Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಇಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ತಿರುಚಿರಾಪಳ್ಳಿಗೆ ಆಗಮಿಸಿದ ನಟ ವಿಜಯ್ ಅಲ್ಲಿ ಭರ್ಜರಿ ಪ್ರಚಾರ ನಡೆಸಿದರು.
TVK Chief Vijay Holds Election Campaign
ನಟ ವಿಜಯ್
Updated on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮದೇ ಟಿವಿಕೆ ಪಕ್ಷದ ಮೂಲಕ ಸ್ಪರ್ಧಿಸಿರುವ ಖ್ಯಾತ ತಮಿಳುನಟ ದಳಪತಿ ವಿಜಯ್ ತಮ್ಮ ಪ್ರಚಾರದ ವೇಳೆ ಹೂವಿನಚೆಂಡನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿ ಹೆದರಿ ಓಡಿದ ಘಟನೆ ನಡೆದಿದೆ ಎನ್ನಲಾಗಿದೆ.

ಇಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ತಿರುಚಿರಾಪಳ್ಳಿಗೆ ಆಗಮಿಸಿದ ನಟ ವಿಜಯ್ ಅಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಈ ವೇಳೆ ಹೆದ್ದಾರಿಯಲ್ಲಿ ಕೆಲ ಹೊತ್ತು ವಿಜಯ್ ಸೈಕಲ್ ಸವಾರಿ ಕೂಡ ಮಾಡಿದರು. ಈ ಹೊತ್ತಿನಲ್ಲಿ ಕೆಲ ಅಭಿಮಾನಿಗಳು ಅವರನ್ನು ಹಿಡಿಯಲು ಓಡಿಬಂದರು.

ಆದರೂ ನಟ ವಿಜಯ್ ಅವರಿಗೆ ಸಿಗದೇ ವೇಗವಾಗಿ ಸೈಕಲ್ ತುಳಿಯುತ್ತಾ ಮುಂದಕ್ಕೆ ಹೋದರು. ಈ ವೇಳೆ ಅವರ ಹಿಂದೆ ರಕ್ಷಣಾ ಸಿಬ್ಬಂದಿಗಳು ಅಭಿಮಾನಿಗಳನ್ನು ತಡೆದು ಪಕ್ಕಕ್ಕೆ ಕಳುಹಿಸಿದರು.

TVK Chief Vijay Holds Election Campaign
234 ಕ್ಷೇತ್ರಗಳಲ್ಲೂ DMK ಮೈತ್ರಿಕೂಟ ಗೆಲುವು; ಯಾರೇ ಬಂದರೂ ನಮಗೆ ಚಿಂತೆಯಿಲ್ಲ: ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಸ್ಟಾಲಿನ್ ಮಾತು!

ಬಾಂಬ್ ಎಂದು ಹೆದರಿ ಓಡಿದ ವಿಜಯ್

ಇನ್ನು ಇದೇ ಸಂದರ್ಭದಲ್ಲಿ ವಿಜಯ್ ಸೈಕಲ್ ತುಳಿಯುತ್ತಿದ್ದಾಗ ಮತ್ತೋರ್ವ ಅಭಿಮಾನಿ ತಾನು ತಂದಿದ್ದ ಹೂಗಳನ್ನು ಚೆಂಡಿನ ರೀತಿ ಮಾಡಿ ನಟ ವಿಜಯ್ ಮುಂದೆ ಎಸೆದಿದ್ದಾನೆ.

ಇದನ್ನು ನೋಡಿದ ವಿಜಯ್ ಮತ್ತು ಅವರ ಭದ್ರತಾ ಸಿಬ್ಬಂದಿಗಳು ಅದನ್ನು ಬಾಂಬ್ ಎಂದು ಭಾವಿಸಿ ರಸ್ತೆಯಲ್ಲೇ ಸೈಕಲ್ ಬಿಟ್ಟು ತಮ್ಮ ವಾಹನದತ್ತ ಓಡಿದ ಪ್ರಸಂಗ ನಡೆಯಿತು.

ಬಳಿಕ ಅದು ಬಾಂಬ್ ಅಲ್ಲ.. ಹೂ ಎಂದು ತಿಳಿದು ನಟ ವಿಜಯ್ ತಮ್ಮ ಪ್ರಚಾರ ಮುಂದುವರೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com