'ಇಂಡಿಯಾ ಗೇಟ್'ಗೆ 'ಭಾರತ ಮಾತಾ ದ್ವಾರ' ಎಂದು ಮರುನಾಮಕರಣ ಮಾಡಿ: ಪ್ರಧಾನಿಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಒತ್ತಾಯ

ಇಂಡಿಯಾ ಗೇಟ್ ಅನ್ನು ಭಾರತ್ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವುದರಿಂದ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸಾವಿರಾರು ದೇಶಭಕ್ತರಿಗೆ ಮತ್ತು ಅವರ ಹೆಸರನ್ನು ಹೊಂದಿರುವ ಎಲ್ಲ ದೇಶಭಕ್ತರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ.
India gate
ಇಂಡಿಯಾ ಗೇಟ್
Updated on

ನವದೆಹಲಿ: ರಾಷ್ಟ್ರೀಯತೆಯನ್ನು ಬೆಳೆಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಐತಿಹಾಸಿಕ ಇಂಡಿಯಾ ಗೇಟ್ ಅನ್ನು 'ಭಾರತ್ ಮಾತಾ ದ್ವಾರ' ಎಂದು ಮರುನಾಮಕರಣ ಮಾಡುವಂತೆ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಇಂಡಿಯಾ ಗೇಟ್ ಅನ್ನು ‘ಭಾರತ್ ಮಾತಾ ದ್ವಾರ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಇಂಡಿಯಾ ಗೇಟ್ ಜಾಗತಿಕ ವೇದಿಕೆಯಲ್ಲಿ ಭಾರತದ ಅಸ್ಮಿತೆಯ ಸಂಕೇತವಾಗಿದೆ. “ಇಂಡಿಯಾ ಗೇಟ್ ಕೇವಲ ಸ್ಮಾರಕವಲ್ಲ ಆದರೆ ಜಾಗತಿಕ ವೇದಿಕೆಯಲ್ಲಿ ಭಾರತದ ಅಸ್ಮಿತೆಯ ಸಂಕೇತವಾಗಿದೆ ಎಂದು ಗುರುತಿಸುವಂತೆ ನಾವು ಪ್ರಧಾನಿಯನ್ನು ವಿನಂತಿಸಿದ್ದೇವೆ.

ವಸಾಹತುಶಾಹಿ ಆಳ್ವಿಕೆಯ ಅವಶೇಷಗಳನ್ನು ತೊಡೆದುಹಾಕುವ ಮೂಲಕ ಮತ್ತು ಭಾರತೀಯ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಜೋಡಿಸಲು ವಿವಿಧ ಸ್ಥಳಗಳು ಮತ್ತು ಸಂಸ್ಥೆಗಳಿಗೆ ಮರುನಾಮಕರಣ ಮಾಡುವ ಮೂಲಕ "ಮೊಘಲ್ ಆಕ್ರಮಣಕಾರರು" ಮತ್ತು "ಬ್ರಿಟಿಷ್ ದರೋಡೆಕೋರರಿಂದ ಆಗಿರುವ ಗಾಯಗಳನ್ನು ಗುಣಪಡಿಸಲು ಮೋದಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದಿಕಿ ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

India gate
ಅಸ್ಸಾಂನ ಕರೀಂಗಂಜ್ ಹೆಸರು ಬದಲಾವಣೆ; ಶ್ರೀಭೂಮಿ ಎಂದು ಮರುನಾಮಕರಣ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸಿದ್ಧಿಕಿ, “ಇಂಡಿಯಾ ಗೇಟ್ ಅನ್ನು ಭಾರತ್ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವುದರಿಂದ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸಾವಿರಾರು ದೇಶಭಕ್ತರಿಗೆ ಮತ್ತು ಅವರ ಹೆಸರನ್ನು ಹೊಂದಿರುವ ಎಲ್ಲ ದೇಶಭಕ್ತರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.

ಮೋದಿ ಸರ್ಕಾರವು ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದೆ. ಇಂಡಿಯಾ ಗೇಟ್ ಬಳಿ ಕಿಂಗ್ ಜಾರ್ಜ್ V ರ ಪ್ರತಿಮೆಯನ್ನು ಹೊಂದಿದ್ದ ಮೇಲಾವರಣದಲ್ಲಿ ಸುಭಾಸ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇರಿಸಿದೆ ಎಂದು ಹೇಳಿದರು.

ಸ್ಥಳಗಳು ಮತ್ತು ಸ್ಮಾರಕಗಳನ್ನು ಮರುನಾಮಕರಣ ಮಾಡುವುದು ವಸಾಹತುಶಾಹಿ ಆಳ್ವಿಕೆಯ ಸಂಕೇತಗಳನ್ನು ಅಳಿಸಿಹಾಕಲು ಮತ್ತು ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ ಎಂದು ಸಿದ್ದಿಕಿ ಹೇಳಿದರು.

ರಾಜ್ ಪಥ್ ಅನ್ನು ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಯಿತು, ಅದೇ ರೀತಿಯಲ್ಲಿ ಇಂಡಿಯಾ ಗೇಟ್ಗೆ ಭಾರತ್ ಮಾತಾ ದ್ವಾರ್ ಎಂಬ ಹೆಸರನ್ನು ನೀಡಬಹುದು ಎಂದು ಅವರು ಹೇಳಿದರು.

ಪ್ರಪಂಚದಾದ್ಯಂತದ ಸಂದರ್ಶಕರು ಈ ಅರ್ಥಪೂರ್ಣ ಸಂದೇಶವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಅದಕ್ಕಾಗಿಯೇ ನಾವು ಪ್ರಧಾನಿಯನ್ನು ವಿನಂತಿಸಿದ್ದೇವೆ, ಕಾಂಗ್ರೆಸ್ಸಿನ 70 ವರ್ಷಗಳ ಅಧಿಕಾರಾವಧಿಯಲ್ಲಿ ಸಾಧಿಸಲಾಗದ ಕಿಂಗ್ ಜಾರ್ಜ್ 5 ರ ಪ್ರತಿಮೆಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯೊಂದಿಗೆ ಬದಲಿಸಿ, ಯುವಕರಿಗೆ ಹೊಸ ಸಂದೇಶದೊಂದಿಗೆ ಸ್ಫೂರ್ತಿ ನೀಡಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com