ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹಾವೂರ್ ರಾಣಾ ತಿಹಾರ್ ಜೈಲಿಗೆ ಶಿಫ್ಟ್

ಮುಂಜಾನೆ, ದೆಹಲಿ ನ್ಯಾಯಾಲಯವು ರಾಣಾನನ್ನು ವಿಶೇಷ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಮುಂದೆ ಹಾಜರುಪಡಿಸಿದ ನಂತರ, NIA ಕಸ್ಟಡಿ ಮುಗಿಯುವ ಒಂದು ದಿನ ಮೊದಲು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
Tahawwur Rana
ತಹವ್ವೂರ್ ರಾಣಾ
Updated on

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಎಂದು ಹೇಳಲಾಗುವ ತಹಾವೂರ್ ರಾಣಾನನ್ನು ಶುಕ್ರವಾರ ಸಂಜೆ ಭಾರೀ ಭದ್ರತೆಯ ನಡುವೆ ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಜಾನೆ, ದೆಹಲಿ ನ್ಯಾಯಾಲಯವು ರಾಣಾನನ್ನು ವಿಶೇಷ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಮುಂದೆ ಹಾಜರುಪಡಿಸಿದ ನಂತರ, NIA ಕಸ್ಟಡಿ ಮುಗಿಯುವ ಒಂದು ದಿನ ಮೊದಲು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ರಾಣಾನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನಂತರ ಆತನನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು. ತಿಹಾರ್ ಜೈಲಿಗೆ ಶಿಫ್ಟ್ ಮಾಡುವ ವೇಳೆ ಭಾರೀ ಭದ್ರತೆ ಒದಗಿಸಲಾಗಿತ್ತು. ಆತನನ್ನು ಜೈಲಿನ ಹೆಚ್ಚಿನ ಭದ್ರತಾ ವಲಯದಲ್ಲಿ ಇರಿಸಲಾಗುವುದು" ಎಂದು ಮೂಲಗಳು ತಿಳಿಸಿವೆ.

26/11 ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯ ಆಪ್ತ ಸಹಾಯಕ ರಾಣಾನನ್ನು ಅಮೆರಿಕ ಸುಪ್ರೀಂ ಕೋರ್ಟ್ ಗಡೀಪಾರು ವಿರುದ್ಧದ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನಂತರ ಭಾರತಕ್ಕೆ ಕರೆತರಲಾಯಿತು.

Tahawwur Rana
ಸತತ 8 ಗಂಟೆ ವಿಚಾರಣೆ ನಡೆಸಿದರೂ ಯಾವುದೇ ಮಾಹಿತಿ ಬಾಯಿಬಿಡದ ಉಗ್ರ ರಾಣಾ ತಹವ್ವುರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com