26/11 ಘಟನೆಯಲ್ಲಿ ಮುಂಬೈ ರಕ್ಷಿಸಿದ್ದು, ಯುಪಿ, ಬಿಹಾರ ಮೂಲದವರು, ಠಾಕ್ರೆ ಬೆಂಬಲಿಗರು ಎಲ್ಲಿದ್ದರು?: ಮಾಜಿ ಕಮಾಂಡೋ

2008 ರಲ್ಲಿ ಮುಂಬೈನಲ್ಲಿ ಭಯೋತ್ಪಾದನೆ ನಡೆದಾಗ ರಾಜ್ ಠಾಕ್ರೆ ಅವರ ಬೆಂಬಲಿಗರು ಅಡಗಿಕೊಳ್ಳುವುದರಲ್ಲಿ ನಿರತರಾಗಿದ್ದರು ಎಂದು ಕಮಾಂಡೋ ಆರೋಪಿಸಿದ್ದಾರೆ.
Raj Thackeray-Praveen Kumar Teotia
ರಾಜ್ ಠಾಕ್ರೆ- ಪ್ರವೀಣ್ ಕುಮಾರ್ ಟಿಯೋಟಿಯಾonline desk
Updated on

ಮುಂಬೈ: 26/11 ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮಾಜಿ ಗಣ್ಯ ಕಮಾಂಡೋ ಮರಾಠಿ ಭಾಷಾ ವಿವಾದದ ಬಗ್ಗೆ ಠಾಕ್ರೆ ಕುಟುಂಬವನ್ನು ಕೆಣಕಿದ್ದಾರೆ

2008 ರಲ್ಲಿ ಮುಂಬೈನಲ್ಲಿ ಭಯೋತ್ಪಾದನೆ ನಡೆದಾಗ ರಾಜ್ ಠಾಕ್ರೆ ಅವರ ಬೆಂಬಲಿಗರು ಅಡಗಿಕೊಳ್ಳುವುದರಲ್ಲಿ ನಿರತರಾಗಿದ್ದರು ಎಂದು ಕಮಾಂಡೋ ಆರೋಪಿಸಿದ್ದಾರೆ. ಮಹಾರಾಷ್ಟ್ರದ ರಾಜಕೀಯದಲ್ಲಿ ನಿರ್ಣಾಯಕ ಘಟ್ಟದಲ್ಲಿ ಹೊರಹೊಮ್ಮಿದ ಕೆಲವೇ ರಾಜಕೀಯೇತರ ಧ್ವನಿಗಳಲ್ಲಿ ಪ್ರವೀಣ್ ಕುಮಾರ್ ಟಿಯೋಟಿಯಾ ಕೂಡ ಒಬ್ಬರಾಗಿದ್ದಾರೆ.

"ನಾನು 26/11 ರಂದು ಮುಂಬೈಯನ್ನು ಉಳಿಸಿದೆ. ನಾನು ಮಹಾರಾಷ್ಟ್ರಕ್ಕಾಗಿ ರಕ್ತ ಹರಿಸುತ್ತೇನೆ. ನಾನು ಉತ್ತರ ಪ್ರದೇಶದವನು. ನಾನು ತಾಜ್ ಹೋಟೆಲ್ ನ್ನು ಉಳಿಸಿದೆ. ಆ ಸಂದರ್ಭದಲ್ಲಿ ರಾಜ್ ಠಾಕ್ರೆ ಅವರ ಯೋಧರು ಎಂದು ಕರೆಯಲ್ಪಡುವವರು ಎಲ್ಲಿದ್ದರು? ರಾಷ್ಟ್ರವನ್ನು ವಿಭಜಿಸಬೇಡಿ. ನಗುವಿಗೆ ಯಾವುದೇ ಭಾಷೆಯ ಅಗತ್ಯವಿಲ್ಲ" ಎಂದು ಟಿಯೋಟಿಯಾ ಹೇಳಿದ್ದಾರೆ.

ಟಿಯೋಟಿಯಾ 26/11 ಬ್ರೇವ್‌ಹಾರ್ಟ್: ಮೈ ಎನ್‌ಕೌಂಟರ್ ವಿತ್ ಟೆರರಿಸ್ಟ್ಸ್ ದಟ್ ನೈಟ್ ಎಂಬ ಪುಸ್ತಕವನ್ನು ಬರೆದಿದ್ದಾರೆ.

ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ ಟಿಯೋಟಿಯಾ, 26/11 ರ ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದು ರಾಜ್ ಮತ್ತು ಉದ್ಧವ್ ಠಾಕ್ರೆ ಅಲ್ಲ, ಆದರೆ ಯುಪಿ ಮತ್ತು ಬಿಹಾರದಂತಹ ರಾಜ್ಯಗಳ ಮಿಲಿಟರಿ ಸಿಬ್ಬಂದಿ ಎಂದು ಹೇಳಿದ್ದಾರೆ.

