ಬಿಜೆಪಿ ಹೆದರಿಸಿ ನಮ್ಮ ಪಕ್ಷದ ಮೂವರು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದೆ: BJP-JDU ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

2025ರ ಬಿಹಾರ ವಿಧಾನಸಭಾ ಚುನಾವಣೆಯ ಮಧ್ಯೆ, ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (PK) ಮತ್ತೊಮ್ಮೆ ರಾಜಕೀಯ ವಾತಾವರಣವನ್ನು ಕೆರಳಿಸಿದ್ದಾರೆ. ಮಂಗಳವಾರ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಬಿಹಾರದಲ್ಲಿ ವಿಭಿನ್ನ ಆಟ ನಡೆಯುತ್ತಿದೆ.
Prashant Kishor
ಪ್ರಶಾಂತ್ ಕಿಶೋರ್
Updated on

ಪಾಟ್ನಾ: 2025ರ ಬಿಹಾರ ವಿಧಾನಸಭಾ ಚುನಾವಣೆಯ ಮಧ್ಯೆ, ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (PK) ಮತ್ತೊಮ್ಮೆ ರಾಜಕೀಯ ವಾತಾವರಣವನ್ನು ಕೆರಳಿಸಿದ್ದಾರೆ. ಮಂಗಳವಾರ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಬಿಹಾರದಲ್ಲಿ ವಿಭಿನ್ನ ಆಟ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಯು ಜನ್ ಸೂರಜ್ ಅಭ್ಯರ್ಥಿಗಳನ್ನು ನಿಗ್ರಹಿಸುತ್ತಿವೆ ಎಂದು ಆರೋಪಿಸಿದರು. ಆಡಳಿತ ಪಕ್ಷವು ಈಗ ಮಹಾಘಟಬಂಧನ್ ಬದಲು ಜನ್ ಸೂರಜ್ ಬಗ್ಗೆ ಹೆಚ್ಚು ಭಯಪಡುತ್ತಿದೆ ಎಂದು ಹೇಳಿದರು.

ಮೂವರು ಘೋಷಿತ ಜನ್ ಸೂರಜ್ ಅಭ್ಯರ್ಥಿಗಳು ನಾಮಪತ್ರವನ್ನು ಬಲವಂತವಾಗಿ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ. ಬಿಜೆಪಿ ಮತ್ತು ಜೆಡಿಯು ನಮ್ಮ ಅಭ್ಯರ್ಥಿಗಳನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡಿವೆ. ನಾವು ಈ ವಿಷಯವನ್ನು ಚುನಾವಣಾ ಆಯೋಗಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು. ದಾನಾಪುರದ ಮುತೂರ್ ಶಾ, ಬ್ರಹ್ಮಪುರದ ಸತ್ಯ ಪ್ರಕಾಶ್ ತಿವಾರಿ ಮತ್ತು ಗೋಪಾಲಗಂಜ್‌ನ ಶಶಿ ಶೇಖರ್ ಸಿಂಗ್ ಎಲ್ಲರೂ ಜನ್ ಸೂರಜ್ ಅಭ್ಯರ್ಥಿಗಳಾಗಿದ್ದರು. ಆದರೆ ಅವರನ್ನು ಚುನಾವಣಾ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಲಾಗಿದೆ. "ಜನ ಸೂರಜ್ ಬಗ್ಗೆ ಬಲಿಷ್ಠರು ಮತ್ತು ಅಧಿಕಾರದಲ್ಲಿರುವವರು ಚಿಂತಿತರಾಗಿದ್ದಾರೆ. ನಾವು ಅಭ್ಯರ್ಥಿಗಳನ್ನು ನಿಲ್ಲಿಸಿರುವ ಸ್ಥಾನಗಳಲ್ಲಿ ಬಿಜೆಪಿ-ಜೆಡಿಯು ನಾಯಕರು ಆತಂಕಗೊಂಡಿದ್ದಾರೆ ಎಂದು ಪಿಕೆ ಹೇಳಿದರು.

ಜನ ಸೂರಜ್‌ನ ಉದ್ದೇಶ ಅಧಿಕಾರವಲ್ಲ, ಆದರೆ ವ್ಯವಸ್ಥೆಯ ಬದಲಾವಣೆ ಮತ್ತು ಇದು ಸಾಂಪ್ರದಾಯಿಕ ಪಕ್ಷಗಳನ್ನು ಆತಂಕಕ್ಕೀಡು ಮಾಡುತ್ತಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಬಿಜೆಪಿ ಮಹಾಮೈತ್ರಿಕೂಟಕ್ಕೆ ಹೆದರುವುದಿಲ್ಲ. ಅವರ ದೊಡ್ಡ ಭಯ ಜನ್ ಸೂರಜ್. ಮಹಾಮೈತ್ರಿಕೂಟದ ಭಯವನ್ನು ಸಾರ್ವಜನಿಕರನ್ನು ದಾರಿ ತಪ್ಪಿಸಲು ಮಾತ್ರ ತೋರಿಸಲಾಗುತ್ತಿದೆ ಎಂದು ಪಿಕೆ ಹೇಳಿದರು. ಜನ್ ಸೂರಜ್ ತನ್ನ ಭರವಸೆಯನ್ನು ಈಡೇರಿಸಿದೆ. ಪಕ್ಷವು ಹೊರಗಿನ ನಾಯಕರಿಗೆ ಟಿಕೆಟ್ ನೀಡಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ನಮ್ಮ ಅಭ್ಯರ್ಥಿಗಳಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಶೇಕಡಾ 90ಕ್ಕೂ ಹೆಚ್ಚು ಅಭ್ಯರ್ಥಿಗಳು ಸಾರ್ವಜನಿಕರಿಂದ ಬಂದವರು ಮತ್ತು ಕೇವಲ ಶೇಕಡಾ 5ರಷ್ಟು ಅಭ್ಯರ್ಥಿಗಳು ಇತರ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದಾರೆ.

Prashant Kishor
ಬಿಹಾರ ಚುನಾವಣೆ; ಪ್ರಚಾರ ಪ್ರಾರಂಭಿಸಿದ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ

ಈ ಬಾರಿ ಬಿಹಾರದಲ್ಲಿ ರಾಜಕೀಯದ ಕೇಂದ್ರ ಬದಲಾಗುತ್ತಿದೆ ಎಂದು ಅವರು ಹೇಳಿದರು. ಹಿಂದೆ ಜಾತಿ ಮತ್ತು ಹಣದ ಆಧಾರದ ಮೇಲೆ ರಾಜಕೀಯ ಮಾಡಿದ್ದವರು ಈಗ ಜನ್ ಸೂರಜ್‌ನ ಪ್ರಾಮಾಣಿಕ ಮುಖಗಳಿಗೆ ಹೆದರುತ್ತಿದ್ದಾರೆ. ಈ ಬಾರಿ, ಸಾರ್ವಜನಿಕರು ನಿಜವಾದ ಪರ್ಯಾಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಪಿಕೆ ಅವರ ಆರೋಪಗಳು ಬಿಹಾರದಲ್ಲಿ ರಾಜಕೀಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಿವೆ. ಬಿಜೆಪಿ ಮತ್ತು ಜೆಡಿಯುನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಜನ್ ಸೂರಜ್ ಈ ಬಾರಿ ಬಿಹಾರದಲ್ಲಿ ಆಟವನ್ನು ಜನರು ಆಡುತ್ತಾರೆ. ಶಕ್ತಿ ಮತ್ತು ತೋಳ್ಬಲದಿಂದಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com