲಿ New Orleans ಮಾದರಿಯ ಕೃತ್ಯ: ಧಾರ್ಮಿಕ ಮೆರವಣಿಗೆಯೆಡೆಗೆ ನುಗ್ಗಿದ SUV ಕಾರು!

ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಪ್ರದೇಶಕ್ಕೆ ಎಸ್‌ಯುವಿ ನುಗ್ಗಿ ಬಂದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯಿಂದ ಕೋಪಗೊಂಡ ಜನರು ವಾಹನವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Car rams into people in Jaipur
ಜನಸಂದಣಿಯೆಡೆಗೆ ನುಗ್ಗಿದ ಕಾರುonline desk
Updated on

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಅಮೇರಿಕಾದ New Orleans ಉಗ್ರ ಕೃತ್ಯದ ಮಾದರಿಯ ಘಟನೆ ನಡೆದಿದೆ.

ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಪ್ರದೇಶಕ್ಕೆ ಎಸ್‌ಯುವಿ ನುಗ್ಗಿ ಬಂದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯಿಂದ ಕೋಪಗೊಂಡ ಜನರು ವಾಹನವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಪಾರ್ಕ್ ಪ್ರದೇಶದ ಪಂಚವಟಿ ಸರ್ಕಲ್ ಬಳಿ ಗುರುವಾರ ರಾತ್ರಿ ಸಿಖ್ ಸಮುದಾಯದ ಸದಸ್ಯರು ಕೀರ್ತನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದ್ದು ಅಪ್ರಾಪ್ತ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಎಂಎಲ್‌ಎ ಸ್ಟಿಕ್ಕರ್ ಅಂಟಿಸಲಾಗಿದೆ, ಅದನ್ನು ಪರಿಶೀಲಿಸಲಾಗುತ್ತಿದೆ.

ಅತಿ ವೇಗದ ಚಾಲನೆಗಾಗಿ ಆರು ಚಲನ್‌ಗಳನ್ನು ನೀಡಲಾಗಿದೆ. ಅಲ್ಲಿ ನಿಂತಿದ್ದ ಪೊಲೀಸರು ಎಸ್‌ಯುವಿಯನ್ನು ನಿಲ್ಲಿಸುವಂತೆ ಸೂಚಿಸಿದರು ಆದರೆ ಚಾಲಕನು ವೇಗವನ್ನು ಹೆಚ್ಚಿಸಿದ ಎಂದು ಎಸಿಪಿ ಲಕ್ಷ್ಮಿ ಸುತಾರ್ ಹೇಳಿದ್ದಾರೆ. ಜನರಿಗೆ ಡಿಕ್ಕಿ ಹೊಡೆದರೂ ಚಾಲಕ ಕಾರನ್ನು ನಿಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Car rams into people in Jaipur
Watch | New Orleans ದಾಳಿ: ಶಂಕಿತ ಉಗ್ರ ಅಮೇರಿಕಾ ನಿವೃತ್ತ ಯೋಧ!

ಜನಸಂದಣಿಯಿಂದ ಸುಮಾರು 100 ಮೀಟರ್ ಹಿಂದೆ ಕಾರನ್ನು ನಿಲ್ಲಿಸಲಾಯಿತು. ನಾಲ್ವರು ಹುಡುಗರು ಇಳಿದು ಓಡಲು ಪ್ರಾರಂಭಿಸಿದರು, ಆದರೆ ಜನರು ಚಾಲಕನನ್ನು ಹಿಡಿದರು. ಕಾರಿನಲ್ಲಿದ್ದ ಇತರ ಮೂವರು ಯುವಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಲ್ಲಿ ಓರ್ವ ಮಹಿಳೆ ಮತ್ತು ಬಾಲಕಿ ಸೇರಿದ್ದಾರೆ. ಈ ಸಂಬಂಧ ಆದರ್ಶ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com