ಗುರುಗ್ರಾಮ ಟೆನಿಸ್ ಆಟಗಾರ್ತಿ ಕೊಲೆ: ತಂದೆ 'ಹೇಳಿಕೆ'ಗೆ ಮರಣೋತ್ತರ ಪರೀಕ್ಷಾ ವರದಿ ತದ್ವಿರುದ್ಧ!

ರಾಧಿಕಾ ಅವರ ಎದೆಯ ಮೇಲೆ ನಾಲ್ಕು ಗುಂಡೇಟಿನ ಗಾಯಗಳಾಗಿದ್ದು, ಎಲ್ಲಾ ಗುಂಡುಗಳನ್ನು ಅವರ ದೇಹದಿಂದ ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
Deepak Yadav
ಬಂಧಿತ ದೀಪಕ್ ಯಾದವ್
Updated on

ಗುರುಗ್ರಾಮ: 25 ವರ್ಷದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಹತ್ಯೆ ಮಾಡಿದ ತಂದೆ ದೀಪಕ್ ಯಾದವ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದಾಖಲಿಸಲಾದ ಪ್ರಮುಖ ಹೇಳಿಕೆಗಳಿಗೆ ಮರಣೋತ್ತರ ಪರೀಕ್ಷೆಯ ವರದಿಯು ತದ್ವಿರುದ್ಧವಾಗಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಗುರ್ಗಾಂವ್ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ದೀಪಕ್ ಮಾಥುರ್ ಅವರು ದೂರವಾಣಿ ಮೂಲಕ ಮಾತನಾಡಿದ್ದು, ರಾಧಿಕಾ ಅವರ ಎದೆಯ ಮೇಲೆ ನಾಲ್ಕು ಗುಂಡೇಟಿನ ಗಾಯಗಳಾಗಿದ್ದು, ಎಲ್ಲಾ ಗುಂಡುಗಳನ್ನು ಅವರ ದೇಹದಿಂದ ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ದೀಪಕ್ ತನ್ನ ಮಗಳ ಮೇಲೆ ಹಿಂದಿನಿಂದ ಮೂರು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಹೇಳಲಾದ ಎಫ್‌ಐಆರ್‌ಗೆ ಈ ಬಹಿರಂಗಪಡಿಸುವಿಕೆಯು ಸಂಪೂರ್ಣ ವಿರುದ್ಧವಾಗಿದೆ. ಈ ವ್ಯತ್ಯಾಸವು 25 ವರ್ಷದ ಯುವತಿಯ ಸಾವಿಗೆ ಕಾರಣವಾದ ಘಟನೆಗಳ ಅನುಕ್ರಮ ಮತ್ತು ಆರೋಪಿಯ ತಪ್ಪೊಪ್ಪಿಗೆಯ ನಿಖರತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Deepak Yadav
ಗುರುಗ್ರಾಮ ಟೆನಿಸ್ ಆಟಗಾರ್ತಿ ಕೊಲೆ: ಮಗಳ ಹಣದಲ್ಲಿ ಬದುಕಿದ್ದಕ್ಕೆ ನಿಂದನೆ; ರಾಧಿಕಾ ತಂದೆ ತಪ್ಪೊಪ್ಪಿಗೆ

ದೀಪಕ್ ಯಾದವ್ ತನ್ನ ಮಗಳ ಆದಾಯದಲ್ಲಿ ತಾನು ಜೀವನ ಮಾಡುತ್ತೀರುವ ಬಗ್ಗೆ ಪದೇಪದೆ ನಿಂದಿಸಿದ್ದರಿಂದ ತನ್ನ ಮಗಳ ಮೇಲೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.

ಈ ಮಧ್ಯೆ ಪೊಲೀಸರು ಶುಕ್ರವಾರ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಒಂದು ದಿನ ಕಸ್ಟಡಿಗೆ ಪಡೆದಿದ್ದಾರೆ.

ರಾಧಿಕಾ ಅವರ ಚಿಕ್ಕಪ್ಪ ಕುಲದೀಪ್ ಯಾದವ್ ಅವರ ದೂರಿನ ಮೇರೆಗೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ, ಬೆಳಗ್ಗೆ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸೆಕ್ಟರ್ 57 ರಲ್ಲಿರುವ ತಮ್ಮ ಕುಟುಂಬದ ಎರಡು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ವಾಸಿಸುವ ಕುಲದೀಪ್, ದೊಡ್ಡ ಶಬ್ದ ಕೇಳಿ ಮೇಲಕ್ಕೆ ಓಡಿಹೋದಾಗ, ಅಡುಗೆಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಧಿಕಾ ಅವರನ್ನು ನೋಡಿದೆ. ಕೊಲೆಗೆ ಬಳಸಿದ ಪರವಾನಗಿ ಪಡೆದ .32 ಬೋರ್ ರಿವಾಲ್ವರ್ ಡ್ರಾಯಿಂಗ್ ರೂಮಿನಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com