ಅಪ್ರಾಪ್ತ ದಲಿತ ಬಾಲಕಿಯ ಬಲವಂತ ಮತಾಂತರ; ಭಯೋತ್ಪಾದನೆಗೆ ಪ್ರಚೋದನೆ

ಉತ್ತರ ಪ್ರದೇಶದ ತನ್ನ ಹಳ್ಳಿಯಿಂದ ಅಪ್ರಾಪ್ತ ವಯಸ್ಕ ದಲಿತ ಬಾಲಕಿಯನ್ನು ಕೇರಳಕ್ಕೆ ಕರೆದೊಯ್ದು ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಕ ಮಾಡಿಕೊಳ್ಳುವ ಮುನ್ನ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ.
ಅಪ್ರಾಪ್ತ ದಲಿತ ಬಾಲಕಿಯ ಬಲವಂತ ಮತಾಂತರ; ಭಯೋತ್ಪಾದನೆಗೆ ಪ್ರಚೋದನೆ
Updated on

ದಲಿತ ಬಾಲಿಕಿಯನ್ನು ಬಲವಂತವಾಗಿ ಮತಾಂತರ ಮಾಡಿ ಆಕೆಯನ್ನು ಭಯೋತ್ಪಾದನೆಗೆ ಒತ್ತಾಯಪೂರ್ವಕವಾಗಿ ನೇಮಕ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ತನ್ನ ಹಳ್ಳಿಯಿಂದ ಅಪ್ರಾಪ್ತ ವಯಸ್ಕ ದಲಿತ ಬಾಲಕಿಯನ್ನು ಕೇರಳಕ್ಕೆ ಕರೆದೊಯ್ದು ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಕ ಮಾಡಿಕೊಳ್ಳುವ ಮುನ್ನ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೇ 8ರಂದು ಪ್ರಯಾಗ್‌ರಾಜ್ ಜಿಲ್ಲೆಯ ಫೂಲ್‌ಪುರ ಪ್ರದೇಶದ ತನ್ನ ಹಳ್ಳಿಯಿಂದ 15 ವರ್ಷದ ಬಾಲಕಿಯನ್ನು ಕರೆದೊಯ್ಯಲಾಗಿತ್ತು ಎನ್ನಲಾದ ಆಕೆ ಕೇರಳದಿಂದ ತಪ್ಪಿಸಿಕೊಂಡು ತನ್ನ ತಾಯಿಯನ್ನು ಸಂಪರ್ಕಿಸಿದಾಗ ಪಿತೂರಿ ಬಯಲಾಗಿದೆ. ಘಟನೆ ಸಂಬಂಧ ಇಬ್ಬರು ಜನರನ್ನು ಬಂಧಿಸಲಾಗಿದೆ. ಡಿಸಿಪಿ (ಗಂಗಾ ನಗರ) ಕುಲದೀಪ್ ಸಿಂಗ್ ಗುಣವತ್ ಅವರ ಪ್ರಕಾರ, ಬಾಲಕಿಯನ್ನು ಜಿಹಾದಿ ಚಟುವಟಿಕೆಗಳಿಗೆ ಸೇರಲು ಒತ್ತಾಯಿಸಲಾಗುತ್ತಿತ್ತು. ಈ ಜಾಲದಿಂದ ಆಕೆ ಹೇಗೋ ತಪ್ಪಿಸಿಕೊಂಡು ತ್ರಿಶೂರ್ ರೈಲ್ವೆ ನಿಲ್ದಾಣವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ. ಅಲ್ಲಿಂದ ಅವಳು ಸ್ಥಳೀಯ ಪೊಲೀಸರ ಸಹಾಯದಿಂದ ತನ್ನ ತಾಯಿಯನ್ನು ತಲುಪಿದ್ದಾಳೆ.

ಅಪ್ರಾಪ್ತ ದಲಿತ ಬಾಲಕಿಯ ಬಲವಂತ ಮತಾಂತರ; ಭಯೋತ್ಪಾದನೆಗೆ ಪ್ರಚೋದನೆ
ಹಾವೇರಿ: ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ ಯುವತಿ ಆತ್ಮಹತ್ಯೆ? ನದಾಫ್ ಬಂಧಿಸುವಂತೆ ಮುತಾಲಿಕ್ ಆಗ್ರಹ!

ಸಂತ್ರಸ್ತೆಗೆ ದರ್ಕ್ಷಾ ಬಾನೋ ಎಂಬ 19 ವರ್ಷದ ಮಹಿಳೆ ಆಮಿಷವೊಡ್ಡಿದ್ದಾಳೆ ಎಂದು ಆರೋಪಿಸಲಾಗಿದೆ. ಅವರನ್ನು ಮೊಹಮ್ಮದ್ ಕೈಫ್ ಎಂಬ ವ್ಯಕ್ತಿಯೊಂದಿಗೆ ಬಂಧಿಸಲಾಗಿದೆ. ಕೇರಳದ ಆಕೆಯ ತಾಯಿಯನ್ನು ಸಂಪರ್ಕಿಸಿದ ನಂತರ, ಬಾಲಕಿಯನ್ನು ಪ್ರಯಾಗ್‌ರಾಜ್‌ಗೆ ಕರೆತರಲಾಯಿತು ಮತ್ತು ಪ್ರಸ್ತುತ ರಕ್ಷಣೆಗಾಗಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಇರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com