ರೋಟಿ ತಿರುಗಿಸಿ, ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ: ಲಾಲು ಹೀಗೆ ಹೇಳಿದ್ಯಾಕೆ?

ಇಂದು ತಮ್ಮ ಪತ್ನಿ ರಾಬ್ರಿ ದೇವಿ, ಪುತ್ರ ಹಾಗೂ ಇಂಡಿಯಾ ಬ್ಲಾಕ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಂದಿಗೆ ಲಾಲು ಪ್ರಸಾದ್ ಯಾದವ್ ಅವರು ಮತ ಚಲಾಯಿಸಿದ್ದು, ಆಡಳಿತದಲ್ಲಿ ಬದಲಾವಣೆ ತರಬೇಕೆಂದು ಕರೆ ನೀಡಿದ್ದಾರೆ.
Flip roti or it will burn: Lalu calls for govt change
ಲಾಲು ಪ್ರಸಾದ್ ಯಾದವ್
Updated on

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇಂದು ತಮ್ಮ ಪತ್ನಿ ರಾಬ್ರಿ ದೇವಿ, ಪುತ್ರ ಹಾಗೂ ಇಂಡಿಯಾ ಬ್ಲಾಕ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಂದಿಗೆ ಲಾಲು ಪ್ರಸಾದ್ ಯಾದವ್ ಅವರು ಮತ ಚಲಾಯಿಸಿದ್ದು, ಆಡಳಿತದಲ್ಲಿ ಬದಲಾವಣೆ ತರಬೇಕೆಂದು ಕರೆ ನೀಡಿದ್ದಾರೆ.

'ರೋಟಿ'ಯನ್ನು ನಿರಂತರವಾಗಿ 'ತವಾ'ದ ಮೇಲೆ ತಿರುಗಿಸಬೇಕು. ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ. ಹಾಗೆಯೇ ನಿತೀಶ್ ಕುಮಾರ್ ಸರ್ಕಾರವನ್ನು ಬದಲಾಯಿಸಬೇಕು ಎಂದು ಹೇಳಿದರು.

Flip roti or it will burn: Lalu calls for govt change
Bihar Elections 2025: ಜಾತಿಯೇ ನಿರ್ಣಾಯಕ; ಫಲಿತಾಂಶದ ಕೀಲಿ ಕೈ; ಯಾರ ಬೆಂಬಲ ಯಾರಿಗೆ?

ತವಾ ಮೇಲೆ 'ರೋಟಿ'ಯನ್ನು ತಿರುಗಿಸಬೇಕು. ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ ಎಂದು ರಾಜ್ಯದಲ್ಲಿ ಸರ್ಕಾರ ಬದಲಾವಣೆಗೆ ಕರೆ ನೀಡುವ ಸಂದೇಶದೊಂದಿಗೆ ಲಾಲು ಪ್ರಸಾದ್ ಅವರು ಎಕ್ಸ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

"ರೋಟಿಯನ್ನು 'ತವಾ'ದ ಮೇಲೆ ತಿರುಗಿಸಬೇಕು. ಇಲ್ಲದಿದ್ದರೆ ಅದು ಸುಟ್ಟು ಕರಕಲಾಗುತ್ತದೆ. 20 ವರ್ಷಗಳು ತುಂಬಾ ಆಯಿತು! ಈಗ, ಹೊಸ ಬಿಹಾರವನ್ನು ನಿರ್ಮಿಸಲು ತೇಜಸ್ವಿ ಸರ್ಕಾರ ಅಗತ್ಯ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com