"ಅವರು (ರಾಜ್ ಠಾಕ್ರೆ) ಮತ್ತು ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬವೂ ಪತ್ತೆಯಾಗಿಲ್ಲ. ಸೇನಾ ಸಿಬ್ಬಂದಿಯಂತಹ ಇತರರನ್ನು ರಕ್ಷಿಸಿದ ಜನರು ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದವರಾಗಿದ್ದರು. ನಾನು ಅಲ್ಲಿದ್ದೆ, (ನಾನು) ಪರಿಸ್ಥಿತಿಯನ್ನು ನಿಭಾಯಿಸಿದೆ ಮತ್ತು ಭಯೋತ್ಪಾದಕರನ್ನು ಎದುರಿಸಿದೆ. ನಾನು ಕೂಡ ಉತ್ತರ ಪ್ರದೇಶದವನು ಮತ್ತು (ಮಾಜಿ ಪ್ರಧಾನಿ) ಚೌಧರಿ ಚರಣ್ ಸಿಂಗ್ ಅವರ ಹಳ್ಳಿಯಿಂದ ಬಂದವನು" ಎಂದು ಅವರು ಹೇಳಿದ್ದಾರೆ.

ತಾನು ಮರಾಠಿ ವಿರೋಧಿಯಲ್ಲ ಎಂದು ಟಿಯೋಟಿಯಾ ಸ್ಪಷ್ಟಪಡಿಸಿದ್ದಾರೆ ಮತ್ತು ಭಾಷೆಯ ಮೇಲೆ ಯಾವುದೇ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ.

"ಮರಾಠಿ ಮತ್ತು ಮರಾಠಾ ಯೋಧರ ಬಗ್ಗೆ ನನಗೆ ಹೆಮ್ಮೆ ಇದೆ. ಅಂತಹ ಸೋತವರು ನಮ್ಮನ್ನು ವಿಭಜಿಸಲು ಬಿಡಬೇಡಿ. ಭಾಷೆ ರಾಜಕೀಯದ ಭಾಗವಾಗಿರಬಾರದು" ಎಂದು ಅವರು ಹೇಳಿದರು, ನಿರುದ್ಯೋಗ, ಬಡತನ, ಅಭಿವೃದ್ಧಿ, ಉತ್ಪಾದನೆ, ಕೃಷಿ, ಶಿಕ್ಷಣ, ಆರೋಗ್ಯ, ಅತ್ಯಾಚಾರ, ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳು ಮತ್ತು ಭಯೋತ್ಪಾದನೆಯು ಗಮನಹರಿಸಬೇಕಾದ ದೊಡ್ಡ ಸಮಸ್ಯೆಗಳಾಗಿವೆ ಎಂದು ಹೇಳಿದರು.

Raj Thackeray-Praveen Kumar Teotia
ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯನ್ ಸಾವು ಆತ್ಮಹತ್ಯೆ; ತನಿಖೆಯಲ್ಲಿ ಯಾವುದೇ ಅಕ್ರಮವಿಲ್ಲ: ಹೈಕೋರ್ಟ್‌ಗೆ ಮುಂಬೈ ಪೊಲೀಸರ ಹೇಳಿಕೆ

ಟಿಯೋಟಿಯಾ ಹೇಳಿಕೆಗೆ ಠಾಕ್ರೆ ಪಾಳಯದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯ ಸರ್ಕಾರದ ಶಾಲೆಗಳಿಗೆ ತ್ರಿಭಾಷಾ ನೀತಿ ಮತ್ತೆ ಮರಾಠಿ ವಿವಾದದಲ್ಲಿ ಠಾಕ್ರೆಗಳು ಮುಂಚೂಣಿಯಲ್ಲಿದ್ದಾರೆ. ಠಾಕ್ರೆಯವರ ಟೀಕೆಗಳ ನಡುವೆಯೇ ಈ ನೀತಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಬೆಳವಣಿಗೆಗಳ ಬಳಿಕ ಮೆಗಾ ಸಾರ್ವಜನಿಕ ಸಭೆಯೊಂದರಲ್ಲಿ ವೇದಿಕೆ ಹಂಚಿಕೊಂಡ ಇಬ್ಬರು ನಾಯಕರು ರಾಜ್ಯದ ಮಾತೃ ಮರಾಠಿ ಭಾಷಿಕರ ಮೇಲೆ ಹಿಂದಿ ಹೇರಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಿದರು.

ಮುಂಬೈನಲ್ಲಿ ಮರಾಠಿಯೇತರ ಭಾಷಿಕರ ಮೇಲೆ ಹಲ್ಲೆ ಎಂಎನ್ಎಸ್ ಬೆದರಿಕೆ ಹಾಕುತ್ತಿರುವುದು ಕಂಡುಬರುತ್ತದೆ. "ಗುಂಡಾಗಿರಿ" ಮಾಡುತ್ತಿರುವ ಆರೋಪ ಹೊತ್ತಿರುವ ರಾಜ್ ಠಾಕ್ರೆಯವರನ್ನು ಅವರ ಸೋದರಸಂಬಂಧಿ ಉದ್ಧವ್ ಬೆಂಬಲಿಸಿದ್ದಾರೆ. ಅವರು ಮರಾಠಿ ಜನರಿಗೆ ನ್ಯಾಯಕ್ಕಾಗಿ ಹೋರಾಡುವಾಗ ಗೂಂಡಾ ಆಗಿರುವುದು ಉತ್ತಮ ಎಂದು ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com