ಅಯ್ಯಪ್ಪ ಭಕ್ತರಿಗೆ ಪ್ರಯಾಣಿಕ ವಿಮಾನಯಾನ ಸಚಿವಾಲಯದಿಂದ ಗಿಫ್ಟ್!

ಈ ಕ್ರಮ ಎನ್‌ಡಿಎ ಸರ್ಕಾರದ ಸಾಂಸ್ಕೃತಿಕ ಮೌಲ್ಯಗಳು, ಧಾರ್ಮಿಕ ಸಂಪ್ರದಾಯಗಳು ಮತ್ತು ರಾಷ್ಟ್ರದಾದ್ಯಂತ ಪಾಲಿಸಲ್ಪಡುವ ಭಕ್ತಿ ಮನೋಭಾವವನ್ನು ಕಾಪಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನಾಯ್ಡು ಹೇಳಿದ್ದಾರೆ.
Ayyappa swamy
ಅಯ್ಯಪ್ಪ ಸ್ವಾಮಿonline desk
Updated on

ನವದೆಹಲಿ: ಶಬರಿಮಲೆಗೆ ಪವಿತ್ರ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಭಕ್ತರು ಪವಿತ್ರ ಇರುಮುಡಿಯನ್ನು ವಿಮಾನಗಳಲ್ಲಿ ಚೆಕ್-ಇನ್ ಲಗೇಜ್ ಆಗಿ ಕೊಂಡೊಯ್ಯುವ ಬದಲು ಕ್ಯಾಬಿನ್ ಲಗೇಜ್ ಆಗಿ ಕೊಂಡೊಯ್ಯಲು ಅವಕಾಶ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು 'X' ನಲ್ಲಿ ಮಾಡಿರುವ ವೀಡಿಯೊ ಪೋಸ್ಟ್‌ನಲ್ಲಿ ಶುಕ್ರವಾರದಿಂದ ಜನವರಿ 20 ರವರೆಗೆ ರಿಯಾಯಿತಿ ಲಭ್ಯವಿದೆ ಎಂದು ಹೇಳಿದರು.

Ayyappa swamy
ಶಬರಿಮಲೆ: ಅಯ್ಯಪ್ಪ ಸನ್ನಿದ್ಧಿಗೆ ಬರುವ ಭಕ್ತರಿಗೆ ಗುಡ್ ನ್ಯೂಸ್; TDB ಮುಖ್ಯಸ್ಥರಿಂದ ಘೋಷಣೆ

"ಪವಿತ್ರ ಇರುಮುಡಿಗೆ ಸಂಬಂಧಿಸಿದ ಆಳವಾದ ಭಾವನೆಗಳನ್ನು ಅರ್ಥಮಾಡಿಕೊಂಡ ನಾಗರಿಕ ವಿಮಾನಯಾನ ಸಚಿವಾಲಯ ಭಕ್ತರು ವಿಮಾನಗಳಲ್ಲಿ ಅದನ್ನು ತಮ್ಮೊಂದಿಗೆ ಕೊಂಡೊಯ್ಯಲು ಅನುಮತಿ ನೀಡಲು ನಿರ್ಧರಿಸಿದೆ, ಅವರ ಸಾಂಪ್ರದಾಯಿಕ ಆಚರಣೆಗಳು ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಈ ಕ್ರಮ ಖಚಿತಪಡಿಸುತ್ತದೆ. ಜನರ ಭಾವನೆಗಳನ್ನು ಸಂಪೂರ್ಣವಾಗಿ ಗೌರವಿಸುವಾಗ ಎಲ್ಲಾ ಅಗತ್ಯ ಭದ್ರತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ" ಎಂದು ಅವರು ಹೇಳಿದರು.

ಈ ಕ್ರಮ ಎನ್‌ಡಿಎ ಸರ್ಕಾರದ ಸಾಂಸ್ಕೃತಿಕ ಮೌಲ್ಯಗಳು, ಧಾರ್ಮಿಕ ಸಂಪ್ರದಾಯಗಳು ಮತ್ತು ರಾಷ್ಟ್ರದಾದ್ಯಂತ ಪಾಲಿಸಲ್ಪಡುವ ಭಕ್ತಿ ಮನೋಭಾವವನ್ನು ಕಾಪಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನಾಯ್ಡು ಹೇಳಿದ್ದಾರೆ.

"ಪ್ರತಿಯೊಂದು ಸಮುದಾಯದ ನಂಬಿಕೆಗಳನ್ನು ಗೌರವಿಸಲು ಮತ್ತು ಎಲ್ಲಾ ಭಕ್ತರಿಗೆ ನೆಮ್ಮದಿ, ಗೌರವ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com