'ನಿಮಗೆ ಹೋಳಿ ಬಣ್ಣ ಸಮಸ್ಯೆ ಆದರೆ, ಹಿಜಾಬ್‌ ತರ ಟಾರ್ಪಲ್ ಸುತ್ತಿಕೊಂಡು ಓಡಾಡಿ': ಮುಸ್ಲಿಂರಿಗೆ ಯುಪಿ ಸಚಿವರ ವಿಚಿತ್ರ ಸಲಹೆ!

ಹಿಂದೂಗಳ ಹಬ್ಬವಾದ ಹೋಳಿ ದಿನ ಮುಸ್ಲಿಮರಿಗಾಗಿ ಉತ್ತರ ಪ್ರದೇಶ ಸಚಿವ ರಘುರಾಜ್ ಸಿಂಗ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ಹೋಳಿ ಬಣ್ಣ ಮೈಗೆ ಸೋಕಬಾರದು ಎಂದಿದ್ದರೆ ಮುಸ್ಲಿಮ್ ಪುರುಷರು ಮಹಿಳೆಯರು ಧರಿಸುವಂತೆ ಟಾರ್ಪಾಲ್ (ಪಾಲಿಥಿನ್) ನಿಂದ ಮಾಡಿದ ಹಿಜಾಬ್ ಧರಿಸಲಿ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI
Updated on

ಲಖನೌ: ಹಿಂದೂಗಳ ಹಬ್ಬವಾದ ಹೋಳಿ ದಿನ ಮುಸ್ಲಿಮರಿಗಾಗಿ ಉತ್ತರ ಪ್ರದೇಶ ಸಚಿವ ರಘುರಾಜ್ ಸಿಂಗ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ಹೋಳಿ ಬಣ್ಣ ಮೈಗೆ ಸೋಕಬಾರದು ಎಂದಿದ್ದರೆ ಮುಸ್ಲಿಮ್ ಪುರುಷರು ಮಹಿಳೆಯರು ಧರಿಸುವಂತೆ ಟಾರ್ಪಲ್ (ಪಾಲಿಥಿನ್) ನಿಂದ ಮಾಡಿದ ಹಿಜಾಬ್ ಧರಿಸಲಿ ಎಂದು ಹೇಳಿದ್ದಾರೆ. ಪುರುಷರು ತಮ್ಮ ಟೋಪಿಗಳು ಮತ್ತು ದೇಹವನ್ನು ಬಣ್ಣದಿಂದ ರಕ್ಷಿಸಿಕೊಳ್ಳಲು ಟಾರ್ಪಾಲ್ ಸುತ್ತಿಕೊಳ್ಳಲಿ. ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅವರು ಮನೆಯಲ್ಲಿಯೇ ಇರಲಿ ಎಂದರು.

