TNIE EXCLUSIVE | ವಿಮಾನದ ಹಿಂದೆ ಚಕ್ರದಲ್ಲಿ ರಹಸ್ಯವಾಗಿ 94 ನಿಮಿಷ ಪ್ರಯಾಣಿಸಿ ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದ ಆಫ್ಘನ್ ಬಾಲಕ !

ಈ ಘಟನೆ ನಡೆದಿದ್ದು ಅಫ್ಘಾನಿಸ್ತಾನದ KAM ಏರ್ ನಿರ್ವಹಿಸುವ RQ4401 ವಿಮಾನದಲ್ಲಿ.
The Airbus A340 that landed in New Delhi Sunday with a stowaway
ದೆಹಲಿಯಲ್ಲಿ ಲ್ಯಾಂಡ್ ಆದ ಏರ್‌ಬಸ್ A340
Updated on

ನವದೆಹಲಿ: ಅಫ್ಘಾನಿಸ್ತಾನದ 13 ವರ್ಷದ ಬಾಲಕನೊಬ್ಬ ನಿನ್ನೆ ಭಾನುವಾರ ಭಾರತಕ್ಕೆ ವಿಮಾನದ ಹಿಂಭಾಗದ ಚಕ್ರದ ಬಾವಿಯಲ್ಲಿ ಅಡಗಿಕೊಂಡು ರಹಸ್ಯವಾಗಿ ಪ್ರಯಾಣ ನಡೆಸಿರುವ ಘಟನೆ ನಡೆದಿದೆ.

ಈ ಬಾಲಕ 94 ನಿಮಿಷಗಳ ಪ್ರಯಾಣದಲ್ಲಿ ಬದುಕುಳಿದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾನೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ (The New Indian Express) ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು ಅಫ್ಘಾನಿಸ್ತಾನದ KAM ಏರ್ ನಿರ್ವಹಿಸುವ RQ4401 ವಿಮಾನದಲ್ಲಿ. flightradar24.com ಪ್ರಕಾರ, ಏರ್‌ಬಸ್ ಎ340 ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ಬೆಳಗ್ಗೆ 8:46 ಕ್ಕೆ ಹೊರಟು ಟರ್ಮಿನಲ್ 3 ರಲ್ಲಿ ಬೆಳಗ್ಗೆ 10:20 ಕ್ಕೆ ಇಳಿಯಿತು. ಕುರ್ತಾ ಮತ್ತು ಪೈಜಾಮಾ ಧರಿಸಿದ್ದ ಬಾಲಕ ಇರಾನ್‌ಗೆ ನುಸುಳಲು ಉದ್ದೇಶಿಸಿದ್ದ ಆದರೆ ತಪ್ಪು ವಿಮಾನ ಹತ್ತಿದ್ದ ಎಂದು ಭದ್ರತಾ ಮೂಲ ತಿಳಿಸಿದೆ.

The Airbus A340 that landed in New Delhi Sunday with a stowaway
Asia Cup 2025: 'ರಫೇಲ್ ಯುದ್ಧ ವಿಮಾನ ಬಿತ್ತು...'; ಮೈದಾನದಲ್ಲೇ ಪಾಕ್ ವೇಗಿ Haris Rauf ಉದ್ದಟತನ! Video

ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಪ್ರಯಾಣಿಕರು ಹತ್ತಿದ ನಂತರ ವಿಮಾನ ಹತ್ತುವಾಗ ಚಕ್ರದ ಬಾವಿಯಲ್ಲಿ ಅಡಗಿಕೊಂಡಿದ್ದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಇದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಪ್ರಕ್ರಿಯೆಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಂಗಿ ಪ್ರಯಾಣಿಕರು ಇಳಿದ ನಂತರ, T3 ಟ್ಯಾಕ್ಸಿವೇಯಲ್ಲಿ ನಿರ್ವಾಹಕರು ನಿರ್ಬಂಧಿತ ಏಪ್ರನ್ ಪ್ರದೇಶದಲ್ಲಿ ಹುಡುಗ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಬಾಲಕನನ್ನು ವಶಕ್ಕೆ ತೆಗೆದುಕೊಂಡು, ನಂತರ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿತು. ಅಪ್ರಾಪ್ತ ವಯಸ್ಕನಾಗಿದ್ದರಿಂದ, ಬಾಲಕ ಕಾನೂನು ಆರೋಪಗಳಿಂದ ಮುಕ್ತನಾಗಿದ್ದಾನೆ ಎಂದು ಮೂಲವೊಂದು ದೃಢಪಡಿಸಿದೆ.

The Airbus A340 that landed in New Delhi Sunday with a stowaway
ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ

ವಿಮಾನಯಾನ ತಜ್ಞರೊಬ್ಬರು ಈ ಕೃತ್ಯವನ್ನು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ, ಹಾರಾಟದ ಸಮಯದಲ್ಲಿ ವಿಮಾನದ ಹೊರಗೆ ಬದುಕುಳಿಯುವುದು ಅಸಾಧ್ಯ. ಇದು ವೈದ್ಯರಿಗೇ ಅಚ್ಚರಿಯಾಗಿದೆ.

