ಸ್ವಪಕ್ಷದ ವಿರುದ್ಧವೇ ಹೂಂಕರಿಸಿದ ರಾಹುಲ್ ಗಾಂಧಿ: ದಲಿತರು-ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ಎಡವಿದೆ!

1990ರ ನಂತರ ನಂಬಿಕೆ ಕುಸಿಯುತ್ತಾ ಹೋಯಿತು. ಕಾಂಗ್ರೆಸ್ ಈ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು... ಕಾಂಗ್ರೆಸ್ ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸಬೇಕಾದ ರೀತಿಯಲ್ಲಿ ರಕ್ಷಿಸಲಿಲ್ಲ. ಈ ಹೇಳಿಕೆಯಿಂದ ನನಗೆ ನೋವುಂಟಾಗಬಹುದು, ಆದರೆ ಇದು ಸತ್ಯವಾದ್ದರಿಂದ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
Rahul Gandhi
ರಾಹುಲ್ ಗಾಂಧಿPTI
Updated on

ನವದೆಹಲಿ: ದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ವಿಶ್ವಾಸವನ್ನು ತಮ್ಮ ಪಕ್ಷ ಉಳಿಸಿಕೊಂಡಿದ್ದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿಗೂ ಪ್ರಬಲವಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 'ದಲಿತ ಪ್ರಭಾವಿಗಳು' ಎಂಬ ವಿಷಯವನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಪಕ್ಷದಲ್ಲಿ 'ಆಂತರಿಕ ಕ್ರಾಂತಿ' ತರುತ್ತೇನೆ. ಅಲ್ಲದೆ ವಂಚಿತ ವರ್ಗಗಳ ಜನರಿಗೆ ಸಂಘಟನೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ದಲಿತ ವಿರೋಧಿ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

1990ರ ದಶಕದಿಂದಲೂ ಕಾಂಗ್ರೆಸ್ ವಂಚಿತ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ನಾವು ದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ವಿಶ್ವಾಸವನ್ನು ಉಳಿಸಿಕೊಂಡಿದ್ದರೆ ಆರ್‌ಎಸ್‌ಎಸ್ ಎಂದಿಗೂ ಪ್ರಬಲವಾಗುತ್ತಿರಲ್ಲಿಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ, ಸಂಪೂರ್ಣ ವಿಶ್ವಾಸ ಅಖಂಡವಾಗಿತ್ತು ಎಂದು ಅವರು ಹೇಳಿದರು. ಇಂದಿರಾ ಗಾಂಧಿ ಅವರು, ತಮಗಾಗಿ ಹೋರಾಡುತ್ತಾರೆಂದು ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಎಲ್ಲರಿಗೂ ತಿಳಿದಿತ್ತು ಎಂದರು.

1990ರ ನಂತರ ನಂಬಿಕೆ ಕುಸಿಯುತ್ತಾ ಹೋಯಿತು. ಕಾಂಗ್ರೆಸ್ ಈ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು... ಕಾಂಗ್ರೆಸ್ ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸಬೇಕಾದ ರೀತಿಯಲ್ಲಿ ರಕ್ಷಿಸಲಿಲ್ಲ. ಈ ಹೇಳಿಕೆಯಿಂದ ನನಗೆ ನೋವುಂಟಾಗಬಹುದು, ಆದರೆ ಇದು ಸತ್ಯವಾದ್ದರಿಂದ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದಲಿತ ಸಮುದಾಯದ ಜನರಿಗಾಗಿ ಮೊದಲು ಕಾಂಗ್ರೆಸ್‌ನಲ್ಲಿ ಆಂತರಿಕ ಕ್ರಾಂತಿಯನ್ನು ತರಬೇಕು. ಅದರಲ್ಲಿ ನಾವು ನಿಮ್ಮನ್ನು (ಸಂಘಟನೆಯಲ್ಲಿ) ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು. ಭಾರತದ ಶಿಕ್ಷಣ ವ್ಯವಸ್ಥೆ ಎಂದಿಗೂ ದಲಿತರು ಮತ್ತು ಹಿಂದುಳಿದ ವರ್ಗಗಳ ಕೈಯಲ್ಲಿ ಇರಲಿಲ್ಲ ಎಂದು ಅವರು ಪ್ರತಿಪಾದಿಸಿದರು.

Rahul Gandhi
AAP ಅಡ್ಡಾದಲ್ಲಿ BJP ಗೆದ್ದಿದ್ದೇ ರೋಚಕ: ಬಿಜೆಪಿಗೆ ಒಲಿದ ಚಂಡೀಗಢ ಮೇಯರ್ ಪಟ್ಟ; INDIA ಮೈತ್ರಿಕೂಟಕ್ಕೆ ನಿರಾಸೆ!

ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಡೀ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿರುವುದರಿಂದ ದಲಿತರು ಮತ್ತು ಹಿಂದುಳಿದ ವರ್ಗಗಳ ಸಮಸ್ಯೆಗಳು ಪ್ರಸ್ತುತ ರಚನೆಯಲ್ಲಿ ಬಗೆಹರಿಯುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ದಲಿತರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗಗಳಿಗೆ 'ಎರಡನೇ ಬಾರಿಗೆ ಸ್ವಾತಂತ್ರ್ಯ' ಸಿಗಲಿದೆ ಎಂದು ಅವರು ಹೇಳಿದರು. ಇದರಲ್ಲಿ ಅವರು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮಾತ್ರವಲ್ಲದೆ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿಯೂ ಪಣತೊಡಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com