ವಿಶಾಖಪಟ್ಟಣದಲ್ಲಿ RSS, 32 ಅಂಗಸಂಸ್ಥೆಗಳ ಸಭೆ; Gen-Z ಗಳ ಬಗ್ಗೆ ಮಹತ್ವದ ಚರ್ಚೆ

ಪರಸ್ಪರ ಸಮನ್ವಯ ಮತ್ತು ಸಹಕಾರವನ್ನು ಹೆಚ್ಚಿಸುವಂತಹ ವಿಷಯಗಳನ್ನು ಹಾಗೂ ಸಾರ್ವಜನಿಕ ಕಲ್ಯಾಣ ಮತ್ತು ನೀತಿ-ಸಂಬಂಧಿತ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
In this photo from Aug. 06, 2026, RSS chief Mohan Bhagwat speaks at the gathering of Gen Z and Gen Alpha in Mumbai
ಜೆನ್ ಝೀಗಳೊಂದಿಗೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗ್ವತ್ ಚರ್ಚೆonline desk
Updated on

ವಿಶಾಖಪಟ್ಟಣ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿ ಹಾಗೂ ಅದರ 32 ಅಂಗಸಂಸ್ಥೆಗಳ ಹಿರಿಯ ಕಾರ್ಯಕರ್ತರು ಮುಂದಿನ ವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ವಾರ್ಷಿಕ ಸಮನ್ವಯ ಸಭೆ ನಡೆಸಲಿದ್ದಾರೆ.

ಇದರಲ್ಲಿ ಜೆನ್ ಝೀಗೆ ಸಂಬಂಧಿಸಿದ ವಿಷಯಗಳು ಮತ್ತು ಇತರ ಸಮಕಾಲೀನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಮೂರು ದಿನಗಳ ಸಭೆಯು ಆಗಸ್ಟ್ 19 ರಂದು ವಿಶಾಖಪಟ್ಟಣದ ಗುಡಿಲೋವಾದಲ್ಲಿ ಪ್ರಾರಂಭವಾಗಲಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಇದು ಆಗಸ್ಟ್ 21 ರಂದು ಮುಕ್ತಾಯಗೊಳ್ಳುತ್ತದೆ.

"ಸಭೆಯ ಸಮಯದಲ್ಲಿ, ಎಲ್ಲಾ 32 ಸಂಸ್ಥೆಗಳು ತಮ್ಮ ತಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತವೆ ಮತ್ತು ವಿವಿಧ ಪ್ರಮುಖ ವಿಷಯಗಳ ಕುರಿತು ತಮ್ಮ ಅವಲೋಕನಗಳು ಮತ್ತು ಸಲಹೆಗಳನ್ನು ಪ್ರಸ್ತುತಪಡಿಸುತ್ತವೆ" ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

In this photo from Aug. 06, 2026, RSS chief Mohan Bhagwat speaks at the gathering of Gen Z and Gen Alpha in Mumbai
ಪ್ರತಿಭಟನೆ ನಡೆಸಿದಾಕ್ಷಣ ಜೆನ್ ಝೀ ಗಳು ರಾಷ್ಟ್ರವಿರೋಧಿಯಾಗುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್; Video

ಪರಸ್ಪರ ಸಮನ್ವಯ ಮತ್ತು ಸಹಕಾರವನ್ನು ಹೆಚ್ಚಿಸುವಂತಹ ವಿಷಯಗಳನ್ನು ಹಾಗೂ ಸಾರ್ವಜನಿಕ ಕಲ್ಯಾಣ ಮತ್ತು ನೀತಿ-ಸಂಬಂಧಿತ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

"ಜನಸಂಖ್ಯೆಯ ಅಸಮತೋಲನ, 'ನಶ ಮುಕ್ತಿ' (ವ್ಯಸನ ನಿವಾರಣೆ), ಯುವಕರಲ್ಲಿ ಜಾಗೃತಿ ಮೂಡಿಸುವುದು, 'ಪಂಚ ಪರಿವರ್ತನ' ಅನುಷ್ಠಾನ, ಭಾರತೀಯ ಅಭಿವೃದ್ಧಿ ಪರಿಕಲ್ಪನೆ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ" ಎಂದು ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿ ಹೇಳಿದರು.

"ಜೆನ್ ಝೀಗೆ ಸಂಬಂಧಿಸಿದ ವಿಷಯಗಳ" ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಎಲ್ಲಾ 32 ಆರ್‌ಎಸ್‌ಎಸ್ ಅಂಗಸಂಸ್ಥೆಗಳ ಉನ್ನತ ಪದಾಧಿಕಾರಿಗಳು, ಅವುಗಳ ಅಧ್ಯಕ್ಷರು ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

"ಸರಸಂಘಚಾಲಕ್ ಡಾ. ಮೋಹನ್ ಭಾಗವತ್, ಸರ್ಕಾರಿವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಎಲ್ಲಾ ಸಹಸರ್ಕಾರ್ಯವಾಹರು ಮತ್ತು ಅಖಿಲ ಭಾರತೀಯ ಕಾರ್ಯವಿಭಾಗ್ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ" ಎಂದು ಆರ್‌ಎಸ್‌ಎಸ್ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com