ಅಮಿತ್ ಶಾ
ಅಮಿತ್ ಶಾ

ಕುಂಭಮೇಳ: ಸಂಗಮದಲ್ಲಿ ಅಮಿತ್ ಶಾ ಪವಿತ್ರ ಸ್ನಾನ, ಮೊಮ್ಮಗನಿಗೆ ಸಾಧುಗಳ ಆಶೀರ್ವಾದ!

ಇದೇ ವೇಳೆ ಐಸಿಸಿ ಅಧ್ಯಕ್ಷ ಮತ್ತು ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಗಂಡು ಮಗುವಿಗೆ ಸಾಧುಗಳು ಆಶೀರ್ವಾದ ಮಾಡಿದರು.
Published on

ಪ್ರಯಾಗ್‌ರಾಜ್‌: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಾಧುಗಳ ಜೊತೆಗೆ ಪವಿತ್ರ ಸ್ನಾನ ಮಾಡಿದರು.

ಇದೇ ವೇಳೆ ಐಸಿಸಿ ಅಧ್ಯಕ್ಷ ಮತ್ತು ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಗಂಡು ಮಗುವಿಗೆ ಸಾಧುಗಳು ಆಶೀರ್ವದಿಸಿದರು.

ಅಮಿತ್ ಶಾ ಅವರು ಇಂದು ಪ್ರಯಾಗ್‌ರಾಜ್‌ನ ಸಂಗಮ ತ್ರಿವೇಣಿಯಲ್ಲಿ ಪತ್ರ ಸ್ನಾನ ಮಾಡಿದರು. ಶಾ ಅವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬಾ ರಾಮ್ ದೇವ್ ಸೇರಿದಂತೆ ಹಲವು ಸಂತರು ಮತ್ತು ಸಾಧುಗಳು ಇದ್ದರು.

ಅಮಿತ್ ಶಾ
Maha Kumbh 2025: ಕುಂಭಮೇಳ ಬಗ್ಗೆ "ಬುದ್ಧಿಜೀವಿ" ವಿಶ್ಲೇಷಣೆಗಳಿಗೆ ಪ್ರತಿಕ್ರಿಯೆ ಬೇಕಿಲ್ಲ, ಆದರೆ… (ತೆರೆದ ಕಿಟಕಿ)

ಪವಿತ್ರ ಸ್ನಾನಕ್ಕೂ ಮೊದಲು, ಅಮಿತ್ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್‌ನಲ್ಲಿರುವ ಸಾಧು, ಸಂತರನ್ನು ಭೇಟಿ ಮಾಡಿ ಸಂವಾದ ನಡೆಸಿದರು.

ಕೇಂದ್ರ ಗೃಹ ಸಚಿವರು ಪವಿತ್ರ ಸ್ನಾನದ ನಂತರ ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಲಿದ್ದಾರೆ. ನಂತರ ಜುನಾ ಅಖಾರಕ್ಕೆ ತೆರಳಿ ಮಹಾರಾಜರು ಮತ್ತು ಅಖಾರದ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸೇವಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com