ದೆಹಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ: ಲಿಂಗ ಬದಲಿಸಿಕೊಂಡು ಅಕ್ರಮವಾಗಿ ನೆಲೆಸಿದ್ದ 6 ಬಾಂಗ್ಲಾ ಯುವಕರ ಬಂಧನ!

ಎಲ್ಲಾ ಆರು ವಲಸಿಗರನ್ನು ಗಡೀಪಾರು ಪ್ರಕ್ರಿಯೆಗಾಗಿ ಆರ್‌ಕೆ ಪುರಂನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಸ್ತಾಂತರಿಸಲಾಗಿದೆ.
ದೆಹಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ: ಲಿಂಗ ಬದಲಿಸಿಕೊಂಡು ಅಕ್ರಮವಾಗಿ ನೆಲೆಸಿದ್ದ 6 ಬಾಂಗ್ಲಾ ಯುವಕರ ಬಂಧನ!
Updated on

ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಆರು ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಗುರುತನ್ನು ಮರೆಮಾಚಲು ತೃತೀಯ ಲಿಂಗಿ ಮಹಿಳೆಯರಂತೆ ವೇಷ ಧರಿಸುತ್ತಿದ್ದರು. ಸ್ಥಳೀಯ ತೃತೀಯಲಿಂಗಿ ಸಮುದಾಯದೊಂದಿಗೆ ಬೆರೆಯಲು ಮತ್ತು ತನ್ನ ನೋಟವನ್ನು ಬದಲಾಯಿಸಲು ಅವರು ಸಣ್ಣ ಶಸ್ತ್ರಚಿಕಿತ್ಸೆ ಮತ್ತು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ ಬಾಂಗ್ಲಾದೇಶದಲ್ಲಿರುವ ತಮ್ಮ ಕುಟುಂಬಗಳೊಂದಿಗೆ ಸಂವಹನ ನಡೆಸಲು ಅವರು ನಿಷೇಧಿತ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಆರು ವಲಸಿಗರನ್ನು ಗಡೀಪಾರು ಪ್ರಕ್ರಿಯೆಗಾಗಿ ಆರ್‌ಕೆ ಪುರಂನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಸ್ತಾಂತರಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಗುರುವಾರ ನಡೆದ ಕಣ್ಗಾವಲು ಕಾರ್ಯಾಚರಣೆಯ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು. ಅಕ್ರಮ ವಿದೇಶಿಗರನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೆಲವು ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ತಮ್ಮ ನೋಟವನ್ನು ಲಿಂಗಪರಿವರ್ತಿತರಾಗಿ ಬದಲಾಯಿಸಿಕೊಂಡಿದ್ದಾರೆ. ಅನುಮಾನ ಬರದಂತೆ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದೇವು. ಇನ್ನು ಜಹಾಂಗೀರ್‌ಪುರಿ ಮೆಟ್ರೋ ನಿಲ್ದಾಣದ ಬಳಿ ಅವರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಎಲ್ಲಾ ಆರು ಶಂಕಿತರನ್ನು ಅಲ್ಲಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಬಂಧಿತ ಬಾಂಗ್ಲಾದೇಶಿಗಳನ್ನು ಮೊಹಮ್ಮದ್ ಜಕಾರಿಯಾ ಮೊಯಿನಾ ಖಾನ್ (24), ಸುಹಾನಾ ಖಾನ್ (21), ಅಖಿ ಸರ್ಕಾರ್ (22), ಮೊಹಮ್ಮದ್ ಬಾವೊಯಿಜೆದ್ ಖಾನ್ (24), ಮೊಹಮ್ಮದ್ ರಾಣಾ ಅಲಿಯಾಸ್ ಲೋಬಾಲಿ (26) ಮತ್ತು ಜಾನಿ ಹುಸೇನ್ (20) ಎಂದು ಗುರುತಿಸಲಾಗಿದೆ. ಅವರು ಬಾಂಗ್ಲಾದೇಶದ ಬರ್ಗುನಾ, ಗಾಜಿಪುರ, ಮದರಿಪುರ, ಸಿರಾಜ್‌ಗಂಜ್, ಪಬ್ನಾ ಮತ್ತು ನೌಗಾಂವ್ ಜಿಲ್ಲೆಗಳ ಸ್ಥಳೀಯರು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ: ಲಿಂಗ ಬದಲಿಸಿಕೊಂಡು ಅಕ್ರಮವಾಗಿ ನೆಲೆಸಿದ್ದ 6 ಬಾಂಗ್ಲಾ ಯುವಕರ ಬಂಧನ!
ಭಾರತ-ಬಾಂಗ್ಲಾ ಗಡಿ ಬಿಗಿಗೊಳಿಸಿ, ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ನಿಯಮ ಸರಳಗೊಳಿಸಿ: ಕೇಂದ್ರಕ್ಕೆ ಜಿ ಪರಮೇಶ್ವರ

ವಿಚಾರಣೆ ವೇಳೆ ವಲಸಿಗರು ಕಳ್ಳಸಾಗಣೆದಾರರ ಸಹಾಯದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದಾಗಿ ಬಹಿರಂಗಪಡಿಸಿದರು. ಅವರು ರೈಲಿನಲ್ಲಿ ದೆಹಲಿಗೆ ಬಂದು ಸಣ್ಣ ಶಸ್ತ್ರಚಿಕಿತ್ಸೆ ಮತ್ತು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿ ತಮ್ಮ ನೋಟವನ್ನು ಬದಲಾಯಿಸಿಕೊಂಡರು. ಪೊಲೀಸರು ಬಂಧಿತರಿಂದ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ನಿಷೇಧಿತ ಅಪ್ಲಿಕೇಷನ್ ಗಳು ಇವೆ. ಬಾಂಗ್ಲಾದೇಶದಲ್ಲಿರುವ ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಅವರು ಇವುಗಳನ್ನು ಬಳಸುತ್ತಿದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com