
ಲಖನೌ: ಜೈಲಿನಲ್ಲಿ ನಿಯೋಜಿಸಲಾದ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಜೈಲರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಮಹಿಳಾ ಅಧಿಕಾರಿ ನೀಡಿದ ಆರೋಪದ ಮೇರೆಗೆ ಬಾಗ್ಪತ್ ಜಿಲ್ಲಾ ಜೈಲಿನ ಜೈಲರ್ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದರೂ, ಆರೋಪಿ ಜಿತೇಂದ್ರ ಕಶ್ಯಪ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ. "ಮಹಿಳಾ ಜೈಲು ಅಧಿಕಾರಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ನಾವು ಮಂಗಳವಾರ ಪ್ರಕರಣ ದಾಖಲಿಸಿದ್ದೇವೆ. ಆದಾಗ್ಯೂ, ಆರೋಪಿಯನ್ನು ಇನ್ನೂ ವಶಕ್ಕೆ ತೆಗೆದುಕೊಳ್ಳಲಾಗಿಲ್ಲ" ಎಂದು ಖೇಕ್ರಾ ಸ್ಟೇಷನ್ ಹೌಸ್ ಅಧಿಕಾರಿ ಕೈಲಾಶ್ ಚಂದ್ರ ಹೇಳಿದರು.
ದೂರುದಾರರ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ನ್ಯಾಯಾಲಯದಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗುವುದು ಜಿಲ್ಲಾ ಜೈಲಿನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುವುದು ಮತ್ತು ಆರೋಪಗಳು ನಿಜವೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದೂರುದಾರರ ಪತ್ರದ ಪ್ರಕಾರ, ಜಿಲ್ಲಾ ಜೈಲು ಸೂಪರಿಂಟೆಂಡೆಂಟ್ ವಿಷ್ಣುಕಾಂತ್ ಮಿಶ್ರಾ ನಿವೃತ್ತರಾದ ನಂತರ, ಜಿತೇಂದ್ರ ಕಶ್ಯಪ್ ಅವರಿಗೆ ಸೂಪರಿಂಟೆಂಡೆಂಟ್ ಆಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು.
ಜನವರಿ 1 ರಂದು ಜಿತೇಂದ್ರ ಕಶ್ಯಪ್ ತನ್ನನ್ನು ಸೂಪರಿಂಟೆಂಡೆಂಟ್ ಕಚೇರಿಗೆ ಕರೆಸಿ, ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ದೂರುದಾರರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ಆಕೆಯ ದೂರಿನ ನಂತರ, ಜೈಲುಗಳ ಮಹಾನಿರ್ದೇಶಕರು ರಚಿಸಿದ ಸಮಿತಿಯು ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಆರೋಪಿಯನ್ನು ಅಮಾನತುಗೊಳಿಸಲಾಗಿದೆ ಎಂದು SHO ತಿಳಿಸಿದ್ದಾರೆ. ಜೈಲು ಆಡಳಿತ ಈ ಹಿಂದೆ ಬರೇಲಿ ಕೇಂದ್ರ ಕಾರಾಗೃಹದಲ್ಲಿ ನಿಯೋಜಿಸಲ್ಪಟ್ಟಿದ್ದ ಜೈಲರ್ ಶೈಲೇಶ್ ಸಿಂಗ್ ಅವರನ್ನು ಬಾಗ್ಪತ್ ಜಿಲ್ಲಾ ಕಾರಾಗೃಹಕ್ಕೆ ನೇಮಿಸಿದೆ. ಸಿಂಗ್ ತಮ್ಮ ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.
Advertisement