ಕೇಜ್ರಿವಾಲ್, ಸೊರೇನ್ ಬಂಧಿಸಿದ್ದ ತೆರಿಗೆ ಅಧಿಕಾರಿ ರಾಜೀನಾಮೆ!

ಕಪಿಲ್ ರಾಜ್ ಸುಮಾರು 8 ವರ್ಷಗಳ ಕಾಲ ಜಾರಿ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಇತ್ತೀಚೆಗೆ ಫೆಡರಲ್ ಹಣ ಅಕ್ರಮ ವರ್ಗಾವಣೆ ತಡೆ ಸಂಸ್ಥೆಯಲ್ಲಿ ತಮ್ಮ ನಿಯೋಜನೆಯನ್ನು ಪೂರ್ಣಗೊಳಿಸಿದ್ದರು.
Kapil Raj
ಕಪಿಲ್ ರಾಜ್
Updated on

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾನೂನಿನಡಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳ ಬಂಧನದ ಮೇಲ್ವಿಚಾರಣೆ ನಡೆಸಿದ್ದ, ಜಾರಿ ನಿರ್ದೇಶನಾಲಯದ ಅಧಿಕಾರಿ ಕಪಿಲ್ ರಾಜ್, ಸುಮಾರು 16 ವರ್ಷಗಳ ಕಾಲದ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದಾರೆ.

ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದಲ್ಲಿ, "ಭಾರತೀಯ ರಾಷ್ಟ್ರಪತಿಗಳು ಜುಲೈ 17 ರಿಂದ ಜಾರಿಗೆ ಬರುವಂತೆ ಭಾರತೀಯ ಕಂದಾಯ ಸೇವೆ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ಗೆ ತಮ್ಮ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ" ಎಂದು ತಿಳಿಸಲಾಗಿದೆ. 45 ವರ್ಷದ ಅಧಿಕಾರಿ ಕಪಿಲ್ ರಾಜ್ 2009 ರ ಬ್ಯಾಚ್‌ನ ಐಆರ್‌ಎಸ್‌ಗೆ ಸೇರಿದವರಾಗಿದ್ದಾರೆ.

ಹೇಮಂತ್ ಸೋರೆನ್ (ಜಾರ್ಖಂಡ್) ಮತ್ತು ಅರವಿಂದ್ ಕೇಜ್ರಿವಾಲ್ (ದೆಹಲಿ) ಅವರ ಬಂಧನ ಪ್ರಕ್ರಿಯೆಯಲ್ಲಿ ಕಪಿಲ್ ರಾಜ್ ಭಾಗಿಯಾಗಿದ್ದರು. ಅಧಿಕಾರಿಯ ಆಪ್ತ ಮೂಲಗಳು ಪಿಟಿಐ ಜೊತೆ ಮಾತನಾಡಿದ್ದು, ಅವರಿಗೆ ಇನ್ನೂ 15 ವರ್ಷಗಳ ಕಾಲ ಸೇವಾ ಅವಧಿ ಇದ್ದರೂ ಸರ್ಕಾರಿ ಸೇವೆಯಿಂದ ರಾಜೀನಾಮೆ ನೀಡಲು ವೈಯಕ್ತಿಕ ಕಾರಣಗಳಿವೆ ಎಂದು ಹೇಳಿದ್ದಾರೆ.

ಕಪಿಲ್ ರಾಜ್ ಸುಮಾರು 8 ವರ್ಷಗಳ ಕಾಲ ಜಾರಿ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಇತ್ತೀಚೆಗೆ ಫೆಡರಲ್ ಹಣ ಅಕ್ರಮ ವರ್ಗಾವಣೆ ತಡೆ ಸಂಸ್ಥೆಯಲ್ಲಿ ತಮ್ಮ ನಿಯೋಜನೆಯನ್ನು ಪೂರ್ಣಗೊಳಿಸಿದ್ದರು.

