ಜಮ್ಮು-ಕಾಶ್ಮೀರ: 17 ಮಂದಿ ನಿಗೂಢ ಸಾವು; ಬಾಧಾಲ್ ಗ್ರಾಮ ಸೋಂಕಿತ ವಲಯವೆಂದು ಘೋಷಣೆ!

ಇದೇ ಊರಿನ ಇನ್ನೊಬ್ಬರು ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನ್‌ಮೆಂಟ್‌ ವಲಯವಾಗಿ ಘೋಷಿಸಿದ ಕಾರಣ ಗ್ರಾಮದಲ್ಲಿ ಒಂದೆಡೆ ಹೆಚ್ಚು ಜನ ಸೇರುವಂತಿಲ್ಲ. ಜಿಲ್ಲಾಡಳಿತ ಒದಗಿಸಿದ ಆಹಾರವನ್ನಷ್ಟೇ ಸೇವಿಸಬೇಕು ಎಂದು ಆದೇಶಿಸಲಾಗಿದೆ.
People dig a grave for the burial of Yasmeen Kouser, the 17th victim of the 'mysterious' illness
ಅಂತ್ಯಕ್ರಿಯೆಗಾಗಿ ಸಮಾಧಿ ಅಗೆಯುತ್ತಿರುವ ಗ್ರಾಮಸ್ಥರು
Updated on

ಶ್ರೀನಗರ: ಕಳೆದ 50 ದಿನಗಳಲ್ಲಿ ಮೂರು ಕುಟುಂಬಗಳ 13 ಮಕ್ಕಳು ಮತ್ತು 4 ಹಿರಿಯರು ಸೇರಿದಂತೆ 17 ಜನರು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ ನಂತರ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮವನ್ನು ಆಡಳಿತವು ಕಂಟೈನ್ಮೆಂಟ್ ವಲಯವೆಂದು ಘೋಷಿಸಿ, ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ.

ಅಲ್ಲದೆ ಇದೇ ಊರಿನ ಇನ್ನೊಬ್ಬರು ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನ್‌ಮೆಂಟ್‌ ವಲಯವಾಗಿ ಘೋಷಿಸಿದ ಕಾರಣ ಗ್ರಾಮದಲ್ಲಿ ಒಂದೆಡೆ ಹೆಚ್ಚು ಜನ ಸೇರುವಂತಿಲ್ಲ. ಜಿಲ್ಲಾಡಳಿತ ಒದಗಿಸಿದ ಆಹಾರವನ್ನಷ್ಟೇ ಸೇವಿಸಬೇಕು ಎಂದು ಆದೇಶಿಸಲಾಗಿದೆ.

ಗ್ರಾಮವನ್ನು ಮೂರು ಕಂಟೈನ್‌ಮೆಂಟ್ ವಲಯಗಳಾಗಿ ವಿಂಗಡಿಸಲಾಗಿದೆ. ಮೊದಲ ವಲಯದಲ್ಲಿ ಸಾವು ಸಂಭವಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜೀವ್ ಕುಮಾರ್ ಖಜುರಿಯಾ ಹೇಳಿದ್ದಾರೆ. ಮೃತರ ಕುಟುಂಬಗಳ ಮನೆಗಳನ್ನು ಸೀಲ್ ಮಾಡಲಾಗುವುದು. ಗೊತ್ತುಪಡಿಸಿದ ಅಧಿಕಾರಿಗಳು ಅಥವಾ ಅಧಿಕಾರಿಗಳಿಂದ ಒಪ್ಪಿಗೆ ಪಡೆಯದ ಹೊರತು ಅವರ ಕುಟುಂಬ ಸದಸ್ಯರು ಸೇರಿದಂತೆ ಯಾರೂ ಕೂಡ ಅಲ್ಲಿಗೆ ತೆರಳಕೂಡದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಎರಡನೆ ವಲಯದಲ್ಲಿ ಮೃತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇರುವ ಕಾರಣ ಹಲವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಕುಟುಂಬಗಳ ವ್ಯಕ್ತಿಗಳನ್ನು ನಿರಂತರ ಆರೋಗ್ಯ ಮೇಲ್ವಿಚಾರಣೆಗಾಗಿ ಜಿಎಂಸಿ ರಾಜೌರಿಗೆ ತಕ್ಷಣ ಸ್ಥಳಾಂತರಿಸುವುದು ಕಡ್ಡಾಯವಾಗಿದೆ.

