'ನನ್ನ ಪಕ್ಷದ 27 ಅಭ್ಯರ್ಥಿಗಳನ್ನು TMC ಖರೀದಿಸಿದೆ'- ಹುಮಾಯುನ್ ಕಬೀರ್ ಆರೋಪ; 'ಬಿಜೆಪಿ ಏಜೆಂಟ್, ಗೋ ಬ್ಯಾಕ್' ಘೋಷಣೆ; Video

ಪ್ರತಿಭಟನಾಕಾರರು ಹುಮಾಯೂನ್ ಕಬೀರ್ ಅವರ ವಾಹನವನ್ನು ಸುತ್ತುವರೆದರು. ಅವರು ಮುರ್ಷಿದಾಬಾದ್‌ನ ಭಾರತ್ಪುರ್ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಬಾಬ್ರಿ ಮಾದರಿಯ ಮಸೀದಿ ಕುರಿತು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತುಗೊಂಡ ಬಳಿಕ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದಾರೆ.
Security check underway at a polling station during voting in the first phase of the West Bengal Assembly elections, in Murshidabad
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮುರ್ಷಿದಾಬಾದ್‌ನಲ್ಲಿ ಇರುವ ಮತಗಟ್ಟೆಯಲ್ಲಿ ಭದ್ರತಾ ತಪಾಸಣೆ ನಡೆಯುತ್ತಿದೆ
Updated on

ಇಂದು ಗುರುವಾರ ಪಶ್ಚಿಮ ಬಂಗಾಳ ಚುನಾವಣೆ ಮಧ್ಯೆ, ತನ್ನ ಪಕ್ಷದ ಹಲವಾರು ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲಂಚ ನೀಡಿದೆ ಎಂದು ಆಮ್ ಜನತಾ ಉನ್ನಯನ್ ಪಕ್ಷದ (AJUP) ಅಧ್ಯಕ್ಷ ಹುಮಾಯುನ್ ಕಬೀರ್ ಆರೋಪಿಸಿದ್ದಾರೆ.

ಕಬೀರ್ ಅವರು ಇಂದು ಬೆಳಗ್ಗೆಯೇ ಮತ ಚಲಾಯಿಸಿದ ಬಳಿಕ, ಮುರ್ಷಿದಾಬಾದ್ ಜಿಲ್ಲೆಯ ನವೋದಾ ವಿಧಾನಸಭಾ ಕ್ಷೇತ್ರದ ಶಿಬನಗರ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಟಿಎಂಸಿ ಬೆಂಬಲಿಗರಿಂದ ಪ್ರತಿಭಟನೆ ಎದುರಿಸಿದರು. ಪ್ರತಿಭಟನಾಕಾರರು “ಗೋಬ್ಯಾಕ್” ಎಂಬ ಘೋಷಣೆಗಳನ್ನು ಕೂಗುತ್ತಾ, ಅವರನ್ನು “ಬಿಜೆಪಿ ಏಜೆಂಟ್” ಎಂದು ಕರೆಯುವ ಮೂಲಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು.

ಸ್ಥಳೀಯ ಟಿಎಂಸಿ ನಾಯಕರ ನೇತೃತ್ವದಲ್ಲಿ ಪ್ರತಿಭಟನಾಕಾರರು ಹುಮಾಯೂನ್ ಕಬೀರ್ ಅವರ ವಾಹನವನ್ನು ಸುತ್ತುವರೆದರು. ಅವರು ಮುರ್ಷಿದಾಬಾದ್‌ನ ಭಾರತ್ಪುರ್ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಬಾಬ್ರಿ ಮಾದರಿಯ ಮಸೀದಿ ಕುರಿತು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತುಗೊಂಡ ಬಳಿಕ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದಾರೆ.

AJUP ಕಾರ್ಯಕರ್ತರು ತಮ್ಮ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರ ಮೇಲೆ ಅವರ ಮನೆಯಲ್ಲೇ ಆಡಳಿತಾರೂಢ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಸ್ಥಳಕ್ಕೆ ನಿಯೋಜಿಸಲಾಗಿದ್ದ ಕೇಂದ್ರ ಭದ್ರತಾ ಪಡೆಗಳು ಹಸ್ತಕ್ಷೇಪ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಹುಮಾಯೂನ್ ಕಬೀರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ವಿಶಾಲ ಮಟ್ಟದ ರಾಜಕೀಯ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ತಮ್ಮ ಪಕ್ಷದ 27 ಅಭ್ಯರ್ಥಿಗಳನ್ನು 9 ಲಕ್ಷ ರೂಪಾಯಿಗಳಿಂದ 30 ಲಕ್ಷ ರೂಪಾಯಿಗಳವರೆಗೆ ಹಣ ನೀಡಿ ಖರೀದಿಸಲಾಗಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ 142 ಅಭ್ಯರ್ಥಿಗಳೊಂದಿಗೆ ಸ್ಪರ್ಧೆ ಆರಂಭಿಸಿದ್ದ ತಮ್ಮ ಪಕ್ಷ ಈಗ 115 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ ಎಂದು ಹೇಳಿದರು.

Security check underway at a polling station during voting in the first phase of the West Bengal Assembly elections, in Murshidabad
Tamilnadu & West Bengal Election 2026 Highlights | ಸಂಜೆ 6 ಗಂಟೆ ವೇಳೆಗೆ ತಮಿಳುನಾಡು ಶೇ. 84.41, ಪಶ್ಚಿಮ ಬಂಗಾಳ ಹಂತ-I ಶೇ.91.46 ಮತದಾನ

ಇದಕ್ಕೂ ಮೊದಲು, ಕಬೀರ್ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಿಂದೂಗಳ ತೃಪ್ತಿಪಡಿಸುವ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು.

ಬಿಜೆಪಿಯ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಮೇ 4ರಂದು ಫಲಿತಾಂಶಗಳು ಹೊರಬಂದ ನಂತರ ನಿಜವಾದ ರಾಜಕೀಯ ಪರಿಸ್ಥಿತಿ ನಿಮಗೆ ತಿಳಿಯುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com