'ಧೈರ್ಯವಿದ್ದರೆ ನನ್ನನ್ನು ಮಹಾರಾಷ್ಟ್ರದಿಂದ ಓಡಿಸಿ': ಠಾಕ್ರೆ ಸಹೋದರರಿಗೆ ಖ್ಯಾತ ವ್ಯಕ್ತಿಯಿಂದ ಬಹಿರಂಗ ಸವಾಲು!

ಇದಕ್ಕೆ ಪ್ರತಿಯಾಗಿ, ಎಂಎನ್‌ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.
Raj Thackeray, Uddhav Thackeray
ರಾಜ್ ಠಾಕ್ರೆ, ಉದ್ಧವ್ ಠಾಕ್ರೆ
Updated on

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮರಾಠಿ ಭಾಷೆಯ ವಿರುದ್ಧ ಆಂದೋಲನಕ್ಕೆ ಇಳಿದಿರುವ ಬೆನ್ನಲ್ಲೇ, ಠಾಕ್ರೆ ಸಹೋದರರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರದಿಂದ ತಮ್ಮನ್ನು ಓಡಿಸಲು ಖ್ಯಾತ ವ್ಯಕ್ತಿಯೊಬ್ಬರು ಸವಾಲು ಹಾಕಿದ್ದಾರೆ.

ನಿರಾಹುವಾ ಎಂದೇ ಖ್ಯಾತರಾಗಿರುವ ನಟ ಮತ್ತು ಗಾಯಕ ದಿನೇಶ್ ಲಾಲ್ ಯಾದವ್ ಭೋಜ್‌ಪುರಿಯಲ್ಲಿ ಮಾತನಾಡಿದ್ದಕ್ಕಾಗಿ ತಮ್ಮನ್ನು ಮಹಾರಾಷ್ಟ್ರದಿಂದ ಓಡಿಸುವಂತೆ ಠಾಕ್ರೆ ಸಹೋದರರಿಗೆ ಸವಾಲು ಹಾಕಿದ್ದಾರೆ.

ಇದಕ್ಕೆ ಪ್ರತಿಯಾಗಿ, ಎಂಎನ್‌ಎಸ್ ನಾಯಕರೊಬ್ಬರು ಯಾದವ್ ಅವರಿಗೆ ಧೈರ್ಯವಿದ್ದರೆ ಮಹಾರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.

ಯಾದವ್ 2024 ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ವಿರುದ್ಧ ಅಜಮ್‌ಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

Raj Thackeray, Uddhav Thackeray
'ಮರಾಠಿ ಕಲಿಯಲ್ಲ' ಎಂದಿದ್ದಕ್ಕೆ ಕಚೇರಿ ಧ್ವಂಸ: ಕ್ಷಮೆಯಾಚಿಸಿದ ಉದ್ಯಮಿ; ಐವರು MNS ಕಾರ್ಯಕರ್ತರ ಬಂಧನ

"ನಾನು ಬಹಿರಂಗ ಸವಾಲು ನೀಡುತ್ತಿದ್ದೇನೆ. ನನಗೆ ಮರಾಠಿ ಮಾತನಾಡಲು ಬರುವುದಿಲ್ಲ. ನಾನು ಭೋಜ್‌ಪುರಿ ಮಾತನಾಡುತ್ತೇನೆ ಮತ್ತು ನಾನು ಮಹಾರಾಷ್ಟ್ರದಲ್ಲೇ ಇದ್ದೇನೆ. ನೀವು ಬಡವರನ್ನು ಏಕೆ ಓಡಿಸುತ್ತಿದ್ದೀರಿ? ನಿಮಗೆ ಧೈರ್ಯವಿದ್ದರೆ ನನ್ನನ್ನು ಓಡಿಸಿ. ಮುಂಬೈನಲ್ಲಿಯೂ ಸಹ ನಾನು ನಿಮಗೆ ಸವಾಲು ನೀಡುತ್ತಿದ್ದೇನೆ" ಎಂದು ಯಾದವ್ ವರದಿಗಾರರಿಗೆ ತಿಳಿಸಿದರು.

ಭಾಷೆಯ ಮೇಲೆ ಜನರಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳ ಹಿಂದೆ ರಾಜಕೀಯವಿದೆ ಎಂದು ಅವರು ಆರೋಪಿಸಿದರು. "ದೇಶದ ಸೌಂದರ್ಯವೆಂದರೆ ಭಾಷೆಗಳ ವೈವಿಧ್ಯತೆ ಮತ್ತು ವಿಭಿನ್ನ ಮಾತೃಭಾಷೆಗಳನ್ನು ಮಾತನಾಡುವ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ನೀವು ಈ ಸೌಂದರ್ಯವನ್ನು ನಾಶಮಾಡಲು ಬಯಸುತ್ತೀರಿ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com