ಮಹಾರಾಷ್ಟ್ರ: ಮಾಲೆಗಾಂವ್ ಉಪಮೇಯರ್ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ; ಭುಗಿಲೆದ್ದ ವಿವಾದ!

ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳು ಕಾಣೆಯಾಗಿವೆ.
ಮಹಾರಾಷ್ಟ್ರ: ಮಾಲೆಗಾಂವ್ ಉಪಮೇಯರ್ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ; ಭುಗಿಲೆದ್ದ ವಿವಾದ!
Updated on

ನವದೆಹಲಿ: ಮಾಲೆಗಾಂವ್ ಉಪಮೇಯರ್ ಮತ್ತು ಸಮಾಜವಾದಿ ಪಕ್ಷದ ನಾಯಕಿ ಶಾನ್-ಎ-ಹಿಂದ್ ನಿಹಾಲ್ ಅಹ್ಮದ್ ತಮ್ಮ ಅಧಿಕೃತ ಕೊಠಡಿಯಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್, ರಾಷ್ಟ್ರಪತಿ ಅಥವಾ ಪ್ರಧಾನಿಗಳ ಫೋಟೋ ನೇತು ಹಾಕುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಫೋಟೋವನ್ನು ನೇತು ಹಾಕಲಾಗಿದ್ದು ಇದು ಪ್ರಮುಖ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಫೋಟೋ ಮತ್ತು ಅದರ ಜೊತೆಗಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದಂತೆ ಶಿಂಧೆ ಬಣದ ಶಿವಸೇನಾ ಮತ್ತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಜೈ ಹಿಂದ್ ಅವರು ಮಾಲೆಗಾಂವ್ ಉಪಮೇಯರ್ ಶಾನ್-ಎ-ಹಿಂದ್ ನಿಹಾಲ್ ಅಹ್ಮದ್ ಅವರ ಕೊಠಡಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ವಿರೋಧ ಪಕ್ಷಗಳ ಮೇಲೆ ತೀವ್ರ ದಾಳಿ ನಡೆಸಿದ್ದಾರೆ. ಮಾಲೆಗಾಂವ್‌ನ ಉಪಮೇಯರ್ ಶಾನ್-ಎ-ಹಿಂದ್ ಹಿಂದೂಗಳನ್ನು ದ್ವೇಷಿಸುತ್ತಿದ್ದ ಟಿಪ್ಪು ಸುಲ್ತಾನನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳು ಕಾಣೆಯಾಗಿವೆ. ನಮ್ಮ ನಿಜವಾದ ವೀರರಿಗೆ ಮಾಡಿದ ದೊಡ್ಡ ಅವಮಾನ... ಅವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಐಎಂಐಎಂ ಮಹಾರಾಷ್ಟ್ರವನ್ನು ಹಸಿರಾಗಿಸಲು ಬಯಸುತ್ತದೆ. ಇಸ್ಲಾಂ ಪಕ್ಷಕ್ಕೆ ಟಿಪ್ಪು ಸುಲ್ತಾನ್ ಅಂಬೇಡ್ಕರ್‌ಗಿಂತ ದೊಡ್ಡವರು. ಕಾಂಗ್ರೆಸ್ ಇದು ಮುಸ್ಲಿಂ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಅವರ ಆದರ್ಶಗಳು ಬಾಬರ್, ಘಜ್ನವಿ, ಮೊಘಲರು ಮತ್ತು ಟಿಪ್ಪು ಸುಲ್ತಾನ್... ಅವರಿಗೆ, ಎಪಿಜೆ ಅಬ್ದುಲ್ ಕಲಾಂ ಇಲ್ಲ, ರಾಷ್ಟ್ರಪತಿ ದ್ರೌಪದಿ ಮುರ್ಮು ಇಲ್ಲ, ಪಟೇಲ್ ಇಲ್ಲ, ಮಹಾತ್ಮ ಗಾಂಧಿ ಇಲ್ಲ.. ಎಂದು ಹೇಳಿದ್ದಾರೆ.

ಮಹಾರಾಷ್ಟ್ರ: ಮಾಲೆಗಾಂವ್ ಉಪಮೇಯರ್ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ; ಭುಗಿಲೆದ್ದ ವಿವಾದ!
ಬಾಬರ್‌ನ ಗೌರವಿಸಿ ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಎಂದ ಉಪಮೇಯರ್

ಮತ್ತೊಂದೆಡೆ ಶಾನ್-ಎ-ಹಿಂದ್ ಈ ಫೋಟೋವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ. ಟಿಪ್ಪು ಸುಲ್ತಾನ್ 'ಸ್ವಾತಂತ್ರ್ಯ ಹೋರಾಟಗಾರ' ಆಗಿದ್ದರಿಂದ ಅದನ್ನು ಪ್ರದರ್ಶಿಸಲು ಯಾವುದೇ ಅಭ್ಯಂತರವಿಲ್ಲ ಎಂದು ವಾದಿಸುತ್ತಾರೆ. ಟಿಪ್ಪು ಸುಲ್ತಾನ್ ಭಾರತದ ಸ್ವಾತಂತ್ರ್ಯ ಹೋರಾಟಗಾರ, ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ... ಅವರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದಾಗ ಬ್ರಿಟನ್ ಕೂಡ ಅವರನ್ನು ಹೊಗಳಿತು. ಅವರಿಗೆ ವೈದ್ಯಕೀಯದಲ್ಲಿ ಎಷ್ಟು ಜ್ಞಾನವಿತ್ತು ಎಂದರೆ ಜಗತ್ತಿಗೆ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ತಿಳಿದಿಲ್ಲದಿದ್ದಾಗ, ಟಿಪ್ಪು ಸುಲ್ತಾನ್ ತನ್ನ ಸೈನಿಕರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದರು. ಟಿಪ್ಪು ಕ್ಷಿಪಣಿ ಜನಕ, ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಸುಲ್ತಾನ. ಆದ್ದರಿಂದ, ಇದು ಆಕ್ಷೇಪಣೆಯ ವಿಷಯ ಎಂದು ವಾದಿಸಿದರು.

ಸಮಾಜವಾದಿ ಪಕ್ಷದ ಕಾರ್ಪೊರೇಟರ್ ಶಾನ್-ಎ-ಹಿಂದ್ ನಿಹಾಲ್ ಅಹ್ಮದ್ ಅವರನ್ನು ಇಸ್ಲಾಂ ಪಕ್ಷ ಮತ್ತು ಸಮಾಜವಾದಿ ಪಕ್ಷದ ಮೈತ್ರಿಕೂಟವು ಮಾಲೆಗಾಂವ್ ಮುನ್ಸಿಪಲ್ ಕಾರ್ಪೊರೇಷನ್‌ನ ಉಪ ಮೇಯರ್ ಆಗಿ ಆಯ್ಕೆ ಮಾಡಿತು. 84 ಸ್ಥಾನಗಳ ಸದನದಲ್ಲಿ ಈ ಮೈತ್ರಿಕೂಟ 43 ಮತಗಳನ್ನು ಗಳಿಸಿತು. ಇಸ್ಲಾಂ ಪಕ್ಷದ ಶೇಖ್ ನಸ್ರೀನ್ ಖಾಲಿದ್ ಮೇಯರ್ ಆಗಿ ಆಯ್ಕೆಯಾದರು. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಕೂಡ ಶಾನ್-ಎ-ಹಿಂದ್ ಅವರನ್ನು ಬೆಂಬಲಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com