ಅನಿಶ್ಚಿತತೆ ಮುಂದುವರಿಕೆ: ನೇಪಾಳದಿಂದ ತವರಿಗೆ ಮರಳಿದ ಭಾರತೀಯ ಪ್ರವಾಸಿಗರು
ಉತ್ತರ ಪ್ರದೇಶದ ಮಹಾರಾಜಗಂಜ್ನ ಸೋನೌಲಿಯಲ್ಲಿರುವ ಭಾರತ-ನೇಪಾಳ ಗಡಿಯಲ್ಲಿ ಇಂದು ಬುಧವಾರ ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು, ನೇಪಾಳದಲ್ಲಿ ಹೆಚ್ಚುತ್ತಿರುವ ಅಶಾಂತಿಯಿಂದಾಗಿ ಅನೇಕರು ತಮ್ಮ ಪ್ರವಾಸಗಳನ್ನು ಮೊಟಕುಗೊಳಿಸಿ ತವರಿಗೆ ಹಿಂತಿರುಗಿದ್ದಾರೆ.
ಜನರಲ್ ಝಡ್ ಅವರ ಭ್ರಷ್ಟಾಚಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಂತರ ನೇಪಾಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಮೀಳಾ ಸಕ್ಸೇನಾ ಎಂಬುವವರು ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ಯೋಜಿಸಿದ್ದರು.
ನಾವು ಭೋಪಾಲ್ ನಿಂದ ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಹೋಗಲು ವಿಮಾನ ಹತ್ತಿದ್ದೆವು, ಕೊನೆಕ್ಷಣದಲ್ಲಿ ಅದು ರದ್ದಾಯಿತು. ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ನಮಗೆ ದಾಟಲು ಅವಕಾಶ ನೀಡುತ್ತಿಲ್ಲ. ವಿಮಾನ ನಿಲ್ದಾಣ ಮುಚ್ಚಲಾಗಿದೆ. 60 ಜನರ ಗುಂಪು ಹಿಂತಿರುಗುತ್ತಿದ್ದೇವೆ ಎಂದರು.
ಮತ್ತೊಬ್ಬ ಪ್ರವಾಸಿ ಅಶೋಕ್, ವಿಮಾನವನ್ನು ರದ್ದುಗೊಂಡಿದ್ದರಿಂದ ಕಳೆದ ರಾತ್ರಿಯಿಡೀ ಲಾಡ್ಜ್ನಲ್ಲಿ ಉಳಿಯಬೇಕಾಯಿತು ಎಂದು ಹೇಳಿದರು.
ನಾವು ಕಠ್ಮಂಡುವಿನ ಪಶುಪತಿನಾಥ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಆದರೆ ವಿಮಾನ ರದ್ದಾಯಿತು. ರಾತ್ರಿಯಿಡೀ ಲಾಡ್ಜ್ನಲ್ಲಿ ತಂಗಿ ಈಗ ಮನೆಗೆ ಮರಳುತ್ತಿದ್ದೇವೆ ಎಂದು ಅವರು ANI ಸುದ್ದಿಸಂಸ್ಥೆಗೆ ತಿಳಿಸಿದರು. ಭೋಪಾಲ್ ನಿವಾಸಿ ಲತಾ ಮಿಶ್ರಾ, ನೇಪಾಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಮನೆಗೆ ಮರಳುತ್ತಿರುವುದಾಗಿ ಹೇಳಿದರು.
ನೇಪಾಳದ ರಾಮಚಂದ್ರ ಪೌಡೆಲ್, ಪ್ರತಿಭಟನಾ ನಿರತ ನಾಗರಿಕರು ನಡೆಯುತ್ತಿರುವ 'ಜನರಲ್ ಝಡ್' ಚಳವಳಿಗೆ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರವನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ. ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆ ಈಗಾಗಲೇ ಅಂಗೀಕರಿಸಲ್ಪಟ್ಟಿರುವುದರಿಂದ, ರಾಷ್ಟ್ರವು ಮತ್ತಷ್ಟು ರಕ್ತಪಾತ ಅಥವಾ ವಿನಾಶವಿಲ್ಲದೆ ಬಿಕ್ಕಟ್ಟನ್ನು ಪರಿಹರಿಸುವತ್ತ ಗಮನಹರಿಸಬೇಕು ಎಂದು ಅಧ್ಯಕ್ಷ ಪೌಡೆಲ್ ಒತ್ತಿ ಹೇಳಿದರು ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ,
ಎಲ್ಲಾ ಕಡೆಯವರು ಶಾಂತವಾಗಿರಲು, ರಾಷ್ಟ್ರಕ್ಕೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಮತ್ತು ಮಾತುಕತೆಗೆ ಬರಲು ನಾನು ಒತ್ತಾಯಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ, ನಾಗರಿಕರು ಎತ್ತಿರುವ ಬೇಡಿಕೆಗಳನ್ನು ಸಂವಾದ ಮತ್ತು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ


