ಅಜಿತ್ ಪವಾರ್ ಸಾವಿನ ಬಗ್ಗೆ ಇನ್ನೂ ಅನುಮಾನ ಇದೆ: ಶಾಸಕ ರೋಹಿತ್ ಪವಾರ್

ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ ಪವಾರ್ ಸಂಬಂಧಿ ಹಾಗೂ ಶಾಸಕ ರೋಹಿತ್ ಪವಾರ್ ಅವರು, ಎನ್‌ಸಿಪಿ ಬಣಗಳು ಒಂದಾಗಬೇಕೆಂದು ಅಜಿತ್ ಪವಾರ್ ಬಯಸಿದ್ದರು ಮತ್ತು ವಿಲೀನಕ್ಕಾಗಿ ಯತ್ನಿಸುತ್ತಿದ್ದರು ಎಂದರು.
Doubts persist over Ajit Pawar's death: Nephew Rohit Pawar
ರೋಹಿತ್ ಪವಾರ್ - ಅಜಿತ್ ಪವಾರ್
Updated on

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸುತ್ತ ಎಲ್ಲರಿಗೂ ಅನುಮಾನಗಳಿವೆ ಮತ್ತು ಫೆಬ್ರವರಿ 10 ರಂದು ಅದರ ಬಗ್ಗೆ ವಿವರವಾದ ಮಾಹಿತಿ ನೀಡುವುದಾಗಿ ಎನ್‌ಸಿಪಿ-ಶರದ್‌ಚಂದ್ರ ಪವಾರ್ ನಾಯಕ ರೋಹಿತ್ ಪವಾರ್ ಅವರು ಶನಿವಾರ ಹೇಳಿದ್ದಾರೆ.

ಇಂದು ಬಾರಾಮತಿಯಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ ಪವಾರ್ ಸಂಬಂಧಿ ಹಾಗೂ ಶಾಸಕ ರೋಹಿತ್ ಪವಾರ್ ಅವರು, ಎನ್‌ಸಿಪಿ ಬಣಗಳು ಒಂದಾಗಬೇಕೆಂದು ಅಜಿತ್ ಪವಾರ್ ಬಯಸಿದ್ದರು ಮತ್ತು ವಿಲೀನಕ್ಕಾಗಿ ಯತ್ನಿಸುತ್ತಿದ್ದರು ಎಂದರು.

ಕಳೆದ ತಿಂಗಳು ವಿಮಾನ ಪತನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ನಡುವೆಯೇ ಮಹಾರಾಷ್ಟ್ರದ 12 ಜಿಲ್ಲಾ ಪರಿಷತ್‌ಗಳು ಮತ್ತು 125 ಪಂಚಾಯತ್ ಸಮಿತಿಗಳಿಗೆ ಶನಿವಾರ ಚುನಾವಣೆ ನಡೆಯುತ್ತಿದೆ.

Doubts persist over Ajit Pawar's death: Nephew Rohit Pawar
Ajit Pawar Plane Crash: ವಿಮಾನ ದುರಂತ ಸ್ಥಳದಲ್ಲಿ Black Box ಪತ್ತೆ..!

ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿ ಟೇಬಲ್-ಟಾಪ್ ಏರ್ ಸ್ಟ್ರಿಪ್‌ನಲ್ಲಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್ 45 ವಿಮಾನ ಪತನವಾಗಿತ್ತು.

"ಈ ವಿಮಾನ ಅಪಘಾತ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಮತ್ತು ಅನುಮಾನಗಳಿವೆ. ಫೆಬ್ರವರಿ 10 ರಂದು ಮುಂಬೈನಲ್ಲಿ ನಾನು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ. ಅಪಘಾತ ಏಕೆ ಸಂಭವಿಸಿತು ಮತ್ತು ಅದು ಹೇಗೆ ಸಂಭವಿಸಿರಬಹುದು, ಈ ವಿಷಯಗಳನ್ನು ಫೆಬ್ರವರಿ 10 ರಂದು ಎತ್ತಲಾಗುವುದು" ಎಂದು ರೋಹಿತ್ ಪವಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com