ದೇಶದ ಹೈಕೋರ್ಟ್ ಗಳಲ್ಲಿ ಜಡ್ಜ್ ಹುದ್ದೆಗಳು ಖಾಲಿ ಖಾಲಿ: 2 ಕಡೆ ಮಾತ್ರ ಸಂಪೂರ್ಣ ಸಿಬ್ಬಂದಿ

ಅಲಹಾಬಾದ್ ಹೈಕೋರ್ಟ್‌ನಲ್ಲಿ ದೇಶದಲ್ಲಿ ಅತಿಹೆಚ್ಚು 35 ಖಾಯಂ ಮತ್ತು 41 ಹೆಚ್ಚುವರಿ ನ್ಯಾಯಾಧೀಶರು ಸೇರಿದಂತೆ 76 ಹುದ್ದೆಗಳು ಖಾಲಿ ಇವೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಒಟ್ಟು 1,122 ನ್ಯಾಯಾಧೀಶರ ಹುದ್ದೆಗಳಲ್ಲಿ 330 ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ. ಇದರಿಂದ ದೇಶದಲ್ಲಿ ನ್ಯಾಯದಾನ ವಿಳಂಬವಾಗುತ್ತಿದ್ದು, ಲಕ್ಷಾಂತರ ದಾವೆ ಹೂಡುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.

ಅಲಹಾಬಾದ್ ಹೈಕೋರ್ಟ್‌ನಲ್ಲಿ ದೇಶದಲ್ಲಿ ಅತಿಹೆಚ್ಚು 35 ಖಾಯಂ ಮತ್ತು 41 ಹೆಚ್ಚುವರಿ ನ್ಯಾಯಾಧೀಶರು ಸೇರಿದಂತೆ 76 ಹುದ್ದೆಗಳು ಖಾಲಿ ಇವೆ. ಗಮನಾರ್ಹ ಅಂತರವಿರುವ ಇತರ ಪ್ರಮುಖ ಹೈಕೋರ್ಟ್‌ಗಳಲ್ಲಿ ಬಾಂಬೆ (26), ಪಂಜಾಬ್ ಮತ್ತು ಹರಿಯಾಣ (25), ಕಲ್ಕತ್ತಾ (24), ಮದ್ರಾಸ್ (19), ಪಾಟ್ನಾ (18), ದೆಹಲಿ (16), ಮತ್ತು ರಾಜಸ್ಥಾನ (7) ಸೇರಿವೆ. ಉತ್ತರಾಖಂಡದಲ್ಲಿ ಎರಡು ಖಾಲಿ ಹುದ್ದೆಗಳಿವೆ. ತ್ರಿಪುರದಲ್ಲಿ ಒಂದು ಖಾಲಿ ಹುದ್ದೆ ಇದೆ. 25 ರಾಜ್ಯಗಳಲ್ಲಿ, ಸಿಕ್ಕಿಂ ಮತ್ತು ಮೇಘಾಲಯದ ಹೈಕೋರ್ಟ್‌ಗಳು ಮಾತ್ರ ಪೂರ್ಣ ಭರ್ತಿಯಾದ ಹುದ್ದೆಗಳೊಂದಿಗೆ ಕಾರ್ಯನಿರ್ವಹಿಸುತ್ತವೆ.

ನ್ಯಾಷನಲ್ ಜ್ಯುಡಿಷಿಯಲ್ ಡೇಟಾ ಗ್ರಿಡ್ (NJDG) ನ ದತ್ತಾಂಶ ಪ್ರಕಾರ, ಹೈಕೋರ್ಟ್‌ಗಳಲ್ಲಿ 67 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಸುಪ್ರೀಂ ಕೋರ್ಟ್‌ನಲ್ಲಿ 60,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದು ತೋರಿಸುತ್ತದೆ. ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 34 ನ್ಯಾಯಾಧೀಶರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೂ, ಹೈಕೋರ್ಟ್‌ಗಳು ಅತಿಯಾದ ಕೆಲಸದ ಹೊರೆಯಿಂದ ಬಳಲುತ್ತಿವೆ.

