ಭಾರತೀಯ ಜೆಟ್ ಗಳು ಧ್ವಂಸ?: ನಾವು ಯುದ್ಧತಂತ್ರದ ತಪ್ಪುಗಳನ್ನು ಅರ್ಥ ಮಾಡಿಕೊಂಡೆವು- ಪಾಕ್ ದಾಳಿಯಿಂದ ಹಾನಿ ಒಪ್ಪಿಕೊಂಡ್ರಾ CDS Anil Chauhan

ಸಂಘರ್ಷ ಎಂದಿಗೂ ಪರಮಾಣು ಯುದ್ಧದ ಹತ್ತಿರ ಬಂದಿಲ್ಲ ಮತ್ತು "ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದೊಂದಿಗಿನ ಮಾತುಕತೆ ಮಾರ್ಗಗಳು ಯಾವಾಗಲೂ ಮುಕ್ತವಾಗಿವೆ" ಎಂದು ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
CDS Anil Chauhan
ಸಿಡಿಎಸ್ ಅನಿಲ್ ಚೌಹಾಣ್online desk
Updated on

ಸಿಂಗಾಪುರ: ಪಾಕಿಸ್ತಾನದೊಂದಿಗಿನ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಭಾರತ ಸರ್ಕಾರ ತನ್ನ ಯುದ್ಧ ತಂತ್ರವನ್ನು ಗೌಪ್ಯವಾಗಿರಿಸಿಕೊಂಡಿತ್ತಾದರೂ, ಘರ್ಷಣೆಯಲ್ಲಿ ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ ಬ್ಲೂಮ್‌ಬರ್ಗ್ ಟಿವಿಗೆ ಪರೋಕ್ಷವಾಗಿ ತಿಳಿಸಿದ್ದಾರೆ. ಆದಾಗ್ಯೂ, ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ.

ಸಂಘರ್ಷ ಎಂದಿಗೂ ಪರಮಾಣು ಯುದ್ಧದ ಹತ್ತಿರ ಬಂದಿಲ್ಲ ಮತ್ತು "ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದೊಂದಿಗಿನ ಮಾತುಕತೆ ಮಾರ್ಗಗಳು ಯಾವಾಗಲೂ ಮುಕ್ತವಾಗಿವೆ" ಎಂದು ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ನಂತರ, ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ - ನಿಖರ ದಾಳಿಗಳನ್ನು ಪ್ರಾರಂಭಿಸಿತ್ತು.

ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದವನ್ನು ಕೊನೆಗೊಳಿಸುವಾಗ ಶನಿವಾರ ಬ್ಲೂಮ್‌ಬರ್ಗ್ ಟಿವಿ ಪತ್ರಕರ್ತೆಯೊಂದಿಗೆ ಮಾತನಾಡಿದ ಅನಿಲ್ ಚೌಹಾಣ್, ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು "ಸಂಪೂರ್ಣವಾಗಿ ತಪ್ಪು" ಎಂದು ಹೇಳಿದ್ದಾರೆ. ಆದರೂ ಭಾರತ ಎಷ್ಟು ಜೆಟ್‌ಗಳನ್ನು ಕಳೆದುಕೊಂಡಿತು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

"ಜೆಟ್ ಗಳು ಏಕೆ ಪತನಗೊಂಡಿತು, ಯಾವ ತಪ್ಪುಗಳನ್ನು ಮಾಡಲಾಯಿತು - ಅವು ಮುಖ್ಯ, ಸಂಖ್ಯೆಗಳು ಮುಖ್ಯವಲ್ಲ" ಎಂದು ಚೌಹಾಣ್ ಯುದ್ಧ ವಿಮಾನಗಳ ಬಗ್ಗೆ ಕೇಳಿದಾಗ ಹೇಳಿದ್ದಾರೆ.

"ಒಳ್ಳೆಯ ಭಾಗವೆಂದರೆ ನಾವು ಮಾಡಿದ ಯುದ್ಧತಂತ್ರದ ತಪ್ಪನ್ನು ನಾವು ಅರ್ಥಮಾಡಿಕೊಳ್ಳಲು, ಅದನ್ನು ಸರಿಪಡಿಸಲು, ಸರಿಪಡಿಸಲು ಮತ್ತು ಎರಡು ದಿನಗಳ ನಂತರ ಅದನ್ನು ಮತ್ತೆ ಕಾರ್ಯಗತಗೊಳಿಸಲು ಮತ್ತು ದೀರ್ಘ ವ್ಯಾಪ್ತಿಯನ್ನು ಗುರಿಯಾಗಿಸಿಕೊಂಡು ನಮ್ಮ ಜೆಟ್‌ಗಳನ್ನು ಮತ್ತೆ ಹಾರಿಸಲು ಸಾಧ್ಯವಾಯಿತು" ಎಂದು ಚೌಹಾಣ್ ಹೇಳಿದ್ದಾರೆ.

CDS Anil Chauhan
1947 ರಲ್ಲಿ ಪಾಕಿಸ್ತಾನ ನಮಗಿಂತ ಎಲ್ಲದರಲ್ಲೂ ಮುಂದಿತ್ತು, ಆದರೆ ಇಂದು...: ಸೇನಾಪಡೆಗಳ ಮುಖ್ಯಸ್ಥ

ಈ ತಿಂಗಳ ಆರಂಭದಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೇಶ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದರು ಎಂದು ಬ್ಲೂಮ್‌ಬರ್ಗ್ ವರದಿ ಉಲ್ಲೇಖಿಸಿದೆ. "ಈ ಹೇಳಿಕೆಯನ್ನು" ವರದಿಯು "ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ" ಎಂದೂ ಸ್ಪಷ್ಟಪಡಿಸಿದೆ.

ಏತನ್ಮಧ್ಯೆ, ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಭಾರತದಲ್ಲಿ ಮತ್ತೊಮ್ಮೆ ಭಯೋತ್ಪಾದಕ ಕೃತ್ಯವನ್ನು ರೂಪಿಸಲು ಧೈರ್ಯ ಮಾಡಿದರೆ ತೀವ್ರ ಪ್ರತೀಕಾರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಬಿಹಾರದ ರೋಹ್ತಾಸ್ ಜಿಲ್ಲೆಯ ಬಿಕ್ರಮ್‌ಗಂಜ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಆಪರೇಷನ್ ಸಿಂಧೂರ್‌ನಲ್ಲಿ ಪಾಕಿಸ್ತಾನ ಮತ್ತು ಜಗತ್ತು ಭಾರತದ ಶಕ್ತಿಯನ್ನು ನೋಡಿದೆ ಎಂದು ಹೇಳಿದರು. "ಇದು ದೇಶದ ಬತ್ತಳಿಕೆಯಿಂದ ಬಂದ ಒಂದು ಬಾಣ ... ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟ ಮುಗಿದಿಲ್ಲ ಅಥವಾ ಅದು ನಿಂತಿಲ್ಲ" ಎಂದು ಅವರು ಪ್ರತಿಪಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com