ಮದ್ಯ ಸೇವಿಸುವಂತೆ ಒತ್ತಾಯ: ಬಿಲ್ ಪಾವತಿಸಲು Seniors ಒತ್ತಡ; ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಸಾಯಿ ತೇಜ ರ‍್ಯಾಗಿಂಗ್‌ಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರ‍್ಯಾಗಿಂಗ್ ಮತ್ತು ಆತ್ಮಹತ್ಯೆ ಎರಡು ಪ್ರಕರಣಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಸಾಯಿ ತೇಜ್
ಸಾಯಿ ತೇಜ್
Updated on

ಹೈದರಾಬಾದ್: ಕಾಲೇಜು ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್ ಮತ್ತು ಕಿರುಕುಳದ ನಂತರ ಹೈದರಾಬಾದ್‌ನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೈದರಾಬಾದ್‌ನ ಸಿದ್ಧಾರ್ಥ್ ಎಂಜಿನಿಯರಿಂಗ್ ಕಾಲೇಜಿನ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಜಾದವ್ ಸಾಯಿ ತೇಜ ತನ್ನ ಹಾಸ್ಟೆಲ್ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿ ಆತಂಕ ವ್ಯಕ್ತಪಡಿಸಿದ್ದು, ತನ್ನನ್ನು ಹೊಡೆದು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕೊನೆಯ ವಿಡಿಯೋದಲ್ಲಿ ಹಂಚಿಕೊಂಡಿದ್ದಾನೆ.

ಸಾಯಿ ತೇಜ ರ‍್ಯಾಗಿಂಗ್‌ಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರ‍್ಯಾಗಿಂಗ್ ಮತ್ತು ಆತ್ಮಹತ್ಯೆ ಎರಡು ಪ್ರಕರಣಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

ಸಾಯಿ ತೇಜನನ್ನ ಬಾರ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಕಾಲೇಜು ಹಿರಿಯ ವಿದ್ಯಾರ್ಥಿಗಳು ಮದ್ಯ ಸೇವಿಸಿ ಸುಮಾರು 10,000 ರೂ. ಬಿಲ್ ಪಾವತಿಸುವಂತೆ ಒತ್ತಾಯಿಸಲಾಯಿತು. ಒತ್ತಡ ನಿಭಾಯಿಸಲು ಸಾಧ್ಯವಾಗದೆ, ಸಾಯಿ ತೇಜ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಕೀಲ ಕಿಶೋರ್ ಆರೋಪಿಸಿದ್ದಾರೆ.

ಸಾಯಿ ತೇಜ್
ಜೆಯು ವಿದ್ಯಾರ್ಥಿ ರ್ಯಾಗಿಂಗ್ ಸಾವು: ಆರೋಪಿಗಳ ವಿರುದ್ಧ 'ಶಿಸ್ತು ಕ್ರಮ' ವಿಳಂಬಕ್ಕೆ ಶಿಕ್ಷಕರ ಸಂಘ ಅಸಮಾಧಾನ!

"ನಾನು ಕಾಲೇಜಿಗೆ ಹೋಗುತ್ತಿದ್ದೆ. ನಾಲ್ಕೈದು ಜನರು ಬಂದು ನನಗೆ ಬೆದರಿಕೆ ಹಾಕಿದರು. ಅವರು ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ" ಎಂದು ಸಾಯಿ ತೇಜ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

"ಅವರು ನನ್ನನ್ನೂ ಹೊಡೆಯುತ್ತಿದ್ದಾರೆ, ನಾನು ತುಂಬಾ ಹೆದರುತ್ತಿದ್ದೇನೆ. ಅವರು ನನ್ನ ಬಳಿಗೆ ಬಂದು ಹಣ ಕೇಳುತ್ತಿದ್ದಾರೆ, ನಾನು ಏನು ಮಾಡಬೇಕು? ನಾನು ಸಾಯುತ್ತೇನೆ. ದಯವಿಟ್ಟು ನನ್ನನ್ನು ಉಳಿಸಿ" ಎಂದು ಅವರು ವಿಡಿಯೋ ಮಾಡಿದ್ದಾರೆ. ರಾತ್ರಿಯಿಡೀ 300 ಕಿ.ಮೀ ಪ್ರಯಾಣಿಸಿದ ನಂತರ, ಸಾಯಿ ತೇಜ ಅವರ ಕುಟುಂಬ ಮತ್ತು ವಕೀಲ ಕಿಶೋರ್ ಅವರ ಹಾಸ್ಟೆಲ್ ತಲುಪಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com