ವಾಯುಯಾನ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಹುಡುಗ ಹೇಗೆ ಬದುಕುಳಿಯಬಹುದೆಂದು ವಿವರಿಸಿದರು: ಟೇಕ್ ಆಫ್ ಆದ ನಂತರ, ವೀಲ್ ಬೇ ಬಾಗಿಲು ತೆರೆಯುತ್ತದೆ, ಚಕ್ರ ಹಿಂದಕ್ಕೆ ಸರಿದು ಬಾಗಿಲು ಮುಚ್ಚುತ್ತದೆ. ಅವನು ಬಹುಶಃ ಈ ಸುತ್ತುವರಿದ ಜಾಗವನ್ನು ಪ್ರವೇಶಿಸಿದನು, ಅದು ಒತ್ತಡಕ್ಕೊಳಗಾಗಿರಬಹುದು, ಪ್ರಯಾಣಿಕರ ಕ್ಯಾಬಿನ್‌ನಂತೆಯೇ ತಾಪಮಾನವನ್ನು ಕಾಯ್ದುಕೊಳ್ಳಬಹುದು ಎಂದರು.

ಚಂಡೀಗಢದ PGIMER ಅಸೋಸಿಯೇಟ್ ಪ್ರೊಫೆಸರ್ ಡಾ. ರಿತಿನ್ ಮೊಹಿಂದ್ರಾ "10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ, ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ, ವಿಮಾನವು ಕ್ರೂಸಿಂಗ್ ಎತ್ತರವನ್ನು ತಲುಪುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿ ಸಾವಿಗೆ ಕಾರಣವಾಗುತ್ತದೆ. -40°C ಮತ್ತು -60°C ನಡುವಿನ ತಾಪಮಾನವು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಹಿಮಪಾತ ಮತ್ತು ಶೀಘ್ರದಲ್ಲೇ ಮಾರಕ ಲಘೂಷ್ಣತೆಗೆ ಕಾರಣವಾಗುತ್ತದೆ" ಎಂದರು.

ಐವರಲ್ಲಿ ಒಬ್ಬರು ಬದುಕಬಹುದು!

ಹೈಪೋಕ್ಸಿಯಾ (ಆಮ್ಲಜನಕದ ಕೊರತೆ), ಲಘೂಷ್ಣತೆ, ಫ್ರಾಸ್‌ಬೈಟ್ ಮತ್ತು ಗೇರ್ ನ್ನು ಹಿಂತೆಗೆದುಕೊಳ್ಳುವುದರಿಂದ ಅಥವಾ ಇಳಿಯುವಾಗ ಬೀಳುವಂತಹ ಯಾಂತ್ರಿಕ ಅಪಾಯಗಳಿಂದಾಗಿ ಚಕ್ರ ಬಾವಿಯ ಸ್ಟೌವೇಗಳು ಬದುಕುಳಿಯುವುದು ಅಪರೂಪ. ಜಾಗತಿಕವಾಗಿ ಐವರಲ್ಲಿ ಒಬ್ಬರು ಬದುಕಿ ಉಳಿಯಬಹುದಷ್ಟೆ.

The Airbus A340 that landed in New Delhi Sunday with a stowaway
ಟೇಕ್ ಆಫ್ ಆದ ನಂತರ ಕಳಚಿ ಬಿತ್ತು ಚಕ್ರ; ಸ್ಪೈಸ್ ಜೆಟ್ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್! Video

ಭಾರತದಲ್ಲಿ 2ನೇ ಘಟನೆ

ಭಾನುವಾರದ ಸ್ಟೂವೇ ಘಟನೆಯು ಭಾರತೀಯ ವಿಮಾನ ನಿಲ್ದಾಣದಲ್ಲಿ ದಾಖಲಾದ ಎರಡನೇ ಪ್ರಕರಣವಾಗಿದೆ. ಅಕ್ಟೋಬರ್ 14, 1996 ರಂದು, ಸಹೋದರರಾದ ಪ್ರದೀಪ್ ಸೈನಿ (22ವ) ಮತ್ತು ವಿಜಯ್ ಸೈನಿ (19ವ) ಅವರನ್ನು ದೆಹಲಿಯಿಂದ ಲಂಡನ್‌ಗೆ ಬ್ರಿಟಿಷ್ ಏರ್‌ವೇಸ್‌ನ ಬೋಯಿಂಗ್ 747 ವಿಮಾನದಲ್ಲಿ ಸಾಗಿಸಲಾಯಿತು. ವಿಮಾನವು ಹೀಥ್ರೂ ವಿಮಾನ ನಿಲ್ದಾಣವನ್ನು ತಲುಪಿದಾಗ ವಿಜಯ್ ಮೃತಪಟ್ಟಿದ್ದರೆ ರಣದೀಪ್ ಬದುಕುಳಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com