

ಲಖನೌ: 'ಖಯಾಮತ್' ದಿನ ಎಂದಿಗೂ ಬರುವುದಿಲ್ಲ. ಆದ್ದರಿಂದ ಬಾಬರಿ ಮಸೀದಿಯನ್ನು ಪುನರ್ ನಿರ್ಮಾಣ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಪ್ರತಿಪಾದಿಸಿದ್ದಾರೆ.
ಇಂದು ಬಾರಾಬಂಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ನಾವು ರಾಮಲಲ್ಲಾಗೆ ಅದೇ ಸ್ಥಳದಲ್ಲಿ ಮಂದಿರ ನಿರ್ಮಿಸುತ್ತೇವೆ’ ಎಂದು ಹೇಳಿದ್ದೇವು ಮತ್ತು ಅದನ್ನೇ ಮಾಡಿದ್ದೇವೆ ಎಂದು ಅಯೋಧ್ಯೆಯ ರಾಮ ಮಂದಿರ ನಿರ್ಮಾಣವನ್ನು ಉಲ್ಲೇಖಿಸಿದರು.
ಪ್ರೇಕ್ಷಕರು "ಜೈ ಶ್ರೀ ರಾಮ್" ಎಂದು ಜಪಿಸುವ ಮೂಲಕ ಉತ್ತರಿಸಿದರು. "'ಖಯಾಮತ್'(ತೀರ್ಪಿನ ದಿನ) ದಿನ ಎಂದಿಗೂ ಬರುವುದಿಲ್ಲ, ಆದ್ದರಿಂದ ಬಾಬರಿ ರಚನೆಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ. 'ಖಯಾಮತ್' ದಿನದ ಕನಸು ಕಾಣುತ್ತಿರುವವರು ಕೊಳೆಯುತ್ತಾರೆ, ಆ ದಿನ ಬರುತ್ತದೆ" ಎಂದು ಆದಿತ್ಯನಾಥ್ ಹೇಳಿದರು.
ಇಂದು ಮತ್ತೆ ಹೇಳುತ್ತಿದ್ದೇನೆ. ಕಯಾಮತ್ ದಿನ ಎಂದಿಗೂ ಬರುವುದಿಲ್ಲ. ಬಾಬ್ರಿ ಮಸೀದಿ ಪುನರ್ ನಿರ್ಮಾಣವೂ ಎಂದಿಗೂ ನಡೆಯುವುದಿಲ್ಲ. ಅದನ್ನು ಕನಸು ಕಾಣುವವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದರು.
ಈ ದೇಶದ ಕಾನೂನಿನ ಪ್ರಕಾರ ಬದುಕಿ. ಕಾನೂನು ಪಾಲಿಸಿದರೆ ಲಾಭ, ಉಲ್ಲಂಘಿಸಿದರೆ ಶಿಕ್ಷೆ ಖಚಿತ. ಕಾನೂನು ಉಲ್ಲಂಘಿಸಿ ಸ್ವರ್ಗ ಸಿಗುತ್ತದೆ ಎಂದು ಕನಸು ಕಾಣುವುದು ಭ್ರಮೆ ಎಂದು ಎಚ್ಚರಿಸಿದರು.
ರಾಮ ಮಂದಿರ ಚಳವಳಿಯನ್ನು ಭಾರತದ ಸಂಸ್ಕೃತಿ ಮತ್ತು ಸನಾತನ ಪರಂಪರೆಯೊಂದಿಗೆ ಸಂಪರ್ಕಿಸಿದ ಯೋಗಿ, ಕಳೆದ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣ ಮಾಡಿದ್ದನ್ನು ನೆನಪಿಸಿದರು. ಕೇಸರಿ ಧ್ವಜವು ಭಾರತದ ಹೆಮ್ಮೆ ಮತ್ತು ವೈಭವಯುತ ಪರಂಪರೆಯ ಪ್ರತೀಕವಾಗಿದೆ ಎಂದರು.
Advertisement