ಉತ್ತರಾಖಂಡ: ಯಾತ್ರಿಕರಿದ್ದ ವಾಹನ ಅಲಕಾನಂದ ನದಿಗೆ ಉರುಳಿ ದುರಂತ; ಇಬ್ಬರು ಸಾವು, 10 ಮಂದಿ ನಾಪತ್ತೆ

ನದಿಯಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ, ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಟೆಂಪೋ ಟ್ರಾವೆಲರ್ ಬದ್ರಿನಾಥ್ ಧಾಮ್ ಕಡೆಗೆ ಹೋಗುತ್ತಿತ್ತು.
Accident spot
ಅಪಘಾತ ಸ್ಥಳ
Updated on

ರುದ್ರಪ್ರಯಾಗ: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಅಲಕನಂದಾ ನದಿಗೆ ಬಿದ್ದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಹಾಗೂ ಹತ್ತು ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರುದ್ರಪ್ರಯಾಗ ಮತ್ತು ಗೌಚರ್ ನಡುವಿನ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಘೋಲ್ತಿರ್ ಗ್ರಾಮದ ಬಳಿ ಟೆಂಪೋ ಟ್ರಾವೆಲರ್ ವಾಹನ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದರು

ನದಿಯಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ, ಒಂದು ಅಪಘಾತ ಸ್ಥಳದ ಬಳಿ ಮತ್ತು ಇನ್ನೊಂದು ರುದ್ರಪ್ರಯಾಗ ಬಳಿಯ ನದಿಯಿಂದ ಎಂದು ರೆಡ್ ಕ್ರಾಸ್ ಸೊಸೈಟಿ ರಕ್ಷಣಾ ತಂಡದ ಸದಸ್ಯ ಸತ್ಯೇಂದ್ರ ಸಿಂಗ್ ಭಂಡಾರಿ ಪಿಟಿಐಗೆ ತಿಳಿಸಿದ್ದಾರೆ.

ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಮತ್ತು ಹತ್ತು ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನದಿಗೆ ಬಿದ್ದಾಗ ವಾಹನದಲ್ಲಿ ಚಾಲಕ ಸೇರಿದಂತೆ 20 ಜನರು ಇದ್ದರು ಎಂದು ಭಂಡಾರಿ ಹೇಳಿದರು.

ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಟೆಂಪೋ ಟ್ರಾವೆಲರ್ ಬದ್ರಿನಾಥ್ ಧಾಮ್ ಕಡೆಗೆ ಹೋಗುತ್ತಿತ್ತು ಎಂದು ಗಾಯಾಳುಗಳನ್ನು ಉಲ್ಲೇಖಿಸಿ ಅವರು ಹೇಳಿದರು. ರಾಜಸ್ಥಾನದ ಉದಯಪುರದಿಂದ ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ಯಾತ್ರಾರ್ಥಿಗಳು ಬಂದಿದ್ದರು..

Accident spot
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಪ್ರವಾಹಕ್ಕೆ ಇಬ್ಬರು ಸಾವು; 23 ಜನರು ಕೊಚ್ಚಿ ಹೋಗಿರುವ ಶಂಕೆ; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com