'ಇದೆಲ್ಲ ಸುಳ್ಳು, ನಗೆಪಾಟಲಿಗೆ ಈಡಾಗುವಂತಹದ್ದು': ಪ್ರಧಾನಿ ಮೋದಿ ಹೇಳಿಕೆ ತಳ್ಳಿಹಾಕಿದ ಮಲ್ಲಿಕಾರ್ಜುನ ಖರ್ಗೆ

243 ಸ್ಥಾನಗಳ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಿತು.
PM narendra Modi and Mallikarjun Kharge
ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: RJD ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಹುದ್ದೆಯನ್ನು 'ಕಿತ್ತುಕೊಂಡಿದೆ'. ಇದು ಮಹಾಘಟಬಂಧನ ಮೈತ್ರಿಕೂಟದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಿರಾಕರಿಸಿದ್ದಾರೆ.

'ಇದೆಲ್ಲವೂ ಸುಳ್ಳು. ಅವರಿಗೆ (ಪ್ರಧಾನಿ ಮೋದಿ) ಹೇಳಲು ಬೇರೆ ಏನೂ ಇಲ್ಲ. ನಾನು ಇಂದು ಬಿಹಾರದಲ್ಲಿ ಇದಕ್ಕೆ ಉತ್ತರಿಸುತ್ತೇನೆ. ಅವರು ಹೇಳುತ್ತಿರುವುದು ಸುಳ್ಳು. ಗನ್‌ಪಾಯಿಂಟ್‌ನಲ್ಲಿ ಸಿಎಂ ಮಾಡಿ ಎಂದು ಯಾರೊಬ್ಬರೂ ಯಾರಿಗೂ ಹೇಳಿಲ್ಲ. ಕಾಂಗ್ರೆಸ್ ಎಂದಿಗೂ ಹೀಗೆ ಮಾಡಿಲ್ಲ' ಎಂದು ಖರ್ಗೆ ಇಲ್ಲಿ ANI ಗೆ ತಿಳಿಸಿದರು.

'ಇಂತಹ ಹೇಳಿಕೆಗಳು ಪ್ರಧಾನಿ ಕಚೇರಿಗೆ ತರವಲ್ಲ. ಮೋದಿ ಜಿ ಈ ದೇಶದ ಪ್ರಧಾನಿ; ಅವರು ಇಂತಹ ಮಾತುಗಳನ್ನು ಹೇಳುವುದು ನಗೆಪಾಟಲಿಗೆ ಈಡಾಗುವಂತಹದ್ದು. ಇದು ಅವರ ಮಟ್ಟವನ್ನು ತೋರಿಸುತ್ತದೆ. ಪ್ರಧಾನಿಯೊಬ್ಬರು ಯಾವ ಮಟ್ಟದಲ್ಲಿ ಮಾತನಾಡಬೇಕು ಎಂಬುದನ್ನು ಬದಿಗಿಟ್ಟು ಅವರು ಬಿಹಾರದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾರೆ' ಎಂದು ಹೇಳಿದರು.

ಕಾಂಗ್ರೆಸ್ ಮುಖ್ಯಸ್ಥರು ಇಂದು ನಂತರ ಬಿಹಾರದ ರಾಜಾ ಪಕರ್‌ನಲ್ಲಿ ರ‍್ಯಾಲಿ ನಡೆಸಲಿದ್ದಾರೆ.

PM narendra Modi and Mallikarjun Kharge
ಕಾಂಗ್ರೆಸ್ ಹಣೆಗೆ ಗನ್ ಇಟ್ಟು ತೇಜಸ್ವಿ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ: ಪ್ರಧಾನಿ ಮೋದಿ

ಬಿಹಾರದ ಅರಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಆರ್‌ಜೆಡಿ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಕಾಂಗ್ರೆಸ್ ಎಂದಿಗೂ ಬಯಸಲಿಲ್ಲ. ಆದರೆ, ಆರ್‌ಜೆಡಿ ಕಾಂಗ್ರೆಸ್ ಹಣೆಗೆ ಗನ್ ಇಟ್ಟು ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡಿತು ಎಂದು ಹೇಳಿದರು.

ಅಭಿವೃದ್ಧಿ ಹೊಂದಿದ ಬಿಹಾರಕ್ಕಾಗಿ ಎನ್‌ಡಿಎ ಪ್ರಾಮಾಣಿಕ ಮತ್ತು ದೂರದೃಷ್ಟಿಯ ಪ್ರಣಾಳಿಕೆಯನ್ನು ಮಂಡಿಸಿದೆ. ಮತ್ತೊಂದೆಡೆ, ಮೈತ್ರಿಕೂಟವು ತನ್ನ ಪ್ರಣಾಳಿಕೆಯನ್ನು ವಂಚನೆ ಮತ್ತು ಸುಳ್ಳಿನ ದಾಖಲೆಯಾಗಿ ಪರಿವರ್ತಿಸಿದೆ. ಅವರಿಗೆ ನಾನು ಹೇಳಲು ಬಯಸುತ್ತೇನೆ. ಈ ಜನರು ಮೂರ್ಖರಲ್ಲ. ಎನ್‌ಡಿಎ ಬಿಹಾರದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದೆ. ಆದರೆ, ಮಹಾಘಟಬಂಧನ ಚುನಾವಣೆಯ ನಂತರ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಆರ್‌ಜೆಡಿ ಕಾಂಗ್ರೆಸ್ ಅನ್ನು ಬದಿಗಿಡುತ್ತಿದೆ. ಪಕ್ಷದ ಅಭಿಪ್ರಾಯಗಳನ್ನು 'ತೇಜಸ್ವಿ ಕಾ ಪ್ರಾಣ್' ಎಂಬ ಪ್ರಣಾಳಿಕೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಆರೋಪಿಸಿದರು.

243 ಸ್ಥಾನಗಳ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com