Congress Leader Hussain Dalwai
ಕಾಂಗ್ರೆಸ್ ನಾಯಕ ಹುಸೇನ್ ದಲ್ವಾಯಿ

'ಮನುಸ್ಮೃತಿಯ ಪ್ರಕಾರ Aurangzeb ಛತ್ರಪತಿ ಸಂಭಾಜಿ ಮಹಾರಾಜರನ್ನು ಕೊಲ್ಲಿಸಿದ': ಕಾಂಗ್ರೆಸ್ ನಾಯಕ ಹುಸೇನ್ ದಲ್ವಾಯಿ

ಮನುಸ್ಮೃತಿಯ ಪ್ರಕಾರ ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕೊಂದನೆಂದು ಹುಸೇನ್ ದಲ್ವಾಯಿ ಹೇಳಿಕೊಂಡಿದ್ದು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
Published on

ಮುಂಬೈ: ಮನುಸ್ಮೃತಿಯ ಪ್ರಕಾರ Aurangzeb ಛತ್ರಪತಿ ಸಂಭಾಜಿ ಮಹಾರಾಜರ ಕೊಲ್ಲಿಸಿದ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಮನುಸ್ಮೃತಿಯ ಪ್ರಕಾರ ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕೊಂದನೆಂದು ಹುಸೇನ್ ದಲ್ವಾಯಿ ಹೇಳಿಕೊಂಡಿದ್ದು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಛಾವಾ ಚಿತ್ರದ ವಿವಾದಗಳ ಕುರಿತು ಮಹಾರಾಷ್ಟ್ರದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಹಿರಿಯ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಅವರು ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹತ್ಯೆಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಮನುಸ್ಮೃತಿಯ ಪ್ರಕಾರ ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕೊಂದನೆಂದು ಹುಸೇನ್ ದಲ್ವಾಯಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದ ಹುಸೇನ್ ದಲ್ವಾಯಿ, ಸಿಎಂ ದೇವೇಂದ್ರ ಫಡ್ನವೀಸ್ ಅವರು ಔರಂಗಜೇಬನ ಇತಿಹಾಸವನ್ನೂ ಓದಬೇಕು ಎಂದು ಹೇಳಿದರು.

Congress Leader Hussain Dalwai
ನೂರು ಜನ ಮುಸ್ಲಿಮರ ಮಧ್ಯೆ ಐವತ್ತು ಹಿಂದೂಗಳಿಗೆ ರಕ್ಷಣೆ ಇದೆಯೇ; ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ 54 ಸ್ಥಳಗಳನ್ನು ಗುರುತಿಸಿದ್ದೇವೆ: ಯೋಗಿ ಆದಿತ್ಯನಾಥ್

'ಔರಂಗಜೇಬ್ ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆ ಮಾಡಿದ್ದು ಒಂದು ಕ್ರೂರ ಕೃತ್ಯ. ಅವನು ತನ್ನ ಸಹೋದರನನ್ನೂ ಕೊಂದನು. ದಾರಾ ಶಿಕೋಹ್ ಕೊಲ್ಲಲ್ಪಟ್ಟಂತೆಯೇ ಅವನು ಸಂಭಾಜಿ ಮಹಾರಾಜನನ್ನು ಕೊಂದನು. ಆದಾಗ್ಯೂ, ಛತ್ರಪತಿ ಸಂಭಾಜಿ ಮಹಾರಾಜರನ್ನು ಕೊಲ್ಲುವಾಗ, ಪಂಡಿತರು ಮನುಸ್ಮೃತಿಯ ಪ್ರಕಾರ ಅವರನ್ನು ಹೇಗೆ ಕೊಲ್ಲಬೇಕೆಂದು ಹೇಳಿದರು ಮತ್ತು ಔರಂಗಜೇಬನು ಅದೇ ರೀತಿ ಅವರನ್ನು ಕೊಂದನು.

ದೇವೇಂದ್ರ ಫಡ್ನವೀಸ್ ಈ ವಿಷಯವನ್ನು ಒಪ್ಪಿಕೊಳ್ಳುತ್ತಾರೆಯೇ? ಹುಸೇನ್ ದಳವಾಯಿ ಕೂಡ ಈ ಪ್ರಶ್ನೆಯನ್ನು ಎತ್ತಿದರು. ನೀವು ಸತ್ಯಗಳನ್ನು ನಿರ್ಲಕ್ಷಿಸಬಾರದು ಎಂದು ಅವರು ಸಲಹೆ ನೀಡಿದರು.

ಕಳೆದ ತಿಂಗಳು ಬಿಡುಗಡೆಯಾದ ಛಾವಾ ಚಿತ್ರವು ಛತ್ರಪತಿ ಸಂಭಾಜಿ ಮಹಾರಾಜರ ತ್ಯಾಗವನ್ನು ಹಾಗೂ ಮೊಘಲ್ ಚಕ್ರವರ್ತಿ ಔರಂಗಜೇಬನು ಸೆರೆಯಲ್ಲಿದ್ದಾಗ ಅವರಿಗೆ ನೀಡಿದ ಚಿತ್ರಹಿಂಸೆಯನ್ನು ಚಿತ್ರಿಸಿದೆ. ಈ ಚಿತ್ರ ನೋಡಿದ ಹಿಂದೂಪರ ಸಂಘಟನೆಗಳು ದೇಶಾದ್ಯಂತ ಔರಂಗಜೇಬನ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ಮಹಾರಾಷ್ಟ್ರದ ಖುತ್ಲಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಯನ್ನು ಕೆಡವಬೇಕು ಎಂದು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com