Operation Sindoor: ಮತ್ತೊಂದು ಭರ್ಜರಿ ಬೇಟೆ; ಮೊಸ್ಟ್ ವಾಂಡೆಟ್ ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಹತ್ಯೆ? ದಾಳಿಯ Video Viral!

ಈ ಸ್ಥಳದಲ್ಲಿ ಲಷ್ಕರ್ ಮುಖ್ಯಸ್ಥ ಸಯೀದ್ ಮಗ ತಲ್ಹಾ ಸಯೀದ್ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.
Operation Sindoor: ಮತ್ತೊಂದು ಭರ್ಜರಿ ಬೇಟೆ; ಮೊಸ್ಟ್ ವಾಂಡೆಟ್ ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಹತ್ಯೆ? ದಾಳಿಯ Video Viral!
Updated on

ಪಹಲ್ಗಾಮ್‌ನಲ್ಲಿ ಹತ್ಯಾಕಾಂಡ ನಡೆಸಿದ ನಂತರ ಭಯೋತ್ಪಾದಕರು ಈ ಬಾರಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಭಾವಿಸಿರಬೇಕು. ಆದರೆ ಈ ಬಾರಿ ಭಾರತೀಯ ಸೇನೆ ಅವರನ್ನು ನರಕಕ್ಕೆ ಕಳುಹಿಸುತ್ತಿದೆ. ಮಂಗಳವಾರ ರಾತ್ರಿ Operation Sindoor ಅಡಿಯಲ್ಲಿ ಭಾರತೀಯ ಸೇನೆಯು ವಾಯುದಾಳಿ ನಡೆಸಿ ಮುಜಫರಾಬಾದ್‌ನಲ್ಲಿರುವ ಭಯೋತ್ಪಾದಕ ಶಿಬಿರವನ್ನು ನಾಶಪಡಿಸಿತು. ಅಲ್ಲಿ ತರಬೇತಿ ಹೊಂದಿದ್ದ ಭಯೋತ್ಪಾದಕರು ಪಹಲ್ಗಾಮ್‌ಗೆ ಬಂದಿದ್ದರು. ಈ ಸ್ಥಳದಲ್ಲಿ ಲಷ್ಕರ್ ಮುಖ್ಯಸ್ಥ ಸಯೀದ್ ಮಗ ತಲ್ಹಾ ಸಯೀದ್ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ತಲ್ಹಾ ಸಯೀದ್ ತನ್ನ ಉನ್ನತ ಕಮಾಂಡರ್‌ಗಳೊಂದಿಗೆ ಇಲ್ಲಿ ಇರುತ್ತಿದ್ದನು. ಮೂಲಗಳ ಪ್ರಕಾರ, ಭಾರತೀಯ ಸೇನೆಯ ಈ ದಾಳಿಯಲ್ಲಿ ತಲ್ಹಾ ಸಯೀದ್‌ ಸೇರಿ ಎಲ್ಲಾ ಉನ್ನತ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಇಡೀ ತರಬೇತಿ ಕೇಂದ್ರವೇ ನಾಶವಾಗಿದೆ.

ಈ ದಾಳಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿ ನಡೆದಿದ್ದು, ಅಲ್ಲಿಂದ ತಲ್ಹಾ ಸಯೀದ್ ಕಾರ್ಯಾಚರಣೆ ನಡೆಸುತ್ತಿದ್ದನು. ದಾಳಿಯಲ್ಲಿ ಶಿಬಿರದ ಗೋಡೆಗಳು ರಕ್ತಸಿಕ್ತವಾಗಿದ್ದವು. ಮೃತ ದೇಹಗಳು ಎಲ್ಲೆಡೆ ಹರಡಿಕೊಂಡಿರುವುದು ಕಂಡುಬಂದಿತು. ಮೂಲಗಳ ಪ್ರಕಾರ, ಈ ದಾಳಿಯಲ್ಲಿ ತಲ್ಹಾ ಸಯೀದ್‌ನ ಐದು ಉನ್ನತ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರೆಹಮಾನ್ ಕೂಡ ಇದರಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಶಿಬಿರದಲ್ಲಿ ಇರಿಸಲಾಗಿದ್ದ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶವಾಗಿವೆ. ದಾಳಿಯಲ್ಲಿ ತಲ್ಹಾ ಸಯೀದ್ ಅಲ್ಲಿದ್ದನೋ ಇಲ್ಲವೋ ಎಂಬುದು ಇನ್ನೂ ತಿಳಿದುಬಂದಿಲ್ಲ.

ತಲ್ಹಾ ಸಯೀದ್ ಲಷ್ಕರ್-ಎ-ತೊಯ್ಬಾದ ಎರಡನೇ ಅತ್ಯುನ್ನತ ಕಮಾಂಡರ್ ಆಗಿದ್ದು, ಸಂಘಟನೆಯ ಹಣಕಾಸು ಚಟುವಟಿಕೆಗಳನ್ನು ನಿರ್ವಹಿಸುತ್ತಾನೆ. 2023ರಲ್ಲಿ ಹಫೀಜ್ ಸಯೀದ್ ಬಂಧನದ ನಂತರ, ತಲ್ಹಾ ಮುಜಫರಾಬಾದ್ ಶಿಬಿರದ ಉಸ್ತುವಾರಿ ವಹಿಸಿಕೊಂಡನು. ಈ ಶಿಬಿರದಲ್ಲಿ 18-25 ವರ್ಷ ವಯಸ್ಸಿನ ಯುವಕರನ್ನು ನೇಮಿಸಿಕೊಳ್ಳಲಾಯಿತು. ಅವರಿಗೆ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು, ಬಾಂಬ್‌ಗಳನ್ನು ತಯಾರಿಸುವುದು ಮತ್ತು ಗೆರಿಲ್ಲಾ ಯುದ್ಧದಲ್ಲಿ ತರಬೇತಿ ನೀಡಲಾಯಿತು.

Operation Sindoor: ಮತ್ತೊಂದು ಭರ್ಜರಿ ಬೇಟೆ; ಮೊಸ್ಟ್ ವಾಂಡೆಟ್ ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಹತ್ಯೆ? ದಾಳಿಯ Video Viral!
ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ: Operation Sindoor ಬಳಿಕ ಉಗ್ರ Masood Azhar ಕಣ್ಣೀರು!

ಪಹಲ್ಗಾಮ್ ದಾಳಿಗಾಗಿ ಭಯೋತ್ಪಾದಕರಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು. ತಲ್ಹಾ ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳಿಂದ ಹಣವನ್ನು ಸಂಗ್ರಹಿಸಿದನು. ಅದನ್ನು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿತ್ತು. ಅವರು ಜಿಹಾದ್ ಹೆಸರಿನಲ್ಲಿ ಆನ್‌ಲೈನ್ ದೇಣಿಗೆ ಅಭಿಯಾನಗಳನ್ನು ಸಹ ನಡೆಸುತ್ತಿದ್ದನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com