ಕೊಲಿಜಿಯಂ ಮತ್ತು ಸರ್ಕಾರಿ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬವೇ ಕೊರತೆಗೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಹೈಕೋರ್ಟ್‌ಗಳಲ್ಲಿನ ಹೆಚ್ಚಿನ ಖಾಲಿ ಹುದ್ದೆಗಳ ಪ್ರಮಾಣವು ನ್ಯಾಯ ವ್ಯವಸ್ಥೆಗೆ ಪ್ರಮುಖ ಅಡಚಣೆಯಾಗಿದೆ. ಹೆಚ್ಚುತ್ತಿರುವ ಪ್ರಕರಣಗಳ ಬಾಕಿಗೆ ಕಾರಣವಾಗಿದೆ ಎಂದು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಹೇಳುತ್ತಾರೆ.

ನಿವೃತ್ತ ಪಾಟ್ನಾ ಹೈಕೋರ್ಟ್ ನ್ಯಾಯಾಧೀಶ ಮತ್ತು ಕಾನೂನು ತಜ್ಞ ನ್ಯಾಯಮೂರ್ತಿ ಅಂಜನಾ ಪ್ರಕಾಶ್, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಸಿಬ್ಬಂದಿ ಜೊತೆ ಮಾತನಾಡಿ, ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವ ಬಾಕಿ ಪ್ರಕರಣಗಳ ವಿಲೇವಾರಿಯ ತೊಂದರೆಗಳಿಗೆ ಕಾರಣವಾಗಿದೆ. ಅಂತಿಮವಾಗಿ, ದಾವೆದಾರರು ಇದರಿಂದ ತೊಂದರೆಗೊಳಗಾಗುತ್ತಾರೆ ಎಂದರು.

Representational image
Allahabad high court: ಮತ್ತೊಂದು ಮಹತ್ವದ ಆದೇಶ; 43 ವರ್ಷಗಳ ಹಿಂದೆ ಪತ್ನಿಯನ್ನು ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ! ಏನಿದು ಪ್ರಕರಣ?

ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಹುದ್ದೆಗಳ ಭರ್ತಿಯನ್ನು ತ್ವರಿತವಾಗಿ ಪರಿಹರಿಸಬೇಕು. ನ್ಯಾಯಾಂಗ ಮತ್ತು ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ನಿರ್ಧರಿಸುವ ಮತ್ತು ಚರ್ಚಿಸುವವರೆಗೆ, ಪ್ರಕರಣ ವಿಲೇವಾರಿ ಹೆಚ್ಚುವುದಿಲ್ಲ. ಇದು ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ದಾವೆದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎಸ್.ಆರ್. ಸಿಂಗ್ ಅವರು TNIE ಗೆ ನೀಡಿದ ಸಂದರ್ಶನದಲ್ಲಿ, ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದು ಒಂದು ಪ್ರಮುಖ ಕಳವಳಕಾರಿ ಅಂಶವಾಗಿದ್ದು, ಇದು ದಾವೆ ಹೂಡುವವರಿಗೆ ತೊಂದರೆಯನ್ನುಂಟುಮಾಡುತ್ತಿದೆ ಎಂದು ಹೇಳಿದರು.

ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದು ಈಗಿರುವ ನ್ಯಾಯಾಧೀಶರಿಗೆ ಅನಗತ್ಯ ಕೆಲಸದ ಹೊರೆಗೆ ಕಾರಣವಾಗುತ್ತವೆ, ಇದು ತೀರ್ಪುಗಳ ಗುಣಮಟ್ಟ ರಾಜಿ ಮಾಡಿಕೊಳ್ಳುವುದಕ್ಕೆ ಕಾರಣವಾಗಬಹುದು. ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಹುದ್ದೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಧೀಶರನ್ನು ನೇಮಿಸಲು ವಿವೇಚನಾಯುಕ್ತ ಆಯ್ಕೆ ಇರಬೇಕು ಎಂದರು.

ದೇಶದಲ್ಲಿ ಖಾಲಿ ಇರುವ ನ್ಯಾಯಾಧೀಶ ಹುದ್ದೆಗಳಲ್ಲಿ 161 ಶಾಶ್ವತ ಹುದ್ದೆಗಳು ಮತ್ತು 169 ಹೆಚ್ಚುವರಿ (ತಾತ್ಕಾಲಿಕ) ಹುದ್ದೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com