ಕ್ಷಮೆ ಕೇಳಲು ಕುನಾಲ್ ಕಾಮ್ರಾ ನಿರಾಕರಣೆ: ಸರಿಯಾದ ನಿರ್ಧಾರ ಎಂದ ಕಾಂಗ್ರೆಸ್!

ಯಾರೊಬ್ಬರು ನಗಿಸುವುದಕ್ಕಾಗಿ ಹಾಸ್ಯ ಮಾಡಿದ್ದರೆ ಸರ್ಕಾರ ನಗಬೇಕಿತ್ತು. ನಿಮ್ಮ ನಾಯಕರ ಬಗ್ಗೆ ಇನ್ನಷ್ಟು ಅವಹೇಳನಕಾರಿ ಮಾತುಗಳನ್ನಾಡಿದ್ದು, ವಾಕ್ ಸ್ವಾತಂತ್ರ್ಯ ಎಂದು ಕಂಗನಾ ರಣಾವತ್ ಹೇಳುತ್ತಾರೆ.
Kunal Kamra and MLA Vijay Vadettiwar
ಕುನಾಲ್ ಕಾಮ್ರಾ, ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್
Updated on

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸಲು ಸ್ಟ್ಯಾಂಡ್ ಅಪ್ ಕಾಮಿಡಿಯಿನ್ ಕುನಾಲ್ ಕಾಮ್ರಾ ಕುನಾಲ್ ಕಮ್ರಾ ನಿರಾಕರಿಸಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್, ಕಾಮ್ರಾ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ಕ್ಷಮೆಯಾಚಿಸದಿರಲು ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದರು.

ಹ್ಯಾಬಿಟೆಟ್ ಸೆಂಟರ್ ಧ್ವಂಸವನ್ನು ಟೀಕಿಸಿದ ವಡೆತ್ತಿವಾರ್, ಹೋಟೆಲ್ ಧ್ವಂಸ ಹಾಗೂ ಯಾವುದೇ ವ್ಯಕ್ತಿಯ ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಒಂದು ವೇಳೆ ತಪ್ಪಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಿ. ಆದರೆ, ಹೀಗೆ ಧ್ವಂಸಗೊಳಿಸುವ ಕೃತ್ಯ, ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಸರ್ಕಾರ ಟೀಕೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಯಾರೊಬ್ಬರು ನಗಿಸುವುದಕ್ಕಾಗಿ ಹಾಸ್ಯ ಮಾಡಿದ್ದರೆ ಸರ್ಕಾರ ನಗಬೇಕಿತ್ತು. ನಿಮ್ಮ ನಾಯಕರ ಬಗ್ಗೆ ಇನ್ನಷ್ಟು ಅವಹೇಳನಕಾರಿ ಮಾತುಗಳನ್ನಾಡಿದ್ದು, ವಾಕ್ ಸ್ವಾತಂತ್ರ್ಯ ಎಂದು ಕಂಗನಾ ರಣಾವತ್ ಹೇಳುತ್ತಾರೆ. ಕ್ಷಮೆಯಾಚಿಸಲು ಕುನಾಲ್ ಕಾಮ್ರಾ ಅವರ ನಿರ್ಧಾರ ಸರಿಯಾದದ್ದು ಎಂದರು.

ಕುನಾಲ್ ಕಾಮ್ರಾ ಯಾರೊಬ್ಬರ ಹೆಸರನ್ನು ತೆಗೆದುಕೊಂಡಿಲ್ಲ. ಕಾನೂನನ್ನು ಯಾರೂ ಗೌರವಿಸುತ್ತಿಲ್ಲ. ಇಂತಹ ಸರ್ಕಾರ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಒಂದು ಅಥವಾ ಇನ್ನೊಂದು ದಿನ ಜನರು ಆಕ್ರೋಶಗೊಳ್ಳುತ್ತಾರೆ ಮತ್ತು ಸರ್ಕಾರ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

Kunal Kamra and MLA Vijay Vadettiwar
Watch | ಕ್ಷಮೆ ಕೇಳುವ ಮಾತೇ ಇಲ್ಲ...: ಶಿವಸೇನೆ ಬೇಡಿಕೆಗೆ ಕುನಾಲ್ ಕಾಮ್ರಾ ತಿರಸ್ಕಾರ

ಇತ್ತೀಚಿನ ವಿವಾದದ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಸುಧೀರ್ ಮುಂಗಂಟಿವಾರ್, ಈ ವಿಷಯದಲ್ಲಿ ಕಾನೂನು ಪ್ರಕ್ರಿಯೆಯು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com