ಮಕ್ಕಳಿಗೆ ಕಟುಕನಾದ ತಂದೆ: ಅವಳಿ ಹೆಣ್ಣು ಮಕ್ಕಳ ಕತ್ತು ಸೀಳಿ ಬರ್ಬರ ಹತ್ಯೆ!

ಕಿದ್ವಾಯಿ ನಗರ ಪ್ರದೇಶದ ತ್ರಿಮೂರ್ತಿ ಅಪಾರ್ಟ್‌ಮೆಂಟ್ ಹಂತ -2ರಲ್ಲಿ ಭಾನುವಾರ ಮುಂಜಾನೆ ತಂದೆಯೇ ತನ್ನ ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಐದನೇ ತರಗತಿಯ ವಿದ್ಯಾರ್ಥಿಗಳಾದ 11 ವರ್ಷದ ರಿದ್ಧಿ ಮತ್ತು ಸಿದ್ಧಿ ಶವಗಳು ಕೋಣೆಯಲ್ಲಿ..
ಅವಳಿ ಮಕ್ಕಳನ್ನು ಕೊಂದ ತಂದೆ
ಅವಳಿ ಮಕ್ಕಳನ್ನು ಕೊಂದ ತಂದೆ
Updated on

ಕಾನ್ಪುರ: ಕಿದ್ವಾಯಿ ನಗರ ಪ್ರದೇಶದ ತ್ರಿಮೂರ್ತಿ ಅಪಾರ್ಟ್‌ಮೆಂಟ್ ಹಂತ -2ರಲ್ಲಿ ಭಾನುವಾರ ಮುಂಜಾನೆ ತಂದೆಯೇ ತನ್ನ ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಐದನೇ ತರಗತಿಯ ವಿದ್ಯಾರ್ಥಿಗಳಾದ 11 ವರ್ಷದ ರಿದ್ಧಿ ಮತ್ತು ಸಿದ್ಧಿ ಶವಗಳು ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಔಷಧ ಉದ್ಯಮಿಯಾಗಿರುವ ತಂದೆಯೇ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಮೃತ ಬಾಲಕಿಯರು ಮದರ್ ತೆರೇಸಾ ಮಿಷನ್ ಹೈಸ್ಕೂಲ್‌ನಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳು. ಕುಟುಂಬವು ಕಳೆದ ಎಂಟು ವರ್ಷಗಳಿಂದ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿತ್ತು. ಈ ಘಟನೆ ಬೆಳಗಿನ ಜಾವ 2 ರಿಂದ 2:30ರ ನಡುವೆ ನಡೆದಿದೆ. ಕೊಲೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಉಕ್ಕಿನ ಕತ್ತಿಯನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ತಂದೆ ಕೊಲೆಗೆ ಒಪ್ಪಿಕೊಂಡಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅವಳಿ ಮಕ್ಕಳನ್ನು ಕೊಂದ ತಂದೆ
ಮಹಾರಾಷ್ಟ್ರ 'Love Trap' ಕೇಸ್: 180 ಯುವತಿಯರು, 350 ವಿಡಿಯೋಗಳು.. ಬ್ರೇಕಪ್ ಬಳಿಕ 'Playboy' ಆಗಿ ಬದಲಾಗಿದ್ದ ಆರೋಪಿ Mohammad Ayaz

ತಾಯಿ ರೇಷ್ಮಾ ಕ್ಷೇತ್ರಿ ಮತ್ತು ಆಕೆಯ ಆರು ವರ್ಷದ ಮಗ ರುದ್ರವ್ ಘಟನೆಯ ಸಮಯದಲ್ಲಿ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ರೇಷ್ಮಾಳನ್ನು ಎಬ್ಬಿಸಿದರು. ಪೊಲೀಸರು ಆರೋಪಿ ತಂದೆಯನ್ನು ಸ್ಥಳದಲ್ಲಿ ಬಂಧಿಸಿದರು. ಈ ದಂಪತಿಗಳು ಸುಮಾರು 12 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಪೊಲೀಸರು ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ವಿಧಿವಿಜ್ಞಾನ ತಂಡವನ್ನು ಸಹ ಸ್ಥಳಕ್ಕೆ ಕರೆಸಲಾಗಿದೆ. ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com