Jagdeep Dhankhar: ಅವರು ಪಕ್ಷಪಾತಿಯಾಗಿದ್ದರು, ಆರೋಗ್ಯ ಉತ್ತಮವಾಗಿದ್ದರೂ ದಿಢೀರ್ ರಾಜೀನಾಮೆ ಏಕೆ?; ಶಿವಸೇನೆ ಯುಬಿಟಿ ಸಂಸದೆ

"ಸದನದ ಕಲಾಪಗಳಲ್ಲಿ ಮತ್ತು ಉಪರಾಷ್ಟ್ರಪತಿಯಾಗಿ ಮತ್ತು ಅಧ್ಯಕ್ಷರಾಗಿ ಅವರ ಕೆಲಸದಲ್ಲಿ ಯಾವುದೇ ಅಡ್ಡಿ ಉಂಟಾಗಬಾರದು" ಎಂದು ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.
Jagadeep Dhankhar- Priyanka Chaturvedi
ಜಗದೀಪ್ ಧನ್ಕರ್- ಪ್ರಿಯಾಂಕ ಚತುರ್ವೇದಿonline desk
Updated on

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಕುರಿತು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯೆ ನೀಡಿದ್ದು, "ಅವರ ಆರೋಗ್ಯ ಸ್ಥಿತಿಯ ಹೊರತಾಗಿಯೂ, ಅವರು ಸಂಸತ್ತಿನ ಕಲಾಪಗಳನ್ನು ನಡೆಸುತ್ತಿದ್ದರು. ಉಪರಾಷ್ಟ್ರಪತಿಯೊಬ್ಬರು ಇಷ್ಟು ಆಘಾತಕಾರಿ ರೀತಿಯಲ್ಲಿ ರಾಜೀನಾಮೆ ನೀಡಿದ್ದು ಇದೇ ಮೊದಲು ಮತ್ತು ನಾವು ಇನ್ನಷ್ಟು ತಿಳಿದುಕೊಳ್ಳಬೇಕೆಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.

"ಸದನದ ಕಲಾಪಗಳಲ್ಲಿ ಮತ್ತು ಉಪರಾಷ್ಟ್ರಪತಿಯಾಗಿ ಮತ್ತು ಅಧ್ಯಕ್ಷರಾಗಿ ಅವರ ಕೆಲಸದಲ್ಲಿ ಯಾವುದೇ ಅಡ್ಡಿ ಉಂಟಾಗಬಾರದು"ಎಂದು ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಚತುರ್ವೇದಿ, "ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಸದನದ ಪಕ್ಷಪಾತದ ರೀತಿಯಲ್ಲಿ ನಡೆಯುತ್ತಿದ್ದ ಕಾರಣ ಸಂಸತ್ತಿನ 50 ಕ್ಕೂ ಹೆಚ್ಚು ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದರು. ಅವರು (ಉಪರಾಷ್ಟ್ರಪತಿ ಜಗದೀಪ್ ಧನ್ಕರ್) ಪಕ್ಷಪಾತಿಯಾಗಿದ್ದರು. ಅವರು ಉತ್ತಮ ಆರೋಗ್ಯದಲ್ಲಿ ಕಾಣುತ್ತಿದ್ದರಿಂದ ಹಠಾತ್ ರಾಜೀನಾಮೆಗೆ ಕಾರಣವೇನೆಂದು ಸರ್ಕಾರ ನಮಗೆ ತಿಳಿಸಬೇಕು." ಎಂದು ಆಗ್ರಹಿಸಿದ್ದಾರೆ.

Jagadeep Dhankhar- Priyanka Chaturvedi
ಮಧ್ಯಂತರದಲ್ಲಿ ರಾಜೀನಾಮೆ ನೀಡಿದ ಮೂರನೇ VP ಜಗದೀಪ್ ಧನ್ಕರ್: ಈ ಹಿಂದೆ ಹುದ್ದೆ ತ್ಯಜಿಸಿದವರು ಯಾರ್ಯಾರು...?

"ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ನಡೆದ ಮೊದಲ ಅಧಿವೇಶನ ಮಾನ್ಸೂನ್ ಅಧಿವೇಶನ ಎಂದು ಪರಿಗಣಿಸಿದರೆ ಇದಕ್ಕೆ ಆದ್ಯತೆ ನೀಡಲಾಗುವುದು ಎಂದು ನಾವು ಭಾವಿಸಿದ್ದೆವು. ಸರ್ಕಾರ ಇದಕ್ಕೆ ಆದ್ಯತೆ ನೀಡಿದಂತೆ ಕಾಣಲಿಲ್ಲ. ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ದೇಶದ ಜನರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಮಾತನಾಡಲು ಮತ್ತು ಭಾರತ ಸರ್ಕಾರದಿಂದ ಉತ್ತರಗಳನ್ನು ಪಡೆಯಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com