ಆತ್ಮಹತ್ಯೆ ಮಾಡಿಕೊಳ್ಳಲು ಬೈಗುಳವನ್ನು ಪ್ರಚೋದನೆ ಎಂದು ಭಾವಿಸಲು ಆಗಲ್ಲ: ಸುಪ್ರೀಂ ಕೋರ್ಟ್

ಶಾಲೆ ಮತ್ತು ಹಾಸ್ಟೆಲ್‌ನ ಉಸ್ತುವಾರಿ ವಹಿಸಿದ್ದ ಆರೋಪಿಯು, ಮತ್ತೊಬ್ಬ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮೃತ ವಿದ್ಯಾರ್ಥಿಯನ್ನು ಬೈದಿದ್ದನು.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ವಿದ್ಯಾರ್ಥಿಯೊಬ್ಬನನ್ನು ಗದರಿಸಿ ಆತ್ಮಹತ್ಯೆಗೆ ದೂಡಿದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬನನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದ್ದು, ವಿದ್ಯಾರ್ಥಿಯ ಸಾವಿಗೆ ಆತನನ್ನು ಹೊಣೆಗಾರನನ್ನಾಗಿ ಮಾಡಲು ಸಾಕಷ್ಟು ಪುರಾವೆಗಳಿಲ್ಲ ಎಂದು ತೀರ್ಪು ನೀಡಿದೆ.

ಶಾಲೆ ಮತ್ತು ಹಾಸ್ಟೆಲ್‌ನ ಉಸ್ತುವಾರಿ ವಹಿಸಿದ್ದ ಆರೋಪಿಯು, ಮತ್ತೊಬ್ಬ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮೃತ ವಿದ್ಯಾರ್ಥಿಯನ್ನು ಬೈದಿದ್ದನು. ಈ ಘಟನೆಯ ನಂತರ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು, ಬೈಯುವುದರಿಂದ ಇಂತಹ ದುರಂತ ಸಂಭವಿಸುತ್ತದೆ ಎಂದು ಯಾವುದೇ ಸಾಮಾನ್ಯ ವ್ಯಕ್ತಿ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ಶಿಕ್ಷಕನನ್ನು ಬಿಡುಗಡೆ ಮಾಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

'ಈ ವಿಷಯವನ್ನು ಸಂಪೂರ್ಣವಾಗಿ ಪರಿಗಣಿಸಿದ ನಂತರ, ಇದು ಹಸ್ತಕ್ಷೇಪಕ್ಕೆ ಸೂಕ್ತವಾದ ಪ್ರಕರಣವೆಂದು ನಾವು ಕಂಡುಕೊಂಡಿದ್ದೇವೆ. ವಿದ್ಯಾರ್ಥಿಯೊಬ್ಬನ ದೂರಿನ ಆಧಾರದ ಮೇಲೆ ಮತ್ತೊಬ್ಬ ವಿದ್ಯಾರ್ಥಿಯನ್ನು ಬೈಯುವುದರಿಂದ ಅಥವಾ ಗದರಿಸುವುದರಿಂದ, ಆತ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ಇಂತಹ ದುರಂತ ಉಂಟಾಗುತ್ತದೆ ಎಂದು ಯಾವುದೇ ಸಾಮಾನ್ಯ ವ್ಯಕ್ತಿ ಊಹಿಸಲು ಸಾಧ್ಯವಿಲ್ಲ' ಎಂದು ಪೀಠ ಹೇಳಿದೆ.

ಸುಪ್ರೀಂ ಕೋರ್ಟ್
ಬೆಂಗಳೂರು: Online Gaming ವ್ಯಸನಕ್ಕೆ ಬಿದ್ದ ಡಿಪ್ಲೊಮೊ ವಿದ್ಯಾರ್ಥಿ; ತನ್ನದೇ ಕುಟುಂಬದ ಮೂವರಿಗೆ ಚಾಕು ಇರಿತ!

ಮೃತ ವಿದ್ಯಾರ್ಥಿಯ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿ ಮಾಡಿದ ದೂರನ್ನು ಅಂಗೀಕರಿಸಿ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಮಾತ್ರವೇ ವಿದ್ಯಾರ್ಥಿಯನ್ನು ಗದರಿಸಲಾಯಿತು. ಇದನ್ನು ಹೊರತುಪಡಿಸಿ ಆರೋಪಿಗೆ ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಕರಣದ ಸತ್ಯಗಳ ಆಧಾರದ ಮೇಲೆ, ಆರೋಪಿ (ಮೇಲ್ಮನವಿ ಸಲ್ಲಿಸಿದವರು) ಯಾವುದೇ ತಪ್ಪು ಕೃತ್ಯ ಎಸಗುವ ಉದ್ದೇಶ ಹೊಂದಿಲ್ಲ. ಆದ್ದರಿಂದ, ಮೃತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನುವ ಆರೋಪಕ್ಕೆ ಆರೋಪಿಯೇ ಕಾರಣ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ತನ್ನ ವಕೀಲರ ಮೂಲಕ ತನ್ನ ಕ್ರಮಗಳು ಸಮರ್ಥನೀಯವೆಂದು ವಾದಿಸಿದ್ದು, ಮೃತ ವ್ಯಕ್ತಿಯು ಮತ್ತೆ ಅಪರಾಧ ಮಾಡದಂತೆ ತಡೆಯಲು ಮತ್ತು ಹಾಸ್ಟೆಲ್‌ನಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ರಕ್ಷಕನಾಗಿ ತಾನು ಕೇವಲ ವಾಗ್ದಂಡನೆ ಮಾತ್ರ ಮಾಡಿದ್ದೇನೆ. ತನ್ನ ಮತ್ತು ಮೃತ ವ್ಯಕ್ತಿಯ ನಡುವೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com