Representational image
ಸಾಂದರ್ಭಿಕ ಚಿತ್ರonline desk

ಜಾಮೀನು ಪಡೆದು ಬಿಡುಗಡೆಯಾದ ವ್ಯಕ್ತಿ; ಇನ್ಸ್ಟಾಗ್ರಾಮ್ ನಲ್ಲಿ ಉದ್ಧಟತನದ ಪೋಸ್ಟ್, ಮತ್ತೆ ಬಂಧನ!

ಜೈಲಿನಿಂದ ಹೊರಬಂದ ತಕ್ಷಣ, ಠಾಕೂರ್ 'ಸ್ವಾಗತ ಭಾಯ್, ಬಾಪ್ ತೋ ಬಾಪ್ ರಹಂಗಾ' ಎಂಬ ಸಂದೇಶದೊಂದಿಗೆ Instagram ರೀಲ್ ಪೋಸ್ಟ್ ಮಾಡಿದರು.
Published on

MCOCA ಪ್ರಕರಣದಲ್ಲಿ ಜಾಮೀನು ಪಡೆದ ಕೂಡಲೇ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸಲು Instagram ರೀಲ್ ಪೋಸ್ಟ್ ಮಾಡಿದ್ದಕ್ಕಾಗಿ ನಾಗ್ಪುರದ ಕುಖ್ಯಾತ ಅಪರಾಧಿಯೊಬ್ಬನನ್ನು ಮತ್ತೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಸುಮಿತ್ ಠಾಕೂರ್, ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದ ನಂತರ ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ (MCOCA) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನು ಪಡೆದಿದ್ದ.

Representational image
ಛತ್ರಸಾಲ್ ಕ್ರೀಡಾಂಗಣದಲ್ಲಿ ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು

ಜೈಲಿನಿಂದ ಹೊರಬಂದ ತಕ್ಷಣ, ಠಾಕೂರ್ 'ಸ್ವಾಗತ ಭಾಯ್, ಬಾಪ್ ತೋ ಬಾಪ್ ರಹಂಗಾ' ಎಂಬ ಸಂದೇಶದೊಂದಿಗೆ Instagram ರೀಲ್ ಪೋಸ್ಟ್ ಮಾಡಿದರು.

ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸರ ಗಮನ ಸೆಳೆಯಿತು. ಸೈಬರ್ ಪೊಲೀಸರು ಠಾಕೂರ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಮತ್ತೆ ಬಂಧಿಸಿದರು ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com