ಅಮರನಾಥ ಯಾತ್ರೆ ಮಾರ್ಗ ಹಾರಾಟ ನಿಷೇಧಿತ ವಲಯ ಎಂದು ಘೋಷಣೆ

ಜುಲೈ 1 ರಿಂದ ಆಗಸ್ಟ್ 10 ರವರೆಗೆ ಅವಳಿ ಯಾತ್ರಾ ಮಾರ್ಗಗಳಲ್ಲಿ ಯಾವುದೇ ರೀತಿಯ ವಾಯುಯಾನ ಸಂಚಾರ ಮತ್ತು ಯುಎವಿಗಳು, ಡ್ರೋನ್‌ಗಳು, ಬಲೂನ್‌ಗಳು ಸೇರಿದಂತೆ ಯಾವುದೇ ಸಾಧನಗಳ ಹಾರಾಟವನ್ನು ನಿಷೇಧಿಸಲಾಗಿದೆ.
Amarnath Yatra pilgrimage route
ಅಮರನಾಥ ಯಾತ್ರೆ
Updated on

ಶ್ರೀನಗರ: ಮುಂಬರುವ 38 ದಿನಗಳ ಅಮರನಾಥ ಯಾತ್ರೆಗೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜುಲೈ 1 ರಂದು ಯಾತ್ರೆ ಆರಂಭವಾಗುವ ಎರಡು ದಿನಗಳ ಮೊದಲು, ಯಾತ್ರೆಯ ಎರಡೂ ಮಾರ್ಗಗಳನ್ನು 'ಹಾರಾಟ ನಿಷೇಧ ವಲಯ' ಎಂದು ಘೋಷಿಸಿದೆ.

ಅಮರನಾಥ ಯಾತ್ರೆಯು ಎರಡು ಮಾರ್ಗಗಳನ್ನು ಹೊಂದಿದೆ. ಒಂದು ದಕ್ಷಿಣ ಕಾಶ್ಮೀರದಿಂದ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗ. ಮತ್ತೊಂದು ಮಧ್ಯ ಕಾಶ್ಮೀರದಿಂದ ಬಾಲ್ಟಾಲ್ ಮಾರ್ಗ.

"ಜುಲೈ 1 ರಿಂದ ಆಗಸ್ಟ್ 10 ರವರೆಗೆ ಈ ಎರಡೂ ಮಾರ್ಗಗಳನ್ನು 'ಹಾರಾಟ ನಿಷೇಧಿತ ವಲಯ' ಎಂದು ಘೋಷಿಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿತ್ತು. ಭದ್ರತೆಯನ್ನು ಬಲಪಡಿಸುವ ದೃಷ್ಟಿಯಿಂದ, ಪಹಲ್ಗಾಮ್ ಅಕ್ಷ ಮತ್ತು ಬಾಲ್ಟಾಲ್ ಅಕ್ಷ ಎರಡನ್ನೂ ಒಳಗೊಂಡಂತೆ ಯಾತ್ರೆಯ ಎಲ್ಲಾ ಮಾರ್ಗಗಳನ್ನು 'ಹಾರಾಟ ನಿಷೇಧಿತ ವಲಯ' ಎಂದು ಘೋಷಿಸಲಾಗಿದೆ" ಎಂದು ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

Amarnath Yatra pilgrimage route
ಅಮರನಾಥ ಯಾತ್ರೆ ಭದ್ರತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 42,000 ಸಿಬ್ಬಂದಿ ನಿಯೋಜನೆ!

ಜುಲೈ 1 ರಿಂದ ಆಗಸ್ಟ್ 10 ರವರೆಗೆ ಅವಳಿ ಯಾತ್ರಾ ಮಾರ್ಗಗಳಲ್ಲಿ ಯಾವುದೇ ರೀತಿಯ ವಾಯುಯಾನ ಸಂಚಾರ ಮತ್ತು ಯುಎವಿಗಳು, ಡ್ರೋನ್‌ಗಳು, ಬಲೂನ್‌ಗಳು ಸೇರಿದಂತೆ ಯಾವುದೇ ಸಾಧನಗಳ ಹಾರಾಟವನ್ನು ನಿಷೇಧಿಸಲಾಗಿದೆ.

ವಾರ್ಷಿಕ ಅಮರನಾಥ ಯಾತ್ರೆ ಜುಲೈ 3 ರಂದು ಪ್ರಾರಂಭವಾಗಿ ಆಗಸ್ಟ್ 9 ರಂದು ರಕ್ಷಾ ಬಂಧನದ ದಿನದೊಂದಿಗೆ ಮುಕ್ತಾಯಗೊಳ್ಳಲಿದೆ. ಆದಾಗ್ಯೂ, ಭದ್ರತಾ ಪಡೆಗಳು ನಡೆಸುವ ವೈದ್ಯಕೀಯ ಸ್ಥಳಾಂತರಿಸುವಿಕೆ, ವಿಪತ್ತು ನಿರ್ವಹಣೆ ಅಥವಾ ಕಣ್ಗಾವಲು ಕಾರ್ಯಾಚರಣೆಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com