ಈ ವಲಯದಲ್ಲಿ ಆಹಾರ ಸೇವನೆಯ ನಿರಂತರ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಬದಲಿ ಆಹಾರ ಪದಾರ್ಥಗಳ ಸೇವನೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಆಹಾರ ವಿತರಣೆ ಮತ್ತು ಸೇವನೆಯ ಪ್ರತಿಯೊಂದು ವಿಷಯವನ್ನು ದಾಖಲಿಸುವ ಲಾಗ್‌ಬುಕ್ ನಿರ್ವಹಿಸಲಾಗಿದೆಯೆ ಎಂದು ನಿಯೋಜಿತ ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಾರೆ.

People dig a grave for the burial of Yasmeen Kouser, the 17th victim of the 'mysterious' illness
Jammu-Kashmir: ಬುಧಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಗೆ ಇಡೀ ಕುಟುಂಬ ಬಲಿ; ಜರ್ಝರಿತ ಮೊಹಮ್ಮದ್ ಅಸ್ಲಾಂ ಹೇಳಿದ್ದು...

ರಾಜೌರಿಯಲ್ಲಿ ನಿಗೂಢ ಕಾಯಿಲೆಯಿಂದ ಪತ್ನಿ ಮತ್ತು ಮೂವರು ಮಕ್ಕಳನ್ನು ಕಳೆದುಕೊಂಡ ನಂತರ ತನ್ನ ಮತ್ತು ಬದುಕುಳಿದ ಮಕ್ಕಳ ಬಗ್ಗೆ ವ್ಯಕ್ತಿ ಭಯಭೀತರಾಗಿದ್ದಾರೆ. ಮಂಗಳವಾರ ಸಂಜೆ, ಯುವಕ ಐಜಾಜ್ ಅಹ್ಮದ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಮೊಹಮ್ಮದ್ ಅಸ್ಲಾಂ ಅವರ ಸೋದರಳಿಯ, ಅವರು ಆರು ಮಕ್ಕಳು ಮತ್ತು ಮಾವ ಮತ್ತು ಚಿಕ್ಕಮ್ಮ ಸೇರಿದಂತೆ ಕುಟುಂಬದ 8 ಸದಸ್ಯರನ್ನು ನಿಗೂಢ ಕಾಯಿಲೆಯಿಂದ ಕಳೆದುಕೊಂಡರು.

ಬಾಧಾಲ್ ಗ್ರಾಮದಲ್ಲಿ ನಿಗೂಢ ಸಾವುಗಳು ಡಿಸೆಂಬರ್ 7, 2024 ರಂದು ಪ್ರಾರಂಭವಾಯಿತು. ಡಿಸೆಂಬರ್ 7 ರಂದು ಊಟ ಸೇವಿಸಿದ ನಂತರ ಅಸ್ವಸ್ಥರಾದ ಒಂದು ಕುಟುಂಬದ ನಾಲ್ಕು ಮಕ್ಕಳು ಸೇರಿದಂತೆ ಐದು ಜನರು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದರು. ಡಿಸೆಂಬರ್ 12 ರಂದು, ಮತ್ತೊಂದು ಕುಟುಂಬದ ಒಬ್ಬ ಮಹಿಳೆ ಮತ್ತು ಮೂವರು ಮಕ್ಕಳು ಸಾವನ್ನಪ್ಪಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com