ರಾಜೀನಾಮೆ ನೀಡುವವರೆಗೂ ಅವರನ್ನು ದೆಹಲಿಯ ಜಿಎಸ್‌ಟಿ ಗುಪ್ತಚರ ವಿಭಾಗದಲ್ಲಿ ಹೆಚ್ಚುವರಿ ಆಯುಕ್ತರಾಗಿ ನೇಮಿಸಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ರಾಂಚಿಯಲ್ಲಿ ನಡೆದ ಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಸೊರೇನ್ ಅವರನ್ನು ಬಂಧಿಸುವ ಮೇಲ್ವಿಚಾರಣೆಯನ್ನು ಈ ಅಧಿಕಾರಿ ವಹಿಸಿದ್ದರು.

ಕೆಲವು ತಿಂಗಳ ನಂತರ ಮಾರ್ಚ್ 2024 ರಲ್ಲಿ, ಅಧಿಕಾರಿ ಆಗಿನ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಸರ್ಕಾರಿ ಬಂಗಲೆಯ ಮೇಲೆ ಇಡಿ ದಾಳಿ ನಡೆಸಿದ್ದರು. ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು ಮತ್ತು ಬಂಧನ ಜ್ಞಾಪಕ ಪತ್ರವನ್ನು ಸಿದ್ಧಪಡಿಸಿ ಎಎಪಿ ಮುಖ್ಯಸ್ಥರಿಗೆ ತಲುಪಿಸುವಾಗ ರಾಜ್ ಹಾಜರಿದ್ದರು.

ಈ ಉನ್ನತ ಮಟ್ಟದ ರಾಜಕೀಯ ಬಂಧಿತರಿಗೆ ಪ್ರಶ್ನಾವಳಿಗಳನ್ನು ಅಧಿಕಾರಿ ಸಿದ್ಧಪಡಿಸುತ್ತಿದ್ದರು ಮತ್ತು ಪರಿಶೀಲಿಸುತ್ತಿದ್ದರು ಮತ್ತು ತನಿಖೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅವರ ತಂಡಗಳ ನೈತಿಕತೆಯನ್ನು ಹೆಚ್ಚಿಸಲು ಅವರು ಹಲವು ಬಾರಿ ಶೋಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಎಂದು ಹಿರಿಯ ED ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Kapil Raj
ಮದ್ಯ ಹಗರಣ ಪ್ರಕರಣ: ಛತ್ತೀಸ್‌ಗಢ ಮಾಜಿ ಸಿಎಂ ಭೂಪೇಶ್ ಭಘೇಲ್ ನಿವಾಸದ ಮೇಲೆ ED ದಾಳಿ, ತೀವ್ರ ಶೋಧ

ಬಿಟೆಕ್ (ಎಲೆಕ್ಟ್ರಾನಿಕ್ಸ್) ಪದವೀಧರರಾದ ರಾಜ್, ಇಡಿಯ ರಾಂಚಿ ವಲಯವನ್ನು ಅದರ ಜಂಟಿ ನಿರ್ದೇಶಕರಾಗಿ ಮುನ್ನಡೆಸುತ್ತಿದ್ದರು. ರಾಜಕೀಯವಾಗಿ ಸೂಕ್ಷ್ಮ ಮತ್ತು ಸಂಕೀರ್ಣ ಪ್ರಕರಣಗಳನ್ನು ತನಿಖೆ ಮಾಡುವ ಪ್ರಧಾನ ಕಚೇರಿ ತನಿಖಾ ಘಟಕ (HIU) ಕೈಗೊಂಡ ಸಂಸ್ಥೆಯ ಕೆಲವು ಉನ್ನತ ಮಟ್ಟದ ತನಿಖೆಗಳನ್ನು ಸಹ ಅವರು ಮೇಲ್ವಿಚಾರಣೆ ಮಾಡಿದರು.

ಮುಂಬೈನಲ್ಲಿ ED ಯ ಉಪ ನಿರ್ದೇಶಕರಾಗಿ ನೇಮಕಗೊಂಡಾಗ, ಅಧಿಕಾರಿಯು DHFL ಮತ್ತು ಇಕ್ಬಾಲ್ ಮಿರ್ಚಿ ಪ್ರಕರಣಗಳ ಜೊತೆಗೆ ವಜ್ರ ವ್ಯಾಪಾರಿ ಜೋಡಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧದ ಹಣ ವರ್ಗಾವಣೆ ಪ್ರಕರಣಗಳನ್ನು ಸಹ ತನಿಖೆ ಮಾಡಿದರು. ರಾಜ್ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com