ಹೋಳಿ ಹಬ್ಬದ ಸಮಯದಲ್ಲಿ ಗೊಂದಲ ಸೃಷ್ಟಿಸುವವರಿಗೆ ಮೂರು ಆಯ್ಕೆಗಳಿವೆ. ಜೈಲಿಗೆ ಹೋಗುವುದು, ರಾಜ್ಯವನ್ನು ತೊರೆಯುವುದು ಅಥವಾ ಯಮರಾಜ್ ಜೊತೆ ನಿಮ್ಮ ಹೆಸರನ್ನು ಬರೆಯಿಸಿಕೊಳ್ಳುವುದು ಎಂದು ಸಚಿವ ರಘುರಾಜ್ ಸಿಂಗ್ ಹೇಳಿದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ದೇವಾಲಯ ನಿರ್ಮಿಸಲಾಗುವುದು. ಅವರು ಬಹುಸಂಖ್ಯಾತರನ್ನು ಗೌರವಿಸಬೇಕು ಎಂದು ರಘುರಾಜ್ ಸಿಂಗ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಘುರಾಜ್ ಸಿಂಗ್, ಶುಕ್ರವಾರ ವರ್ಷದಲ್ಲಿ 52 ಬಾರಿ ಬರುತ್ತದೆ. ಹೋಳಿ ಒಂದು ದಿನ ಬರುತ್ತದೆ ಎಂದು ಹೇಳಿದರು. ಆದ್ದರಿಂದ, ಒಂದು ದಿನ ತಡವಾಗಿ ನಮಾಜ್ ಮಾಡಿ. ಹೋಳಿ ಆಡುವಾಗ ನಮಾಜ್ ಓದಲೇಬೇಕಾದರೆ, ನನ್ನ ಸಲಹೆಯೆಂದರೆ ಬೇಗಂ ಹಿಜಾಬ್ ಧರಿಸಿದಂತೆಯೇ, ಬಣ್ಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಟಾರ್ಪಲ್ ಧರಿಸಿ ಎಂದು ಹೇಳಿದರು. ಸಚಿವರ ಪ್ರಕಾರ, ಸರ್ಕಾರ ಹೋಳಿ ಆಚರಿಸಲು ಆದೇಶಿಸಿದೆ. ಹೋಳಿ ಆಚರಿಸಲಾಗುವುದು. ಅದು ನಮ್ಮ ನಂಬಿಕೆಯ ಪ್ರಶ್ನೆ. ಸತ್ಯಯುಗ, ದ್ವಾಪರ, ತ್ರೇತಾ ನಂತರ ಈಗ ಕಲಿಯುಗದಲ್ಲಿಯೂ ಹೋಳಿ ಆಚರಿಸಲಾಗುತ್ತಿದೆ. ಅದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಕರಣದಲ್ಲಿ, ಸಚಿವ ರಘುರಾಜ್ ಸಿಂಗ್ ಅವರು, ಈ ವಿಶ್ವವಿದ್ಯಾಲಯವು ಪಾಕಿಸ್ತಾನದಲ್ಲಿ ಇಲ್ಲ, ಭಾರತದಲ್ಲಿರಬೇಕೆಂದು ನಾನು ಎಎಂಯು ಆಡಳಿತವನ್ನು ವಿನಂತಿಸುತ್ತೇನೆ ಎಂದು ಹೇಳಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಂದುವರಿಯುವುದಿಲ್ಲ. ಇಲ್ಲಿ ನಾವು ಬಹುಮತವನ್ನು ಅನುಸರಿಸಬೇಕಾಗುತ್ತದೆ. ಅವರು ನಮ್ಮ ತೆರಿಗೆಯಿಂದ ಸಂಬಳ ಪಡೆಯುತ್ತಾರೆ. ಎಎಂಯು ವಿದ್ಯಾರ್ಥಿಗಳು ತಪ್ಪು ತಿಳುವಳಿಕೆಗೆ ಬಲಿಯಾಗಬಾರದು. ಇಲ್ಲಿ ಭಾರತೀಯ ಕಾನೂನು ಅನ್ವಯಿಸುತ್ತದೆ. ಆಗ ಇದೆಲ್ಲವೂ ನಡೆಯುತ್ತಿದ್ದದ್ದು ಕಾಂಗ್ರೆಸ್ಸಿನ ಕಾಲವಾಗಿತ್ತು, ಆದರೆ ಈಗ ಹೋಳಿ ಆಚರಿಸಲಾಗುತ್ತದೆ ಮತ್ತು ಹೋಳಿಯಲ್ಲಿ ಗೊಂದಲ ಸೃಷ್ಟಿಸುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಇಲ್ಲದಿದ್ದರೆ ರಾಜ್ಯ ಬಿಟ್ಟು ಹೋಗಿ ಅಥವಾ ಅವರು ನಂಬುವ ದೇವರ ಪಾದ ಸೇರಲಿ ಎಂದು ಹೇಳಿದರು.

ಸಂಗ್ರಹ ಚಿತ್ರ
"ಮಸೀದಿಗೆ ಹೋಗ್ಬೇಕು, ಬಣ್ಣ ಇಷ್ಟ ಇಲ್ಲ ಎನ್ನುವವರು ಮನೆಯಲ್ಲಿರಿ, ವರ್ಷಕ್ಕೆ ಒಂದೇ Holi": ಪೊಲೀಸ್ ಅಧಿಕಾರಿ ಮಾತಿಗೆ ಯೋಗಿ ಫಿದಾ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com