ಉತ್ತರಕಾಶಿಯಲ್ಲಿ ಎರಡು ಬಾರಿ ಕಂಪಿಸಿದ ಭೂಮಿ, ನಿವಾಸಿಗಳಲ್ಲಿ ಹೆಚ್ಚಿದ ಆತಂಕ

ಭೂಕಂಪದ ನಂತರ ವರುಣವ್ರತ ಪರ್ವತದಲ್ಲಿ ಸಂಭವಿಸಿದ ಭೂಕುಸಿತವನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ಹಾನಿಯ ವರದಿಯಾಗಿಲ್ಲ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಎರಡು ಬಾರಿ ಭೂಮಿ ಕಂಪಿಸಿದ್ದು, ನಿವಾಸಿಗಳು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದರು.

ವಿಪತ್ತು ನಿರ್ವಹಣಾ ಕಚೇರಿಯ ಪ್ರಕಾರ, ಭೂಕಂಪದ ನಂತರ ವರುಣವ್ರತ ಪರ್ವತದಲ್ಲಿ ಸಂಭವಿಸಿದ ಭೂಕುಸಿತವನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ಹಾನಿಯ ವರದಿಯಾಗಿಲ್ಲ.

ಉತ್ತರಕಾಶಿಯ ನಿವಾಸಿಗಳಿಗೆ ಶುಕ್ರವಾರ ಬೆಳಗ್ಗೆ ಎರಡು ಗಮನಾರ್ಹ ಭೂಕಂಪದ ಅನುಭವವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಜೈ ಪ್ರಕಾಶ್ ಸಿಂಗ್ ಪನ್ವಾರ್ ಅವರು TNIE ಗೆ ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ
ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 126ಕ್ಕೆ ಏರಿಕೆ, 188 ಮಂದಿಗೆ ಗಾಯ; ಕಠ್ಮಂಡು, ಉತ್ತರ ಭಾರತದಲ್ಲೂ ಪರಿಣಾಮ

"ಮೊದಲ ಭೂಕಂಪವು ಇಂದು ಬೆಳಗ್ಗೆ ಸರಿಸುಮಾರು 7:41 ಕ್ಕೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ ಮತ್ತು ಭೂಕಂಪದ ಕೇಂದ್ರ ಬಿಂದು ಜಿಲ್ಲಾ ಕೇಂದ್ರ ಕಚೇರಿಯ ಬಳಿ ಕೇಂದ್ರೀಕೃತವಾಗಿದೆ" ಎಂದು ಅವರು ವಿವರಿಸಿದರು.

ಆರಂಭಿಕ ಭೂಕಂಪವು ಪ್ರದೇಶದಾದ್ಯಂತ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋಗುವಂತೆ ಮಾಡಿತು. ಅರ್ಧ ಗಂಟೆಯೊಳಗೆ, ಅಂದರೆ ಬೆಳಗ್ಗೆ 8:29 ಕ್ಕೆ ಎರಡನೇ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 3.5 ರಷ್ಟಿತ್ತು. "ಈ ಎರಡನೇ ಭೂಕಂಪದ ಕೇಂದ್ರಬಿಂದುವು ಗಂಗೋತ್ರಿ ಭಟ್ವರಿ ಬ್ಲಾಕ್‌ನಲ್ಲಿರುವ ಬರ್ಸು ಕಾಡುಗಳಲ್ಲಿದೆ" ಎಂದು ಡಿಡಿಎಂಒ ಪನ್ವಾರ್ ಹೇಳಿದ್ದಾರೆ.

ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸುರಕ್ಷತಾ ಶಿಷ್ಟಾಚಾರಗಳು ಜಾರಿಯಲ್ಲಿವೆಯೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್, ಗಾಯಗಳು ಅಥವಾ ಗಮನಾರ್ಹ ಆಸ್ತಿ ಹಾನಿಯ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಆದರೆ ಈ ಎರಡು ಭೂಕಂಪಗಳು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com