BMC ಚುನಾವಣೆಗೆ ಮುನ್ನಾ ದಿನ ಮುಂಬಾದೇವಿ ದೇವಸ್ಥಾನಕ್ಕೆ ಠಾಕ್ರೆ ಬ್ರದರ್ಸ್​ ಭೇಟಿ!

ಮುಂಬೈನ ಪೋಷಕ ದೇವತೆ ಎಂದು ಪೂಜಿಸಲ್ಪಡುವ ಮುಂಬಾದೇವಿಗೆ ಪ್ರಾರ್ಥನೆ ಸಲ್ಲಿಸಲು ಸೋದರಸಂಬಂಧಿಗಳು ತಮ್ಮ ಪತ್ನಿಯರು ಮತ್ತು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು.
Thackeray cousins visit Mumbadevi temple ahead of BMC polls
ಠಾಕ್ರೆ ಬ್ರದರ್ಸ್​
Updated on

ಮುಂಬೈ: ನಿರ್ಣಾಯಕ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ(BMC)ಗೆ ಒಂದು ದಿನ ಮೊದಲು, ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಅವರು ಬುಧವಾರ ಇಲ್ಲಿನ ಐತಿಹಾಸಿಕ ಮುಂಬಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮುಂಬೈನ ಪೋಷಕ ದೇವತೆ ಎಂದು ಪೂಜಿಸಲ್ಪಡುವ ಮುಂಬಾದೇವಿಗೆ ಪ್ರಾರ್ಥನೆ ಸಲ್ಲಿಸಲು ಸೋದರಸಂಬಂಧಿಗಳು ತಮ್ಮ ಪತ್ನಿಯರು ಮತ್ತು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮುಂಬೈಯನ್ನು ಉಳಿಸಿಕೊಳ್ಳಲು ಒಟ್ಟಾಗಿ ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ ಎಂದು ಠಾಕ್ರೆ ಸೋದರಸಂಬಂಧಿಗಳು ಹೇಳಿಕೊಂಡಿರುವುದರಿಂದ ಈ ಭೇಟಿ ಹೆಚ್ಚು ಸಾಂಕೇತಿಕವಾಗಿದೆ.

Thackeray cousins visit Mumbadevi temple ahead of BMC polls
BMC Election: ಉದ್ಧವ್-ರಾಜ್ ನಡುವಿನ 'ಸ್ನೇಹ' MVA ನಲ್ಲಿ ಬಿರುಕು? ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆ!

ಶಿವಸೇನೆ(ಯುಬಿಟಿ) ಸಂಸದರಾದ ಅನಿಲ್ ದೇಸಾಯಿ, ಸಂಜಯ್ ರಾವತ್ ಮತ್ತು ಅರವಿಂದ್ ಸಾವಂತ್ ಕೂಡ ದೇವಸ್ಥಾನದಲ್ಲಿ ಠಾಕ್ರೆ ಸೋದರಸಂಬಂಧಿಗಳೊಂದಿಗೆ ಹಾಜರಿದ್ದರು.

ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಶುಕ್ರವಾರ ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com