ದೆಹಲಿ ಕಾರು ಸ್ಫೋಟ: ಯಾಸಿರ್ ಅಹ್ಮದ್ ದಾರ್‌ನನ್ನು ಕರೆತಂದು ದಕ್ಷಿಣ ಕಾಶ್ಮೀರದಲ್ಲಿ NIA ಶೋಧ!

"ವೈಟ್ ಕಾಲರ್' ಭಯೋತ್ಪಾದಕ ಗುಂಪಿನೊಂದಿಗೆ ನಂಟಿಗೆ ಸಂಬಂಧಿಸಿದಂತೆ ಅಹ್ಮದ್ ನನ್ನು ಬಂಧಿಸಲಾಗಿತ್ತು.
Casual Images
ಸಾಂದರ್ಭಿಕ ಚಿತ್ರ
Updated on

ದಕ್ಷಿಣ ಕಾಶ್ಮೀರ: ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10 ರಂದು ನಡೆದಿದ್ದ ಕಾರು ಸ್ಫೋಟದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್ ಪಿಎಫ್ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಗಳಲ್ಲಿ ಒಬ್ಬನಾದ ಯಾಸಿರ್ ಅಹ್ಮದ್ ದಾರ್‌ನನ್ನು ಕರೆತಂದು ಎನ್ ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು ಎಂದು ಅವರು ಹೇಳಿದ್ದಾರೆ.

"ವೈಟ್ ಕಾಲರ್' ಭಯೋತ್ಪಾದಕ ಗುಂಪಿನೊಂದಿಗೆ ನಂಟಿಗೆ ಸಂಬಂಧಿಸಿದಂತೆ ಅಹ್ಮದ್ ನನ್ನು ಬಂಧಿಸಲಾಗಿತ್ತು.

Casual Images
Operation Aaghat 3.0: ದೆಹಲಿಯಲ್ಲಿ ಖಾಕಿ ಭರ್ಜರಿ ಕಾರ್ಯಾಚರಣೆ; ಒಂದೇ ದಿನ 285 ಮಂದಿ ಬಂಧನ, ರಾಶಿ ರಾಶಿ ಶಸ್ತ್ರಾಸ್ತ್ರ-ಮಾದಕ ವಸ್ತು ವಶ!

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಪದಪವನ್ ಪ್ರದೇಶ ಮತ್ತು ಪುಲ್ವಾಮಾದ ಪಾಂಪೋರ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿನ ಕೆಲವು ಅಡಗುತಾಣಗಳ ಬಗ್ಗೆ ಪ್ರಕರಣದ ಒಂಬತ್ತನೇ ಆರೋಪಿ ದಾರ್ ವಿಚಾರಣೆ ವೇಳೆ ಮಾಹಿತಿ ನೀಡಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆತನನ್ನು ಕರೆತಂದು ಶೋಧ ನಡೆಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com